ಕಣ್ಣೂರು: ಕೇರಳದ ಕಣ್ಣೂರಿನಲ್ಲಿರುವ ಬಿಜೆಪಿ ಕಛೇರಿಯ ಮೇಲೆ ದುಷ್ಕರ್ಮಿಗಳು ಬುಧವಾರ ಕಚ್ಛಾ ಬಾಂಬ್ನ್ನು ಎಸೆದಿದ್ದಾರೆ.
ಆರ್ಎಸ್ಎಸ್ ಸ್ವಯಂಸೇವಕನನ್ನು ಆತನ ಮನೆಗೆ ನುಗ್ಗಿ ದುಷ್ಕರ್ಮಿಗಳು ಕೊಂದ ಮರು ದಿನವೇ ಈ ಘಟನೆ ನಡೆದಿದ್ದು, ಇದರ ಹಿಂದೆಯೂ ಸಿಪಿಎಂ ಪುಂಡರ ಕೈವಾಡವಿದೆ ಎಂದು ಶಂಕಿಸಲಾಗಿದೆ.
ಕಣ್ಣೂರಿನ ತಲಸ್ಸೇರಿರ ಬಿಜೆಪಿ ಕಛೇರಿ ಮೇಲೆ ಮಧ್ಯ ರಾತ್ರಿಯ ವೇಳೆ ಕಚ್ಛಾ ಬಾಂಬ್ ಎಸೆಯಲಾಗಿದೆ. ಬಾಂಬ್ ನಿಷ್ಕ್ರೀಯ ದಳವನ್ನು ಕರೆಸಿ ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ.
ಕಣ್ಣೂರಿನಲ್ಲಿ ಆರ್ಎಸ್ಎಸ್ ಸದಸ್ಯ 27ವರ್ಷದ ಸುಜೀತ್ ಎಂಬಾತನನ್ನು ಕೊಲೆ ಮಾಡಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ 8ಸಿಪಿಎಂ ಕಾರ್ಯಕರ್ತರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.