
ಪಾಟ್ನಾ: ಲಾಲೂ ಪ್ರಸಾದ್ ಯಾದವ್ ಅವರ ಪುತ್ರ ತೇಜಸ್ವಿ ಯಾದವ್ ಅವರು 2025 ರ ಬಿಹಾರ ಚುನಾವಣೆಗೆ ತಮ್ಮ ಹೆಗಲ ಮೇಲೆ ಬಹಳಷ್ಟು ಹೊಣೆ ಹೊತ್ತುಕೊಂಡು ಪಾದಾರ್ಪಣೆ ಮಾಡಿದ್ದರು. ಗೆಲುವನ್ನೂ ನಿರೀಕ್ಷಿಸಿದ್ದರು. ಆದರೆ, ಆರ್ಜೆಡಿ 40 ಸ್ಥಾನಗಳಿಗಿಂತ ಕಡಿಮೆ ಕುಸಿದಿದೆ. 2020 ರಲ್ಲಿ ಪಕ್ಷವು 75 ಸ್ಥಾನಗಳೊಂದಿಗೆ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು, ಆದರೆ ಈ ಬಾರಿ ದೊಡ್ಡ ಕುಸಿತ ಕಂಡಿದೆ. ಇದರಿಂದ ಬಿಹಾರದ ಮತದಾರರು ಇನ್ನೂ ಅವರಿಗೆ ಮುಖ್ಯಮಂತ್ರಿ ಕುರ್ಚಿಯನ್ನು ನೀಡಲು ಸಿದ್ಧರಿಲ್ಲ ಎಂಬುದು ಸ್ಪಷ್ಟಗೊಂಡಿದೆ.
ತೇಜಸ್ವಿ ಅವರು ಐದು ವರ್ಷಗಳ ಹಿಂದೆ ಮಾಡಿದಂತೆ ಉದ್ಯೋಗಗಳು ಮತ್ತು ನಿರುದ್ಯೋಗವನ್ನು ತಮ್ಮ ಪ್ರಚಾರದ ಕೇಂದ್ರವನ್ನಾಗಿ ಮಾಡಿಕೊಂಡರು. ಆಗ, ಅದು ಕೆಲಸ ಮಾಡಿತ್ತು. ಆದರೆ ಈ ಬಾರಿ ಸಂಪೂರ್ಣ ವಿಫಲಗೊಂಡಿದೆ. ಬಿಹಾರದಲ್ಲಿ ಉದ್ಯೋಗದ ಸಮಸ್ಯೆಯಿದ್ದರೂ ತೇಜಸ್ವಿ ಆ ಸಮಸ್ಯೆ ಹೋಗಲಾಡಿಸುತ್ತಾರೆ ಎಂಬುದನ್ನು ನಂಬಲೂ ಬಿಹಾರಿಗಳು ಸಿದ್ಧರಿರಲಿಲ್ಲ ಎಂಬುದು ಈಗ ಸಾಬೀತಾಗಿದೆ. ಅವರ ಪ್ರಚಾರದಲ್ಲಿ ಯಾವುದೇ ಹೊಸ ಆಲೋಚನೆಗಳು ಅಥವಾ ಯೋಜನೆಗಳು ಇರಲಿಲ್ಲ, ಹಿಂದಿನ ಸಾಲುಗಳನ್ನು ಪುನರಾವರ್ತನೆ ಮಾಡಿದ್ದು ಜನರನ್ನು ಬೇಸತ್ತುಹೋಗುವಂತೆ ಮಾಡಿತ್ತಯ. ಮತದಾರರು ಅವರನ್ನು ಸಮಸ್ಯೆಗಳನ್ನು ಎತ್ತಿ ತೋರಿಸುವ ವ್ಯಕ್ತಿಯಾಗಿ ನೋಡಿದರೇ ಹೊರತು ಅವುಗಳನ್ನು ಸರಿಪಡಿಸುವ ವ್ಯಕ್ತಿಯಾಗಿ ಅಲ್ಲ.
ನಿತೀಶ್ ಕುಮಾರ್ ಮಹಿಳೆಯರ ದೃಢ ನೆಲೆಯನ್ನು ನಿರ್ಮಿಸಿದ್ದಾರೆ ಮತ್ತು ತೇಜಸ್ವಿಗೆ ಅದನ್ನು ಭೇದಿಸಲು ಸಾಧ್ಯವಾಗಲಿಲ್ಲ. ನಿತೀಶ್ 25 ಲಕ್ಷ ಮಹಿಳೆಯರಿಗೆ 10,000 ರೂ.ಗಳನ್ನು ಹಸ್ತಾಂತರಿಸಿದರು. ಅದು ಅವರ ಖ್ಯಾತಿಯನ್ನು ಬಲಪಡಿಸಿತು.
ಆರ್ಜೆಡಿಯ ಹಳೆಯ ಇಮೇಜ್ ಅನ್ನು ಅಳಿಸಿಹಾಕಲು ತೇಜಸ್ವಿ ಹೆಣಗಾಡಿದರು. ‘ಎ ಟು ಝಡ್’ ಪಕ್ಷವನ್ನು ಮರುಬ್ರಾಂಡ್ ಮಾಡಲು ಪ್ರಯತ್ನಿಸಿದರು, ಒಬಿಸಿಗಳು, ದಲಿತರು, ಯುವಕರು ಮತ್ತು ಮಹಿಳೆಯರನ್ನು ತಲುಪಲು ಪ್ರಯತ್ನಿಸಿದರು. ಆದರೆ ಲೆಕ್ಕಾಚಾರಗಳು ಹೊಂದಿಕೆಯಾಗಲಿಲ್ಲ. ಬಿಹಾರದ ಜಾತಿ ರಾಜಕೀಯವು ಹೆಚ್ಚು ವಿಶಾಲವಾದ ಒಕ್ಕೂಟವನ್ನು ಬಯಸುತ್ತದೆ ಮತ್ತು ಮತದಾರರು ಎಲ್ಲರನ್ನೂ ನಾಯಕನಾಗಿ ನೋಡಲು ಬಯಸುವುದಿಲ್ಲ. ಹೀಗಾಗಿ ತೇಜಸ್ವಿ ಯೋಜನೆ ತಲೆ ಕೆಳಗಾಯಿತು.
‘ಜಂಗಲ್ ರಾಜ್’ನ ನೆರಳು ಕೂಡ ಆರ್ಜೆಡಿಯನ್ನು ಮಂಕಾಗಿಸಿದೆ. ತೇಜಸ್ವಿ ಆಧುನಿಕ, ಸ್ವಚ್ಛವಾದ ಇಮೇಜ್ ಅನ್ನು ತೋರಿಸಲು ಎಷ್ಟೇ ಪ್ರಯತ್ನಿಸಿದರೂ, ಲಾಲು-ರಾಬ್ರಿ ವರ್ಷಗಳ ಭ್ರಷ್ಟಾಚಾರ ಜನರ ಮನಸ್ಸಲ್ಲಿ ಉಳಿದುಕೊಂಡಿವೆ. ಪ್ರತಿಸ್ಪರ್ಧಿಗಳು ಅದನ್ನು ಎತ್ತಿ ತೋರಿಸುತ್ತಲೇ ಇದ್ದಾರೆ ಮತ್ತು ಮತದಾರರು ನೆನಪಿಸಿಕೊಳ್ಳುತ್ತಲೇ ಇರುತ್ತಾರೆ. ಅನೇಕರಿಗೆ, ತೇಜಶ್ವಿಗೆ ಮತ ಹಾಕಿದರೆ ಭೂತಕಾಲ ಮತ್ತೆ ಮರುಕಳಿಸಬಹುದು ಎಂಬ ಭಯವೂ ಇದ್ದಂತೆ ಕಾಣುತ್ತದೆ.
2020 ರ ಅವರ ಓಟಕ್ಕೆ ಶಕ್ತಿ ತುಂಬಿದ ಅದೇ ಶಕ್ತಿ ಅಥವಾ ಒಗ್ಗಟ್ಟು ಆರ್ಜೆಡಿ ಮೈತ್ರಿಯಲ್ಲಿ ಈ ಬಾರಿ ಇರಲಿಲ್ಲ. ರಾಹುಲ್ ಗಾಂಧಿಯವರ ‘ಮತದಾತಾ ಅಧಿಕಾರ ಯಾತ್ರೆ’ ಹೆಚ್ಚು ಗಮನ ಸೆಳೆದು ಆರ್ಜೆಡಿಯ ಪ್ರಯತ್ನಗಳಿಂದ ಜನರನ್ನು ದೂರವಿಟ್ಟಂತೆ ಆಂತರಿಕ ಗೊಣಗಾಟ ಹೆಚ್ಚಾಯಿತು. ತೇಜಸ್ವಿಯವರ ಸ್ವಂತ ಪ್ರಚಾರವು ಚದುರಿಹೋಗಿ ಕೇಂದ್ರೀಕೃತವಾಗಿಲ್ಲದಂತೆ ಕಾಣುತ್ತಿತ್ತು. ಬಿಹಾರವನ್ನು ಮುನ್ನಡೆಸಲು ಅವರಿಗೆ ಸಾಂಸ್ಥಿಕ ಶಕ್ತಿಗಳಿವೆಯೇ ಎಂಬ ಅನುಮಾನಗಳು ಹೆಚ್ಚಾದವು.
ಅಂತಿಮವಾಗಿ ಇಂದಿನ ಫಲಿತಾಂಶ ನೋಡಿದರೆ ಬಿಹಾರದ ಸಂದೇಶ ಸರಳವಾಗಿದೆ. ಬಿಹಾರಿಗಳು ಸ್ಥಿರತೆಯನ್ನು ಬಯಸುತ್ತಾರೆ, ಪ್ರಯೋಗಗಳನ್ನಲ್ಲ. ತೇಜಸ್ವಿಯವರ ಸೋಲು ಕೇವಲ ರಾಜಕೀಯದ ಬಗ್ಗೆ ಅಲ್ಲ – ಮತದಾರರು ದಿಟ್ಟ ಭರವಸೆಗಳು ಮತ್ತು ಯುವ ಪ್ರಚೋದನೆಗಿಂತ ಅನುಭವ ಮತ್ತು ಭವಿಷ್ಯವನ್ನು ಬಯಸುತ್ತಾರೆ ಎಂಬುದರ ಸಂಕೇತವಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.



