
ನವದೆಹಲಿ: ಮುಹಮ್ಮದ್ ಯೂನಸ್ ನೇತೃತ್ವದ ಬಾಂಗ್ಲಾದೇಶದ ಮಧ್ಯಂತರ ಸರ್ಕಾರದ “ಹಿಂಸಾತ್ಮಕ ಮತ್ತು ಉಗ್ರಗಾಮಿ” ನೀತಿಗಳು ಭಾರತದೊಂದಿಗಿನ ಘರ್ಷಣೆಗೆ ಕಾರಣವಾಗಿದ್ದು, ಬಾಂಗ್ಲಾದ ಸಂವಿಧಾನವನ್ನು ಉಲ್ಲಂಘಿಸಿ ನಮ್ಮ ಪಕ್ಷದ ಮೇಲೆ ನಿಷೇಧ ಹೇರಿರುವ ಕಾರಣದಿಂದಾಗಿ ಅವಾಮಿ ಲೀಗ್ ಬೆಂಬಲಿಗರು ಮುಂಬರುವ ಚುನಾವಣೆಯಲ್ಲಿ ಮತ ಚಲಾಯಿಸುವುದಿಲ್ಲ ಎಂದು ಮಾಜಿ ಪ್ರಧಾನಿ ಶೇಖ್ ಹಸೀನಾ ಹೇಳಿದ್ದಾರೆ.
ಆಗಸ್ಟ್ 2024 ರಲ್ಲಿ ತಮ್ಮ ಸರ್ಕಾರದ ಪತನದ ನಂತರ ಭಾರತದಲ್ಲಿ ಸ್ವಯಂ-ಗಡಿಪಾರು ಸ್ಥಿತಿಯಲ್ಲಿ ವಾಸಿಸುತ್ತಿರುವ ಹಸೀನಾ, ಗುರುವಾರ ತಡರಾತ್ರಿ ಮಾಧ್ಯಮಗಳಿಗೆ ಇಮೇಲ್ ಮೂಲಕ ಪ್ರತಿಕ್ರಿಯೆ ನೀಡಿದ್ದಾರೆ. “ಯೂನಸ್ ತಮ್ಮ ಸರ್ಕಾರದಲ್ಲಿ ಉಗ್ರಗಾಮಿಗಳಿಗೆ ಪ್ರಾಯೋಜಕತ್ವ ನೀಡುತ್ತಿರುವುದು ಬಾಂಗ್ಲಾದೇಶ ಮತ್ತು ಭಾರತದ ನಡುವಿನ ಮೂಲಭೂತ ಸಂಬಂಧವನ್ನು ಹಾಳುಮಾಡುವ ಬೆದರಿಕೆಯಾಗಿದೆ” ಎಂದಿದ್ದಾರೆ.
ಅಲ್ಲದೇ ನನಗೆ ಸುರಕ್ಷಿತ ಆಶ್ರಯವನ್ನು ಒದಗಿಸಿದ್ದಕ್ಕಾಗಿ ಭಾರತೀಯರಿಗೆ ಕೃತಜ್ಞಳಾಗಿದ್ದೇನೆ ಎಂದಿದ್ದಾರೆ.
ಭಾರತವು ಬಾಂಗ್ಲಾದೇಶದ ಪ್ರಮುಖ ಮಿತ್ರ ರಾಷ್ಟ್ರವಾಗಿದ್ದು, ಬಾಂಗ್ಲಾದೇಶದ ಭದ್ರತೆ ಮತ್ತು ಸಮೃದ್ಧಿಯನ್ನು ಕಾಪಾಡಿಕೊಳ್ಳಬೇಕಾದರೆ ಅದು ಹಾಗೆಯೇ ಉಳಿಯಬೇಕು. ಭಾರತ ಮತ್ತು ಡಾ. ಯೂನಸ್ ಆಡಳಿತದ ನಡುವೆ ಘರ್ಷಣೆ ಇದ್ದರೆ, ಅದಕ್ಕೆ ಡಾ. ಯೂನಸ್ ಅವರ ಆಳ್ವಿಕೆಯಲ್ಲಿ ರೂಪುಗೊಳ್ಳುತ್ತಿರುವ ಅಸ್ತವ್ಯಸ್ತ, ಹಿಂಸಾತ್ಮಕ ಮತ್ತು ಉಗ್ರಗಾಮಿ ನೀತಿಗಳು ಕಾರಣ ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.



