ನವದೆಹಲಿ: ಜವಹಾರ್ ಲಾಲ್ ವಿಶ್ವವಿದ್ಯಾನಿಲಯದಲ್ಲಿ ನಡೆದ ಉಗ್ರ ಅಫ್ಜಲ್ ಗುರು ಪರವಾದ ಕಾರ್ಯಕ್ರಮ ಪೂರ್ವ ನಿಯೋಜಿತವಾದುದ್ದು, ತಿಂಗಳ ಮುಂಚೆಯೇ ಇದರ ಬಗ್ಗೆ ಯೋಜನೆ ರೂಪಿಸಲಾಗಿತ್ತು ಎಂಬ ವಿಷಯ ಇದೀಗ ಬಹಿರಂವಾಗಿದೆ.
ಜೆಎನ್ಯು ವಿದ್ಯಾರ್ಥಿ ಉಮರ್ ಖಲೀದ್ ಎಂಬಾತ ಈ ಕಾರ್ಯಕ್ರಮವನ್ನು ಆಯೋಜನೆ ಮಾಡಿದ್ದ, ಕಾರ್ಯಕ್ರಮಕ್ಕೂ ಎರಡು ದಿನಗಳ ಮುನ್ನ ಅಂದರೆ ಫೆ.7ರಂದು ಕಾಶ್ಮೀರದ 10 ಮಂದಿ ಜೆಎನ್ಯು ಆವರಣದೊಳಕ್ಕೆ ಪ್ರವೇಶ ಮಾಡಿದ್ದರು ಎಂದು ವರದಿಗಳು ತಿಳಿಸಿವೆ.
ಖಲೀದ್ ಇಂತಹ ಕಾರ್ಯಕ್ರಮವನ್ನು ತಿಂಗಳು ಪೂರ್ತಿ ಆಚರಿಸಲು ಉದ್ದೇಶಿಸಿದ್ದ ಎನ್ನಲಾಗಿದ್ದ. ಆತನ ಈ ಯೋಜನೆ ಜೆಎನ್ಯು ಆವರಣದಲ್ಲಿ ವಿದ್ಯಾರ್ಥಿ ಗುಂಪುಗಳ ನಡುವಣ ಜಟಾಪಟಿಗೆ ಕಾರಣವಾಗಿತ್ತು.
ಖಲೀದ್ ಈಗ ದೆಹಲಿ ಪೊಲೀಸರಿಗೆ ಬೇಕಾದ ಆರೋಪಿಯಾಗಿದ್ದಾನೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.