ಪಾಟ್ನಾ: ಬಿಹಾರದ ಮಹಾಮೈತ್ರಿ ವಿರುದ್ಧ ಹರಿಹಾಯ್ದಿರುವ ಪ್ರಧಾನಿ ನರೇಂದ್ರ ಮೋದಿ, ಈ ಪಕ್ಷಗಳು ಪ್ರಜಾತಂತ್ರ ವಿರೋಧಿಗಳಾಗಿದ್ದು, ಸೋಲಿನಿಂದ ಭಯಭೀತಗೊಂಡಿದ್ದಾರೆ ಎಂದಿದ್ದಾರೆ.
ಸೋಲಿನಿಂದ ಭಯಭೀತಗೊಂಡಿರುವ ಲಾಲೂ ಪ್ರಸಾದ್ ಯಾದವ್, ಸೋನಿಯಾ ಗಾಂಧಿ ಮತ್ತು ನಿತೀಶ್ ಕುಮಾರ್ ಅವರು ಇದೀಗ ತಾಂತ್ರಿಕರ ಬಳಿ ಸಲಹೆ ಪಡೆಯಲು ಹೋಗುತ್ತಿದ್ದಾರೆ, ಆದರೆ ಅದರಿಂದ ಅವರಿಗೆ ಚುನಾವಣೆ ಗೆಲ್ಲುವುದು ಸಾಧ್ಯವಾಗದು. ಇವರು ಯಾರೂ ಬಿಹಾರದ ಅಭಿವೃದ್ಧಿಗೆ ಶ್ರಮಿಸಿಲ್ಲ ಎಂದು ಮೋದಿ ಟೀಕಿಸಿದ್ದಾರೆ.
ಲೋಕತಂತ್ರದಲ್ಲಿ ನಂಬಿಕೆ ಇಲ್ಲದ ಇವರು, ತಂತ್ರ ಮಂತ್ರದಲ್ಲಿ ನಂಬಿಕೆಯಿಟ್ಟಿದ್ದಾರೆ. ತಮಗೆ ಜನತಂತ್ರ ಬೇಕೇ ಅಥವಾ ತಂತ್ರ ಮಂತ್ರ ಬೇಕೇ ಎಂಬುದನ್ನು ಬಿಹಾರದ ಜನತೆಯೇ ನಿರ್ಧಾರ ಮಾಡಲಿದ್ದಾರೆ ಎಂದರು.
ಬಿಹಾರಕ್ಕೆ ಈಗ ಅಭಿವೃದ್ಧಿಯ ಅಗತ್ಯವಿದೆ, ತಂತ್ರದಿಂದ ಅಭಿವೃದ್ಧಿ ಸಾಧ್ಯವಾಗದು. ಅಭಿವೃದ್ಧಿ ಮಾಡಿದವರ ಮೇಲೆ ಮಾತ್ರ ಜನ ನಂಬಿಕೆಯಿಡುತ್ತಾರೆ. ಇದೀಗ ಬಿಹಾರದ ಅದೃಷ್ಟವನ್ನು ಬದಲಾಯಿಸುವ ಅವಕಾಶ ಇಲ್ಲಿನ ಜನರಿಗೆ ಒದಗಿದೆ ಎಂದರು.
ನಿತೀಶ್ ಕುಮಾರ್ ಅವರು ತಾಂತ್ರಿಕನ ಸಲಹೆ ಪಡೆಯುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಇದು ೨೧ನೇ ಶತಮಾನದ ಜನರಿಗೆ ಬಲಿಷ್ಠ ಸಂದೇಶವನ್ನು ರವಾನಿಸಲಿದೆ ಎಂದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.