ನವದೆಹಲಿ: ದೇಶದಲ್ಲಿನ ನೂತನ ವಿಮಾನ ನಿಲ್ದಾಣಗಳಿಗೆ ನಾಯಕರ ಹೆಸರು ಇಡುವುದನ್ನು ನಿಲ್ಲಿಸಿ, ಆಯಾಯ ನಗರಗಳ ಹೆಸರನ್ನೇ ಇಡಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ.
ಸಚಿವ ಸಂಪುಟದ ಮುಂದೆ ಶೀಘ್ರದಲ್ಲೇ ಈ ಪ್ರಸ್ತಾವನೆ ಬರಲಿದ್ದು, ವಿಮಾನ ನಿಲ್ದಾಣದ ಸಮೀಪದ ನಗರಗಳ ಹೆಸರನ್ನೇ ಇಡುವ ಬಗ್ಗೆ ಪ್ರಸ್ತಾಪ ಮಾಡಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.
ಒಂದು ವೇಳೆ ನೂತನ ಪ್ರಸ್ತಾವನೆ ಜಾರಿಯಾದದ್ದೇ ಆದರೆ ರಾಜಕೀಯ ಪಕ್ಷಗಳು ನಮ್ಮ ನಾಯಕರ ಹೆಸರನ್ನು ಇಡಿ ಎಂದು ವಿಮಾನಯಾನ ಸಚಿವಾಲಯಕ್ಕೆ ದುಂಬಾಲು ಬೀಳುವುದು ತಪ್ಪಲಿದೆ. ದೇಶದ ಅನೇಕ ವಿಮಾನನಿಲ್ದಾಣಗಳಿಗೆ ನಾಯಕರ ಹೆಸರನ್ನೇ ಇಡಲಾಗಿದೆ.
ಪಂಜಾಬ್ ಸರ್ಕಾರ ತನ್ನಲ್ಲಿನ ವಿಮಾನ ನಿಲ್ದಾಣಕ್ಕೆ ಭಗತ್ ಸಿಂಗ್ ಹೆಸರಿಡಲು, ಕೇರಳ ತನ್ನ ವಿಮಾನ ನಿಲ್ದಾಣಕ್ಕೆ ಕಾಂಗ್ರೆಸ್ ಮುಖಂಡನೊಬ್ಬನ ಹೆಸರಿಡಲು ದುಂಬಾಲು ಬಿದ್ದಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.