ನವದೆಹಲಿ: ಕಳೆದ ತಿಂಗಳು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ನಲ್ಲಿ ನಡೆದ ಮಾರಕ ಭಯೋತ್ಪಾದಕ ದಾಳಿಯ ನಂತರ ಅಮಾನತುಗೊಂಡ ಸಿಂಧೂ ಜಲ ಒಪ್ಪಂದದ ಕುರಿತು ಪಾಕಿಸ್ಥಾನ “ತಪ್ಪು ಮಾಹಿತಿ” ನೀಡುತ್ತಿದೆ ಎಂದು ಭಾರತ ಶನಿವಾರ ಟೀಕಿಸಿದೆ.
“ಭಯೋತ್ಪಾದನೆಯ ಜಾಗತಿಕ ಕೇಂದ್ರಬಿಂದು”ವಾಗಿರುವ ಪಾಕಿಸ್ಥಾನವು ಗಡಿಯಾಚೆಗಿನ ಭಯೋತ್ಪಾದನೆಗೆ ತನ್ನ ಬೆಂಬಲವನ್ನು ನಿಲ್ಲಿಸುವವರೆಗೆ 65 ವರ್ಷಗಳಷ್ಟು ಹಳೆಯದಾದ ಒಪ್ಪಂದವು ಸ್ಥಗಿತಗೊಳ್ಳುತ್ತದೆ ಎಂದು ವಿಶ್ವಸಂಸ್ಥೆಯಲ್ಲಿ ಭಾರತದ ಖಾಯಂ ಪ್ರತಿನಿಧಿ, ರಾಯಭಾರಿ ಪರ್ವತನೇನಿ ಹರೀಶ್ ಹೇಳಿದ್ದಾರೆ.
ಪಾಕಿಸ್ಥಾನದ ಪ್ರತಿನಿಧಿ “ನೀರು ಜೀವನ ಮತ್ತು ಯುದ್ಧದ ಆಯುಧವಲ್ಲ” ಎಂದು ವಿಶ್ವಸಂಸ್ಥೆಯಲ್ಲಿ ಒಪ್ಪಂದದ ವಿಷಯವನ್ನು ಎತ್ತಿದ ನಂತರ ಅವರ ಪ್ರತಿಕ್ರಿಯೆ ಬಂದಿದೆ.
ಪಹಲ್ಗಾಮ್ ದಾಳಿಯಲ್ಲಿ 26 ಜನರು ಸಾವನ್ನಪ್ಪಿದ ಒಂದು ದಿನದ ನಂತರ, ಏಪ್ರಿಲ್ 23 ರಂದು 1960 ರಲ್ಲಿ ಸಹಿ ಹಾಕಲಾದ ಸಿಂಧೂ ಜಲ ಒಪ್ಪಂದವನ್ನು ಭಾರತ ಅಮಾನತುಗೊಳಿಸಿತು. ಭೀಕರ ಭಯೋತ್ಪಾದಕ ದಾಳಿಗೆ “ಗಡಿಯಾಚೆಗಿನ ಸಂಪರ್ಕ” ಕಂಡುಬಂದ ನಂತರ ಭಾರತ ಈ ಕ್ರಮ ಕೈಗೊಂಡಿದೆ.
“ಭಾರತವು ಯಾವಾಗಲೂ ಮೇಲ್ಮಟ್ಟದ ನದಿಪಾತ್ರ ರಾಷ್ಟ್ರವಾಗಿ ಜವಾಬ್ದಾರಿಯುತ ರೀತಿಯಲ್ಲಿ ವರ್ತಿಸಿದೆ” ಎಂದು ಹರೀಶ್ ಪ್ರತಿಪಾದಿಸಿದ್ದಾರೆ.
“ಮೊದಲನೆಯದಾಗಿ, ಭಾರತವು 65 ವರ್ಷಗಳ ಹಿಂದೆ ಉತ್ತಮ ಭರವಸೆಯೊಂದಿಗೆ ಸಿಂಧೂ ಜಲ ಒಪ್ಪಂದವನ್ನು ಮಾಡಿಕೊಂಡಿತು. ಆ ಒಪ್ಪಂದದ ಮುನ್ನುಡಿಯಲ್ಲಿ ಅದನ್ನು ಸ್ನೇಹದ ತೀರ್ಮಾನ ಎಂದು ವಿವರಿಸಲಾಗಿದೆ. ಆರುವರೆ ದಶಕಗಳಲ್ಲಿ, ಪಾಕಿಸ್ಥಾನವು ಭಾರತದ ಮೇಲೆ ಮೂರು ಯುದ್ಧಗಳು ಮತ್ತು ಸಾವಿರಾರು ಭಯೋತ್ಪಾದಕ ದಾಳಿಗಳನ್ನು ನಡೆಸುವ ಮೂಲಕ ಆ ಒಪ್ಪಂದದ ಚೈತನ್ಯವನ್ನು ಉಲ್ಲಂಘಿಸಿದೆ” ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.