ಜೈಪುರ: ರಾಜಸ್ಥಾನದಲ್ಲಿ ಸಮಾರಂಭದಲ್ಲಿ ಭಾಗಿಯಾದ ಪ್ರಧಾನಿ ನರೇಂದ್ರ ಮೋದಿಯವರು ಅಲ್ಲಿಂದಲೇ ಪಾಕಿಸ್ಥಾನಕ್ಕೆ ದೊಡ್ಡ ಸಂದೇಶವೊಂದನ್ನು ನೀಡಿದ್ದಾರೆ. ಭಾರತದಲ್ಲಿ ನಡೆಯುವ ಪ್ರತಿಯೊಂದು ಭಯೋತ್ಪಾದನಾ ದಾಳಿಗೂ ಪಾಕಿಸ್ಥಾನ ಸೇನೆ ಮತ್ತು ಅದರ ಆರ್ಥಿಕತೆಯು ಭಾರಿ ಬೆಲೆ ತೆರಬೇಕಾಗುತ್ತದೆ. ಪಾಕಿಸ್ಥಾನಕ್ಕೆ ಭಾರತದಿಂದ ನೀರು ಸಿಗುವುದಿಲ್ಲ ಮತ್ತು ಭಾರತೀಯರ ರಕ್ತದೊಂದಿಗೆ ಆಟವಾಡುವುದಕ್ಕೆ ಭಾರೀ ಬೆಲೆ ತೆರಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.
ಕಾಶ್ಮೀರ ಸಮಸ್ಯೆ ಬಗೆಹರಿಯುವವರೆಗೆ ಪಾಕಿಸ್ಥಾನದೊಂದಿಗೆ ಮಾತುಕತೆ ಇರುವುದಿಲ್ಲ ಎಂದು ಪ್ರಧಾನಿ ಮೋದಿ ಸ್ಪಷ್ಟಪಡಿಸಿದರು. “ಪಾಕಿಸ್ಥಾನದೊಂದಿಗೆ ವ್ಯಾಪಾರ ಅಥವಾ ಮಾತುಕತೆ ಇರುವುದಿಲ್ಲ. ಮಾತುಕತೆಯಾಗಿದ್ದರೆ, ಪಾಕ್ ಆಕ್ರಮಿತ ಕಾಶ್ಮೀರದ ಬಗ್ಗೆ ಮಾತ್ರ ಮಾತುಕತೆ ನಡೆಸಲು ನಾವು ಬರುತ್ತೇವೆ” ಎಂದಿದ್ದಾರೆ.
“ಆಪರೇಷನ್ ಸಿಂದೂರ್ ಕೇವಲ ಪ್ರದರ್ಶನ ಅಥವಾ ಸೇಡಿನ ಆಟವಲ್ಲ. ಇದು ನ್ಯಾಯದ ಹೊಸ ರೂಪ. ಆಪರೇಷನ್ ಸಿಂಧೂರ್ ಕೇವಲ ಕೋಪದ ಅಭಿವ್ಯಕ್ತಿಯಲ್ಲ, ಇದು ಬಲಿಷ್ಠ ಮತ್ತು ಸಮರ್ಥ ಭಾರತದ ದೃಢನಿಶ್ಚಯದ ಮುಖವಾಗಿದೆ. ಇದು ಭಾರತದ ಹೊಸ ಗುರುತು” ಎಂದು ಅವರು ಹೇಳಿದರು.
ಏಪ್ರಿಲ್ 22 ರ ದಾಳಿಗೆ ಪ್ರತಿಕ್ರಿಯೆಯಾಗಿ, ನಾವು 22 ನಿಮಿಷಗಳಲ್ಲಿ ಒಂಬತ್ತು ಭಯೋತ್ಪಾದಕ ಶಿಬಿರಗಳನ್ನು ನಾಶಪಡಿಸಿದ್ದೇವೆ. ‘ಸಿಂಧೂರ’ ಗನ್ ಪೌಡರ್ ಆಗಿ ಬದಲಾದಾಗ ಏನಾಗಬಹುದು ಎಂಬುದರ ಪರಿಣಾಮವನ್ನು ದೇಶದ ಶತ್ರುಗಳು ನೋಡಿದ್ದಾರೆ ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.