ನವದೆಹಲಿ: 35 ಅಡಿ ಆಳದ ಹಿಮಪಾತದಿಂದ ಜೀವಂತವಾಗಿ ಬಂದು ಯೋಧ ಹನುಮಂತಪ್ಪ ಕೊಪ್ಪದ್ ಅವರು ಪವಾಡ ಮಾಡಿದ್ದಾರೆ. ಆದರೆ ಅವರ ಈ ಪವಾಡಕ್ಕೆ ಕಾರಣವಾಗಿದ್ದು ಹಿಮದ ಅಡಿಯಲ್ಲಿದ್ದ ಗಾಳಿ ಚೀಲ.
35 ಅಡಿ ಆಳದ ಮಂಜಿನ ಗಾಳಿ ಚೀಲದೊಳಗೆ ಹನುಮಂತಪ್ಪ ಬಿದ್ದಿದ್ದರು, ಅಲ್ಲಿ ಅವರಿಗೆ ತುಸು ಪ್ರಮಾಣದ ಆಮ್ಲಜನಕ ದೊರಕುತ್ತಿತ್ತು. ಇದೇ ಕಾರಣದಿಂದ ಅವರು ಆರು ದಿನಗಳ ಕಾಲ ಹಿಮದ ರಾಶಿಯೊಳಗೆ ಜೀವಂತವಾಗಿದ್ದರು ಎಂದು ಸೇನಾ ಮೂಲಗಳು ತಿಳಿಸಿವೆ. ಆದರೂ 6 ದಿನಗಳ ನಂತರ ಯೋಧ ಸಿಕ್ಕಿದ್ದು ಪವಾಡವೇ ಎಂದಿದ್ದಾರೆ. ಯೋಧನ ಆತ್ಮಸ್ಥೈರ್ಯ ಕೂಡಾ ಈ ನಿಟ್ಟಿನಲ್ಲಿ ಪ್ರಮುಖ ಕಾರಣ ಎನ್ನಲಾಗಿದೆ.
ಫೆ. 3 ರಿಂದ ಸಿಯಾಚಿನ್ ಯೋಧರು ಕಾಣೆಯಾದ ಸಂದರ್ಭದಿಂದ 150-200 ಸಿಬ್ಬಂದಿಗಳು ಇವರ ಪತ್ತೆಗೆ ಕಾರ್ಯಾಚರಣೆ ಆರಂಭಿಸಿದ್ದರು. ಡಾಟ್ ಮತ್ತು ಮಿಸಾ ಎಂಬ ಎರಡು ಸ್ನಿಫರ್ ನಾಯಿಗಳು, ಅತ್ಯಾಧುನಿಕ ಸಲಕರಣೆ, ಸ್ನೋ ಕಟ್ಟಿಂಗ್ ಸಲಕರಣೆ, ವೈದ್ಯಕೀಯ ಸಲಕರಣೆ, ಡೊಪ್ಲರ್ ರಾಡರ್, ಥರ್ಮಲ್ ಡಿಟೆಕ್ಟರ್ಗಳ ಮೂಲಕ ರಕ್ಷಣಾ ಕಾರ್ಯಾಚರಣೆ ನಡೆಸಲಾಗಿದೆ.
ಆದರೆ ಹನುಮಂತಪ್ಪ ಒಬ್ಬರನ್ನು ಹೊರತಪಡಿಸಿ ಬೇರೆ ಯಾವ ಯೋಧರು ಕೂಡ ಪತ್ತೆಯಾಗಿಲ್ಲ, ಅವರೆಲ್ಲ ಮೃತರೆಂದು ಈಗಾಗಲೇ ಘೋಷಣೆ ಮಾಡಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.