ನವದೆಹಲಿ: ಕಳೆದ ಒಂದು ವರ್ಷದಲ್ಲಿ ಭ್ರಷ್ಟಾಚಾರ ಎಸಗಿದ ಶಂಕೆಯ ಮೇರೆಗೆ ಕೇಂದ್ರ ಸರ್ಕಾರದ 2,200 ಅಧಿಕಾರಿಗಳ ಮೇಲೆ ಸಿಬಿಐ ಕಣ್ಗಾವಲು ಇರಿಸಿದೆ, ಇದರಲ್ಲಿ 101 ಮಂದಿಯ ವಿರುದ್ಧ ಎಫ್ಐಆರ್ ದಾಖಲು ಮಾಡಲಾಗಿದೆ ಎಂದು ಸಿಬಿಐ ಮುಖ್ಯಸ್ಥ ಅನಿಲ್ ಸಿನ್ಹಾ ತಿಳಿಸಿದ್ದಾರೆ.
ಕಣ್ಗಾವಲು ಇರಿಸಿದ ಹಿನ್ನಲೆಯಲ್ಲಿ 2014 ರಲ್ಲಿ ಪ್ರಕರಣಗಳ ದಾಖಲು ಪ್ರಮಾಣ ಶೇ.94 ರಷ್ಟು ಏರಿಕೆಯಾಗಿದೆ. ಅಧಿಕಾರಿ ಲಂಚ ಪಡೆದಿರುವುದು ಸ್ಪಷ್ಟವಾದಾಗ ಮಾತ್ರ ಪ್ರಕರಣವನ್ನು ದಾಖಲು ಮಾಡಲಾಗುತ್ತದೆ ಎಂದು ಅವರು ಹೇಳಿದ್ದಾರೆ.
ಜನರ ಮನೋಭಾವನೆ ಭ್ರಷ್ಟಾಚಾರದ ವಿರುದ್ಧವಾಗಿದೆ, ಅವರ ಮನೋಭಾವನೆಗೆ ಸಿಬಿಐ ಸ್ಪಂದಿಸದೇ ಇದ್ದರೆ ಬೇರೆ ಯಾರು ಸ್ಪಂದಿಸುತ್ತಾರೆ ಎಂದು ಅವರು ಪ್ರಶ್ನಿಸಿದ್ದಾರೆ.
ಸಿನ್ಹಾ ಸಿಬಿಐ ಮುಖ್ಯಸ್ಥರಾಗಿ 14 ತಿಂಗಳನ್ನು ಪೂರೈಸಿದ್ದಾರೆ. ಈ ವರ್ಷ ಸಿಬಿಐ ವಿವಿಧ ಪ್ರಕರಣಗಳಿಗೆ ಸಂಬಂಧಿಸಿದಂತೆ 1,044 ಚಾರ್ಜ್ಶೀಟ್ಗಳನ್ನು ದಾಖಲು ಮಾಡಿದ್ದು, ಇದು ಕಳೆದ 5 ವರ್ಷದಲ್ಲೇ ಅತೀ ಹೆಚ್ಚು ಎನ್ನಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.