ನವದೆಹಲಿ; ಜೆಎನ್ಯುನ ದೇಶದ್ರೋಹಿ ವಿದ್ಯಾರ್ಥಿಗಳು ಈ ದೇಶದ ಬಗ್ಗೆ ಕೂಗಿದ ಘೋಷಣೆ ಲಕ್ಷಾಂತರ ದೇಶಭಕ್ತ ಭಾರತೀಯರನ್ನು ಘಾಸಿಗೊಳಿಸಿದೆ. ಈ ನೆಲದಲ್ಲೇ ಹುಟ್ಟಿ, ಈ ನೆಲದ ಅನ್ನ, ನೀರು ಕುಡಿದು, ಸವಲತ್ತು, ಸೌಲಭ್ಯಗಳನ್ನು ಬಾಚಿಕೊಂಡು ಈ ನೆಲದ ವಿರುದ್ಧವೇ ಸಮರ ಸಾರಿರುವುದು ನಿಜಕ್ಕೂ ಈ ದೇಶದ ದುರಂತ.
ಈ ದೇಶದ್ರೋಹಿ ವಿದ್ಯಾರ್ಥಿಗಳಿಗೆ ಮನಮುಟ್ಟುವ ಕವಿತೆಯ ಮೂಲಕ ಒಲಿಂಪಿಕ್ ಪದಕ ವಿಜೇತ ಕುಸ್ತಿಪಟು ಯೋಗೇಶ್ವರ್ ದತ್ತ್ ತಿರುಗೇಟು ನೀಡಿದ್ದಾರೆ. ಅವರ ಕವಿತೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಭಾರತೀಯರ ಮನ ಮಿಡಿಯುವಂತೆ ಮಾಡಿದೆ.
ಫೇಸ್ಬುಕ್ ಮೂಲಕ ಕವಿತೆಯನ್ನು ಅವರು ಪೋಸ್ಟ್ ಮಾಡಿದ್ದು, ಅದರಲ್ಲಿ ಅವರು ದೇಶದ್ರೋಹಿಗಳನ್ನು ಮಹಮ್ಮದ್ ಘಜ್ನಿಗೆ ಹೋಲಿಸಿದ್ದಾರೆ. ಅಲ್ಲದೇ ಘೊಷಣೆಗಳ ಮೂಲಕ ದೇಶಕ್ಕೆ ಅಪಮಾನ ಮಾಡುವವರ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಅವರು ಪ್ರಶ್ನಿಸಿದ್ದಾರೆ.
ಘಜ್ನಿಯ ರಕ್ತ ನಿಮ್ಮಲ್ಲಿ ಹರಿಯುತ್ತಿದೆ ಅದಕ್ಕಾಗಿ ಅಫ್ಜಲ್ನ ಗುಣಗಾನ ಮಾಡುತ್ತಿದ್ದೀರಿ. ಅಫ್ಜಲ್ನನ್ನು ಹುತಾತ್ಮ ಎನ್ನುವ ನೀವು ಸಿಯಾಚಿನ್ ಹುತಾತ್ಮ ಯೋಧ ಹನುಮಂತಪ್ಪರನ್ನು ಏನೆಂದು ಕರೆಯುತ್ತೀರಿ, ತಾಯಿಯ ವಿರುದ್ಧವೇ ಹೋರಾಡಿ ಯಾವ ಪಂದ್ಯವನ್ನು ನೀವು ಜಯಿಸುತ್ತೀರಿ, ಯಾವ ದೇಶದ ಪರ ಘೋಷಣೆ ಕೂಗುತ್ತಿದ್ದೀರಿ ಆ ದೇಶದಲ್ಲಿ ನಿಮ್ಮನ್ನು ಕೇವಲ ಕಾಫಿರ್ ಎಂದು ಕರೆಯುತ್ತಾರೆ. ಭಾರತವನ್ನು ಬರ್ಬಾದ್ ಮಾಡುವಷ್ಟು ತಾಕತ್ತು ನಿಮ್ಮ ಬಳಿ ಇಲ್ಲ, ಭಗತ್ ಸಿಂಗ್, ಆಜಾದ್ ಅಂತವರಿಗೆ ನಮ್ಮ ದೇಶದಲ್ಲಿ ಕಮ್ಮಿಯಿಲ್ಲ. ಈ ದೇಶ ನಮ್ಮದು, ನಿಮ್ಮದು, ಎಲ್ಲರದ್ದು ಇದರ ಸಮ್ಮಾನ ಮಾಡಬೇಕಿದೆ. ಜನ್ಮ ಪಡೆದ ಈ ನೆಲದ ಬಗ್ಗೆ ಅಭಿಮಾನವಿರಲಿ. ಜೈ ಹಿಂದ್ ಎಂದು ಯೋಗೇಶ್ವರ್ ಕವಿತೆಯಲ್ಲಿ ಬರೆದಿದ್ದಾರೆ.
ಅವರು ಬರೆದಿರುವ ಸಾಲುಗಳು ಹೀಗಿವೆ :
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.