ಲಾಹೋರ್: ಕಾಶ್ಮೀರದಲ್ಲಿ ಭಯೋತ್ಪಾದನ ಕೃತ್ಯಗಳನ್ನು ನಡೆಸುವ ಸಲುವಾಗಿ 1990ರ ಸಂದರ್ಭ ಪಾಕಿಸ್ಥಾನ ಲಷ್ಕರ್-ಇ-ತೋಯ್ಬಾ ಉಗ್ರ ಸಂಘಟನೆಗೆ ಸಹಾಯ ಮಾಡಿದೆ ಮಾತ್ರವಲ್ಲ ತರಬೇತಿಯನ್ನೂ ನೀಡಿದೆ ಎಂದು ಅಲ್ಲಿನ ಮಾಜಿ ಸೇನಾಡಳಿತಗಾರ ಪರ್ವ್ಭೆಜ್ ಮುಶರಫ್ ಹೇಳಿಕೊಂಡಿದ್ದಾನೆ.
ಅಷ್ಟೇ ಅಲ್ಲದೇ ತಾಲಿಬಾನಿಗಳು, ಭಾರತದ ಮೇಲೆ ದಾಳಿ ನಡೆಸಿರುವ ಹಫೀಝ್ ಸಯೀದ್, ಝಾಕಿಉರ್ ರೆಹಮಾನ್ ಲಖ್ವಿಯಂತವರು ಆ ಸಂದರ್ಭದಲ್ಲಿ ರಾಷ್ಟ್ರ ನಾಯಕರ ಸ್ಥಾನಮಾನವನ್ನು ಪಡೆದುಕೊಂಡಿದ್ದಾರೆ ಎಂದಿದ್ದಾನೆ.
ಟಿವಿ ಚಾನೆಲ್ವೊಂದಕ್ಕೆ ಸಂದರ್ಶನ ನೀಡಿರುವ ಆತ, 1990ರಲ್ಲಿ ಕಾಶ್ಮೀರದಲ್ಲಿ ಸ್ವಾತಂತ್ರ್ಯ ಹೋರಾಟ ಆರಂಭವಾಯಿತು. ಆ ವೇಳೆ ಲಷ್ಕರ್ ಸೇರಿದಂತೆ ಇತರ 11 ರಿಂದ 12 ಸಂಘಟನೆಗಳು ರಚನೆಗೊಂಡವು. ಅವುಗಳಿಗೆ ನಾವು ಸಹಾಯ ಮಾಡಿದೆವು, ತರಬೇತಿ ನೀಡಿದೆವು. ಈ ಮೂಲಕ ಕಾಶ್ಮೀರದಲ್ಲಿ ಹೋರಾಡುವಂತೆ ಮಾಡಿದೆವು ಎಂದು ಮುಶರಫ್ ಹೇಳಿದ್ದಾನೆ.
ಕಾಶ್ಮೀರಿ ಸ್ವಾತಂತ್ರ್ಯ ಹೋರಾಟಗಾರರಾದ ಹಫೀಜ್ ಸಯೀದ್, ಲಖ್ವಿ ಆಗಿನ ನಮ್ಮ ಹೀರೋಗಳು. ಬಳಿಕ ಧಾರ್ಮಿಕ ಉಗ್ರತೆ ಭಯೋತ್ಪಾದನೆಯಾಗಿ ಹೊರಹೊಮ್ಮಿತು. ಈಗ ಅವರು ಅವರ ಸ್ವಂತ ಜನರನ್ನೇ ಕೊಲ್ಲುತ್ತಿದ್ದಾರೆ. ಇದನ್ನು ನಿಯಂತ್ರಿಸಬೇಕು ಮತ್ತು ಅಂತ್ಯಗೊಳಿಸಬೇಕು ಎಂದಿದ್ದಾನೆ.
ಅಷ್ಟೇ ಅಲ್ಲದೇ ತಾಲಿಬಾನಿಗಳಿಗೆ ತರಬೇತಿ ಅವರನ್ನು ರಷ್ಯಾ ವಿರುದ್ಧ ಹೋರಾಡಲು ಕಳುಹಿಸಿದ್ದೆವು. ತಾಲಿಬಾನ್, ಹಕ್ಕಾನಿ, ಒಸಮಾ ಬಿನ್ ಲಾದೆನ್ ಕೂಡ ನಮ್ಮ ಹೀರೋಗಳಾಗಿದ್ದರು. ಆದರೆ ಬಳಿಕ ವಿಲನ್ಗಳಾದರು ಎಂದಿದ್ದಾನೆ.
ಒಟ್ಟಿನಲ್ಲಿ ಭಯೋತ್ಪಾದಕ ಸಂಘಟನೆಗಳನ್ನು ನಾವೇ ಪಾಲನೆ, ಪೋಷಣೆ ಮಾಡಿ ಜಗತ್ತಿನಲ್ಲಿ ವಿಧ್ವಂಸಕ ಕೃತ್ಯಗಳನ್ನು ನಡೆಸಲು ಕಳುಹಿಸಿಕೊಟ್ಟಿದ್ದೇವೆ ಎಂಬುದನ್ನು ಪಾಕ್ ಮಾಜಿ ಅಧ್ಯಕ್ಷ ಒಪ್ಪಿಕೊಂಡಿದ್ದಾನೆ. ಈ ಮೂಲಕ ತನ್ನ ದೇಶದ ನೀಚ ಮುಖವನ್ನು ಬಯಲು ಮಾಡಿದ್ದೇನೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.