ನವದೆಹಲಿ: ತನ್ನ ರಜಾ ದಿನಗಳನ್ನು ಕಳೆಯಲು ಭಾರತಕ್ಕಾಗಮಿಸಿದ್ದ ಎನ್ಆರ್ಐ ತಪನ್ ಮಿಶ್ರಾ ಡ್ಯಾಮೇಜ್ ಆಗಿದ್ದ ತನ್ನ ಸೂಟ್ಕೇಸ್ ಬದಲಾಯಿಸಲು ಏರ್ ಇಂಡಿಯಾಗೆ ಮನವಿ ಮಾಡಿ ಮಾಡಿ ಸುಸ್ತಾಗಿದ್ದರು. ಆದರೆ ಅವರ ಸಮಸ್ಯೆಗೆ ಕೊನೆಗೂ ಪರಿಹಾರ ದೊರಕ್ಕಿದ್ದು ಟ್ವಿಟರ್ ಮೂಲಕ.
ಕಿರಿಯ ವಿಮಾನಯಾನ ಸಚಿವಾಲಯದ ಅಧಿಕಾರಿಗಳ ಅಧಿಕೃತ ಟ್ವಿಟರ್ಗೆ ತಮ್ಮ ಸಮಸ್ಯೆಯ ದೂರನ್ನು ಟ್ಯಾಗ್ ಮಾಡಿದ ಇವರಿಗೆ ತಕ್ಷಣವೇ ಪ್ರತಿಕ್ರಿಯೆ ಸಿಕ್ಕಿದೆ.
ಹಿಂದೆ ಸೆಲೆಬ್ರಿಟಿಗಳ ಟ್ವಿಟರ್ಗಳಿಗೆ ಮಾತ್ರ ಸ್ಪಂದನೆ ದೊರೆಯುತ್ತಿತ್ತು, ಆದರೀಗ ಜನಸಾಮಾನ್ಯರು ಕೂಡ ಸಾಮಾಜಿಕ ಮಾಧ್ಯಮದ ಮೂಲಕ ದೂರು ನೀಡಿ ಸರ್ಕಾರದ ಸಹಾಯ ಪಡೆಯುತ್ತಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರ ಸಲಹೆ, ಸೂಚನೆಗಳ ಮೇರೆಗೆ ವಿಮಾನಯಾನ ಸಚಿವಾಲಯವು ಪ್ರಯಾಣಿಕರು ಟ್ವೀಟ್ಗಳ ಮೂಲಕ ನೀಡುವ ದೂರುಗಳಿಗೆ ಪ್ರತಿಕ್ರಿಯೆ ನೀಡಲಾರಂಭಿಸಿದೆ.
ರೈಲ್ವೆ ಸಚಿವ ಸುರೇಶ್ ಪ್ರಭು ಅವರು ಕಳೆದ ಎರಡು ತಿಂಗಳಿನಿಂದ ಪ್ರಯಾಣಿಕರ ದೂರುಗಳಿಗೆ ತ್ವರಿತ ಪರಿಹಾರ ನೀಡುತ್ತಿದ್ದಾರೆ. ವಿಮಾನಯಾನ ಸಚಿವಾಲಯದ ಸೇವಾ ಮತ್ತು ಹಣಕಾಸು ಸೇವಾ ನಿರ್ವಹಣೆ ಸಚಿವರು ವಿಮಾನ ಪ್ರಯಾಣಿಕರ ದೂರುಗಳಿಗೆ ಪ್ರತಿಕ್ರಿಯಿಸುವಂತೆ ನರೇಂದ್ರ ಮೋದಿ ತಮ್ಮ ಸಚಿವ ಸಂಪುಟದಲ್ಲಿ ಸೂಚಿಸಿದ್ದಾರೆ.
ರೈಲ್ವೆ ಪ್ರಯಾಣಿಕರ ಟ್ವಿಟರ್ ದೂರುಗಳ ಮೇಲ್ವಿಚಾರಣೆ ಮತ್ತು ಪರಿಹಾರ ಒದಗಿಸುವ ನಿಟ್ಟಿನಲ್ಲಿ ರೈಲ್ವೆ ಸಚಿವಾಲಯ 6 ಅಧಿಕಾರಿಗಳನ್ನು ನೇಮಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.