
ನವದೆಹಲಿ: ಎಂಟು ತಿಂಗಳ ಹಿಂದೆ ದೆಹಲಿ ಚುನಾವಣೆಯ ಸಂದರ್ಭದಲ್ಲಿ ಭಾರೀ ಸುದ್ದಿ ಮಾಡಿದ್ದ ಅರವಿಂದ್ ಕೇಜ್ರಿವಾಲ್ ಅವರ ಶೀಷ್ಮಹಲ್ ಈಗ ಮತ್ತೆ ಮುನ್ನೆಲೆಗೆ ಬಂದಿದೆ. ಆದರೆ ಈ ಬಾರಿ ‘ಶೀಷ್ಮಹಲ್’ 2.o ಸದ್ದು ಮಾಡುತ್ತಿದೆ.
ಚಂಡೀಗಢದ ಸೆಕ್ಟರ್ 2 ರಲ್ಲಿ ಕೇಜ್ರಿವಾಲ್ಗೆ ಎರಡು ಎಕರೆಗಳಷ್ಟು ವಿಸ್ತಾರವಾಗಿರುವ 7-ಸ್ಟಾರ್ ಬಂಗಲೆಯನ್ನು ಪಂಜಾಬ್ ಸರ್ಕಾರವು ಹಂಚಿಕೆ ಮಾಡಿದೆ ಎಂದು ದೆಹಲಿ ಬಿಜೆಪಿ ಆರೋಪ ಮಾಡಿದೆ. 
“‘ಸಾಮಾನ್ಯ ವ್ಯಕ್ತಿ ಎಂದು ನಟಿಸಿದ ವ್ಯಕ್ತಿಗೆ ಮತ್ತೊಂದು ಭವ್ಯವಾದ ಶೀಷ್ಮಹಲ್ ನಿರ್ಮಿಸಲಾಗಿದೆ” ಎಂದು ದೆಹಲಿ ಬಿಜೆಪಿ ಹೇಳಿದೆ
ಅಲ್ಲದೇ ಪಂಜಾಬ್ ಸರ್ಕಾರವನ್ನು ಅರವಿಂದ್ ಕೇಜ್ರಿವಾಲ್ ನಿಯಂತ್ರಿಸುತ್ತಿದ್ದಾರೆ ಎಂದು ಆರೋಪಿಸಲಾಗಿದೆ.
“ಕೇಜ್ರಿವಾಲ್ ತಮ್ಮ ಮನೆಯ ಮುಂಭಾಗದಿಂದಲೇ ಅಂಬಾಲಕ್ಕೆ ಸರ್ಕಾರಿ ಹೆಲಿಕಾಪ್ಟರ್ನಲ್ಲಿ ಹತ್ತಿದರು, ಮತ್ತು ನಂತರ ಅಂಬಾಲದಿಂದ ಪಂಜಾಬ್ ಸರ್ಕಾರದ ಖಾಸಗಿ ಜೆಟ್ ಅವರನ್ನು ಪಕ್ಷದ ಕೆಲಸಕ್ಕಾಗಿ ಗುಜರಾತ್ಗೆ ಕರೆದೊಯ್ಯಿತು” ಎಂದು ಬಿಜೆಪಿ ಆರೋಪಿಸಿದೆ.
ಈ ಆರೋಪದ ಬಗ್ಗೆ ಕೇಜ್ರಿವಾಲ್ ಅಥವಾ ಎಎಪಿ ಇನ್ನೂ ಪ್ರತಿಕ್ರಿಯಿಸಿಲ್ಲ.
‼️ Big Breaking – आम आदमी का ढोंग करने वाले केजरीवाल ने तैयार करवाया एक और भव्य शीशमहल
दिल्ली का शीश महल ख़ाली होने के बाद पंजाब के Super CM अरविंद केजरीवाल जी ने पंजाब में दिल्ली से भी शानदार शीश महल तैयार करवा लिया है 😳
चंडीगढ़ के सेक्टर 2 में CM कोटे की 2 Acre की आलीशान 7… pic.twitter.com/d3V4W23yRw
— BJP Delhi (@BJP4Delhi) October 31, 2025
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.


 
			
