ನವದೆಹಲಿ: ಫೇರ್ನೆಸ್ ಕ್ರೀಮ್ಗಳ ಬಗ್ಗೆ ಜಾಹೀರಾತು ನೀಡುವಾಗ ಸೆಲೆಬ್ರಿಟಿಗಳು ತುಸು ಎಚ್ಚರಿಕೆ ವಹಿಸುವುದು ಅಗತ್ಯ. ಜಾಹೀರಾತಿನಲ್ಲಿ ನೀಡಲಾದ ಭರವಸೆಯನ್ನು ಉತ್ಪನ್ನ ಈಡೇರಿಸಲು ವಿಫಲವಾದರೆ ಸೂಕ್ತ ಕ್ರಮವನ್ನು ಎದುರಿಸಬೇಕಾದಿತು. ಮಲಯಾಳಂ ನಟ ಮಮ್ಮುಟ್ಟಿ ಈ ಅನುಭವವನ್ನು ಈಗಾಗಲೇ ಅನುಭವಿಸಿದ್ದಾರೆ.
ಕೇರಳದ ಅತಿ ಜನಪ್ರಿಯ ಸೋಪು ಇಂದುಲೇಖಾದ ಜಾಹೀರಾತಿನಲ್ಲಿ ಮಮ್ಮುಟ್ಟಿ ಇದ್ದಾರೆ, ಆದರೆ ಗ್ರಾಹಕರೊಬ್ಬರು ಈ ಸೋಪು ತನ್ನ ಪ್ರಭಾವದ ಬಗ್ಗೆ ತಪ್ಪು ಮಾಹಿತಿ ನೀಡಿ ಜನರ ಹಾದಿ ತಪ್ಪಿಸುತ್ತಿದೆ ಎಂದು ಗ್ರಾಹಕರ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ. ಕೊನೆಗೂ ಸೋಪು ಕಂಪನಿ ಅವರಿಗೆ 30 ಸಾವಿರ ರೂಪಾಯಿ ದಂಡ ತೆರಬೇಕಾಯಿತು.
ವಯನಾಡಿನ ನಿವಾಸಿ 67 ವರ್ಷದ ಕೆ.ಚಾತು ಎಂಬುವವರೇ ಸೋಪು ಕಂಪನಿಯಿಂದ 30 ಸಾವಿರ ಪರಿಹಾರ ಪಡೆದು ಇತಿಹಾಸ ಸೃಷ್ಟಿಸಿದವರು.
’ಇಂದುಲೇಖಾ ಬಳಸಿದವರು ಬಿಳಿಯಾಗುತ್ತಾರೆ ಎಂಬ ಭರವಸೆಯನ್ನು ಜಾಹೀರಾತಿನಲ್ಲಿ ನೀಡಲಾಗಿದೆ. ಮಮ್ಮುಟ್ಟಿ ದೊಡ್ಡ ಸ್ಟಾರ್, ಅವರ ಮೇಲೆ ನಮಗೆ ಭರವಸೆ ಇದೆ. ಇಂದುಲೇಖಾ ಬಳಸಿದ ಕಪ್ಪಗಿನವರು ಬಿಳಿಯಾಗುತ್ತಾರೆ ಎಂದು ಅವರು ಹೇಳಿದ್ದಾರೆ, ಹೀಗಾಗಿ ನಾನು ಸೇರಿದಂತೆ ಹಲವಾರು ಮಂದಿ ಇದನ್ನು ಬಳಕೆ ಮಾಡಿದೆವು. ಸುಧೀರ್ಘ ಸಮಯ ಬಳಸಿದರೂ ನಾನು ಬಿಳಿಯಾಗಿಲ್ಲ, ಈಗಲೂ ಕಪ್ಪಗೇ ಇದ್ದೇನೆ. ಈ ಜಾಹೀರಾತು ಬಿಳಿ ಸುಳ್ಳು ಹೇಳುತ್ತಿದೆ’ ಎಂದು ಚಾತು ದೂರಿದ್ದಾರೆ.
‘ಸೌಂದರ್ಯ ನಿಮ್ಮನ್ನು ಹುಡುಕಿಕೊಂಡು ಬರುತ್ತದೆ’ ಎಂಬುದು ಇಂದುಲೇಖಾ ಸೋಪಿನ ಟ್ಯಾಗ್ಲೈನ್. ಇದನ್ನು ಮಮ್ಮುಟ್ಟಿ ಜಾಹೀರಾತಿನಲ್ಲಿ ಹೇಳುತ್ತಾರೆ, ಗ್ರಾಹಕರ ನ್ಯಾಯಾಲಯ ದೂರಿನ ಮೇರೆಗೆ ಇವರನ್ನು ವಿಚಾರಣೆಗೊಳಪಡಿಸಿದೆ. ಆದರೆ ಕೋರ್ಟ್ನಲ್ಲಿ ವಿಚಾರಣೆ ಎದುರಿಸಲು ಒಪ್ಪದ ಇಂದುಲೇಖಾ ಚಾತು ಅವರಿಗೆ ಪರಿಹಾರ ಹಣ ನೀಡಿ ವಿಷಯವನ್ನು ಅಂತ್ಯಗೊಳಿಸಿದೆ.
ಜಾಹೀರಾತುಗಳ ನಿಖರತೆಯ ಬಗ್ಗೆ ನಡೆಯುತ್ತಿದ್ದ ಚರ್ಚೆ ಈ ಸನ್ನಿವೇಶದಿಂದ ಮತ್ತೆ ಜೀವ ಪಡೆದುಕೊಂಡಿದೆ. ಸೆಲೆಬ್ರಿಟಿಗಳು ಸೌಂದರ್ಯವರ್ಧಕ ಸೇರಿದಂತೆ ಯಾವುದೇ ವಸ್ತುಗಳ ಬಗ್ಗೆ ಜಾಹೀರಾತು ನೀಡುವ ಮುನ್ನ ತುಸು ಯೋಚಿಸುವುದು ಒಳಿತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.