ಬೆಂಗಳೂರು: ಕಾಂಗ್ರೆಸ್ ಸರ್ಕಾರ ಸೃಷ್ಟಿಸಿರುವ ಜಿ.ಬಿ.ಎ ಸಂಪೂರ್ಣವಾಗಿ ಸ್ಥಳೀಯ ಸಂಸ್ಥೆಗಳ ಅಧಿಕಾರ ಕಿತ್ತುಕೊಳ್ಳುವ ಪ್ರಾಧಿಕಾರ ಎಂದು ಶಾಸಕ ಎಸ್.ಆರ್. ವಿಶ್ವನಾಥ್ ಅವರು ಆರೋಪಿಸಿದ್ದಾರೆ.
ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಸುದ್ದಿಗಾರರ ಜೊತೆ ಮಾತನಾಡಿದ ಅವರು, ಪ್ರಾರಂಭದಿಂದಲೇ ಬೆಂಗಳೂರು ಇಬ್ಬಾಗವಾಗಬಾರದು; ಅದು ಒಂದಾಗಿರಬೇಕು ಎಂದು ಜಿ.ಬಿ.ಎ. ತಿದ್ದುಪಡಿ 74 ಕ್ಕೆ ವಿರೋಧವಾಗಿ ಪ್ರತೀ ಸಭೆಗಳಲ್ಲಿ ನಾವು ತಿಳಿಸುತ್ತಾ ಬಂದಿದ್ದೇವೆ. ಆದರೆ ಇಂದು ಕಾಂಗ್ರೆಸ್ಸಿನವರು ಬಿಜೆಪಿ ಶಾಸಕರು ಸಭೆಗಳಲ್ಲಿ ಬಂದಿದ್ದರು ಮತ್ತು ಮಾತನಾಡಿದರು. ಪ್ರಸ್ತುತ ಅವರು ವಿರೋಧ ಮಾಡುತ್ತಿದ್ದಾರೆ ಎಂದು ಅಪಪ್ರಚಾರ ಮಾಡುವುದು ಸರಿಯಲ್ಲ ಎಂದು ಆಕ್ಷೇಪಿಸಿದರು.
ಸರ್ಕಾರ ಒಂದು ಸಮಿತಿ ಮಾಡಿದಾಗ ಅದರ ಸಾಧಕ ಭಾದಕಗಳನ್ನು ನಾವು ನೋಡಬೇಕಾಗುತ್ತದೆ. ಆ ವಿಚಾರಕ್ಕೆ ನಾವು ಸಭೆಗಳಿಗೆ ಹೋಗಿದ್ದೆವು ಮತ್ತು ಅಸೆಂಬ್ಲಿಯಲ್ಲಿಯೂ ನಾವು ಪ್ರಶ್ನಿಸಿದ್ದೇವೆ ಎಂದು ತಿಳಿಸಿದರು.
ಜಿ.ಬಿ.ಎ. ಪ್ರಥಮ ಸಭೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕರೆದಿದ್ದಾರೆ. ಯಾವುದೇ ಸಭೆಯ ಕುರಿತು ಪತ್ರಿಕೆಯಲ್ಲಿ ಜಾಹೀರಾತು ನೀಡಿರುವುದನ್ನು ನಾನು ನೋಡಿರಲಿಲ್ಲ. ಮಹಾನಗರ ಪಾಲಿಕೆ ಮತ್ತು ಶಾಸಕರ ಸಭೆಯನ್ನು ಹಾಕಿರಲಿಲ್ಲ. ಇಂದು ಸಾರ್ವಜನಿಕರ ದುಡ್ಡಿನಲ್ಲಿ ಮೊದಲನೇ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಸಭೆ ಕರೆದಿದ್ದೇವೆ ಎಂದು ತಿಳಿಸಿದ್ದಾರೆ. ಅದರಿಂದಲೇ ನಮಗೆ ಸಭೆ ಇರುವುದಾಗಿ ತಿಳಿದಿದೆ ಎಂದು ಹೇಳಿದರು.
ಜಿ.ಬಿ.ಎ. ಮಾಡಿದರೂ ಒಂದು ಶಾಸಕರಿಂದ ಮತ್ತು ಮತ್ತೊಂದು ಶಾಸಕರಿಗೆ ಜಿ.ಬಿ.ಎ. ವಿಂಗಡಣೆ ಆಗಬಾರದು ಎಂದು ತಿಳಿಸಿದ್ದೆವು. ಪ್ರಸ್ತುತ ಶಾಸಕರಿಗೆ ಎರಡೆರಡು ಕಡೆ ಸಭೆಗೆ ಹಾಜರಾÀಗಲು ಸೂಚಿಸಿದ್ದಾರೆ. ಇದು ಎಷ್ಟು ಸಮಂಜಸ ಎಂದು ಪ್ರಶ್ನಿಸಿದರು.
ಚುನಾವಣಾ ಬೂತ್ ಗಳನ್ನು ಎರಡೆರಡು ವಾರ್ಡ್ಗಳಿಗೆ ವಿಂಗಡಣೆ ಮಾಡಿದ್ದಾರೆ. ಕಾಂಗ್ರೆಸ್ ಜಿ.ಬಿ.ಎ ಮಾಡಿರುವ ಉದ್ದೇಶವೆಂದರೆ ಬೆಂಗಳೂರು ಮಹಾನಗರ ಚುನಾವಣೆ ಮಾಡಿದರೆ ಕಾಂಗ್ರೆಸ್ ಅಧಿಕಾರಕ್ಕೆ ಬರುವುದಿಲ್ಲ. ಇದನ್ನು ಒಡೆದು ಒಂದೆರಡಾದರು ನಾವು ಗೆಲ್ಲಬೇಕು ಎಂದು ಜಿ.ಬಿ.ಎ ಮಾಡಿದ್ದಾರೆ ಎಂದು ಆಕ್ಷೇಪಿಸಿದರು.
ಜಿ.ಬಿ.ಎ.ನಲ್ಲಿ ಪುಲಕೇಶಿ ನಗರವನ್ನು ಯಲಹಂಕಕ್ಕೆ ಸೇರಿಸಿದ್ದಾರೆ. ಎರಡು ಕ್ಷೇತ್ರವನ್ನು ಸೇರಿಸಿ 50 ಜನಕ್ಕೆ ಜಿ.ಬಿ.ಎ. ಮಾಡಿದ್ದಾರೆ ಎಂದು ತಿಳಿಸಿದರು. ರಾಜಕೀಯ ತೆವಲಿಗೆ ಜಿ.ಬಿ.ಎ. ಮಾಡಿದ್ದು, ಬೆಂಗಳೂರು ಅಭಿವೃದ್ಧಿಗೋಸ್ಕರ ಮಾಡಿರುವುದಿಲ್ಲ ಎಂದು ಆರೋಪಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.