ನವದೆಹಲಿ : ಸರ್ದಾರ್ ವಲ್ಲಭಭಾಯಿ ಪಟೇಲರು ಪ್ರಥಮ ಪ್ರಧಾನಿಯಾಗಿದ್ದರೆ ಒಳ್ಳೆಯದಿತ್ತು. ಆಗ ದೇಶದ ಚಿತ್ರಣವೇ ಬದಲಾಗಿರುತ್ತಿತ್ತು. ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಎಂ. ವೆಂಕಯ್ಯನಾಯ್ಡು ಹೇಳಿದರು.
ವಲ್ಲಭಭಾಯಿ ಪಟೇಲರ ೧೪೦ನೇ ಜನ್ಮ ದಿನಾಚರಣೆಯ ಕಾರ್ಯಕ್ರಮದಲ್ಲಿ ನಮನಗಳನ್ನರ್ಪಿಸಿ ಮಾತನಾಡಿದ ಅವರು, ‘ಸರದಾರ್ ಪಟೇಲರೇ ದೇಶದ ಪ್ರಥಮ ಪ್ರಧಾನಿಯಾಗಬೇಕಿತ್ತು. ಆದರೆ ಆದದ್ದೇ ಬೇರೆ. ಹೋಗಲಿ ಬಿಡಿ, ಹಳೆಯದನ್ನು ನೆನದು ಪ್ರಯೋಜನವಿಲ್ಲ. ರಾಷ್ಟ್ರದ ಏಕತೆಗಾಗಿ ಶ್ರಮಿಸಿದ ಪಟೇಲರ ಆದರ್ಶಗಳನ್ನು ನೆನೆದು ಆ ನಿಟ್ಟಿನಲ್ಲಿ ಹೆಜ್ಜೆಯನ್ನಿಡುವುದು ನಮ್ಮ ಕರ್ತವ್ಯ’ ಎಂದರು.
ಇಂದು ರಾಷ್ಟ್ರೀಯ ಏಕತಾ ದಿವಸ. ನಾವೆಲ್ಲರೂ ಸರದಾರ್ ವಲ್ಲಭಭಾಯಿ ಪಟೇಲರು ಹೇಳಿದ್ದನ್ನು, ಅವರ ಉಪದೇಶಗಳನ್ನು ಪಾಲಿಸುವುದು ಒಳ್ಳೆಯದು. ಅವರ ಜೀವನ ನಮ್ಮೆಲ್ಲರಿಗೂ ಸ್ಫೂರ್ತಿದಾಯಕವಾದುದು. ಅವರ ತತ್ವಾದರ್ಶಗಳನ್ನು ಅನುಸರಿಸಿದರೆ ಏಕತಾ ದಿವಸ ಅರ್ಥಪೂರ್ಣವಾಗುತ್ತದೆ.
ಇತಿಹಾಸ ಸರದಾರ್ ಪಟೇಲರಿಗೆ ನ್ಯಾಯವನ್ನೊದಗಿಸಲಿಲ್ಲ. ಆದರೆ ನಾವು ಅವರ ತತ್ವಗಳನ್ನು ನಮ್ಮ ಜೀವನದಲ್ಲಿ ಪಾಲಿಸಿ, ಅವರನ್ನು ಸದಾ ನೆನಪಿನಲ್ಲಿಡುವಂತೆ ಮಾಡಬೇಕು. ವಲ್ಲಭಭಾಯಿ ಪಟೇಲರು ಎಲ್ಲಾ ರಾಜ್ಯಗಳನ್ನು ಒಂದುಗೂಡಿಸಿ ದೇಶ ಏಕತೆಯಿಂದಿರಲು ಬಹಳಷ್ಟು ಶ್ರಮಿಸಿದವರು ಎಂದು ಹೇಳಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.