ಚಂಡೀಗಢ: ಮಹತ್ವದ ಬೆಳವಣಿಗೆಯೊಂದರಲ್ಲಿ ಪಂಜಾಬ್ ಪೊಲೀಸರು ಪಾಕಿಸ್ಥಾನದ ಇಂಟರ್ ಸರ್ವೀಸಸ್ ಇಂಟೆಲಿಜೆನ್ಸ್ (ಐಎಸ್ಐ) ಬೇಹುಗಾರಿಕೆ ಸಂಸ್ಥೆಯ ಬೆಂಬಲಿತ ಭಯೋತ್ಪಾದಕ ಜಾಲಗಳನ್ನು ಭೇದಿಸಿದ್ದಾರೆ. ಕಳೆದ ವಾರ ಅಮೃತಸರ ಬಳಿ ಗ್ರೆನೇಡ್ ದಾಳಿಗೆ ಈ ಗುಂಪು ಯತ್ನಿಸಿತ್ತು ಎನ್ನಲಾಗಿದೆ.
ಭಾರತದಲ್ಲಿ ನಿಷೇಧಿತ ಗುಂಪಾದ ಬಬ್ಬರ್ ಖಾಲ್ಸಾ ಇಂಟರ್ನ್ಯಾಷನಲ್ (ಬಿಕೆಐ) ನ ಭಯೋತ್ಪಾದಕ ಮಾಡ್ಯೂಲ್ ಅನ್ನು ಪಾಕಿಸ್ಥಾನ ಮೂಲದ ಭಯೋತ್ಪಾದಕ ಹರ್ವಿಂದರ್ ಸಿಂಗ್ ರಿಂಡಾ ಅವರ ನಿರ್ದೇಶನದ ಮೇರೆಗೆ ವಿದೇಶಿ ಮೂಲದ ನಿರ್ವಾಹಕರಾದ ಮಣೀಂದರ್ ಬಿಲ್ಲಾ ಮತ್ತು ಮನ್ನು ಅಗ್ವಾನ್ ನಿರ್ವಹಿಸುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಭಯೋತ್ಪಾದಕ ಜಾಲಗಳ ಆರು ಕಾರ್ಯಕರ್ತರನ್ನು ಬಂಧಿಸಲಾಗಿದೆ ಎಂದು ಪಂಜಾಬ್ ಪೊಲೀಸ್ ಮುಖ್ಯಸ್ಥ ಗೌರವ್ ಯಾದವ್ ತಿಳಿಸಿದ್ದಾರೆ. ಅವರನ್ನು ಜತಿನ್ ಕುಮಾರ್ ಅಲಿಯಾಸ್ ರೋಹನ್, ಬರೀಂದರ್ ಸಿಂಗ್ ಅಲಿಯಾಸ್ ಸಾಜನ್, ರಾಹುಲ್ ಮಸಿಹ್, ಅಬ್ರಹಾಂ ಅಲಿಯಾಸ್ ರೋಹಿತ್, ಸೋಹಿತ್ ಮತ್ತು ಸುನಿಲ್ ಕುಮಾರ್ ಎಂದು ಗುರುತಿಸಲಾಗಿದೆ. ಜತಿನ್ ಕುಮಾರ್ ಪೊಲೀಸರ ಮೇಲೆ ಗುಂಡು ಹಾರಿಸಿದ್ದಾನೆ ಮತ್ತು ಗುಂಡಿನ ಚಕಮಕಿಯಲ್ಲಿ ಗಾಯಗೊಂಡಿದ್ದಾನೆ.
“ಬಟಾಲಾದ ವೈನ್ ಶಾಪ್ವೊಂದರ ಹೊರಗೆ ಈ ಗುಂಪು ಗ್ರೆನೇಡ್ ದಾಳಿಗೆ ಯತ್ನಿಸಿತ್ತು. ಬಂಧಿತ ಆರೋಪಿಗಳು ಪೋರ್ಚುಗಲ್ ಮೂಲದ ಮಣೀಂದರ್ ಬಿಲ್ಲಾ ಮತ್ತು ಬಿಕೆಐ ಮಾಸ್ಟರ್ ಮೈಂಡ್ ಮನ್ನು ಅಗ್ವಾನ್ ಅವರಿಂದ ನೇರ ಸೂಚನೆಗಳನ್ನು ಪಡೆಯುತ್ತಿದ್ದರು, ಇತ್ತೀಚೆಗೆ ಅಮೆರಿಕದಲ್ಲಿ ಹ್ಯಾಪಿ ಪ್ಯಾಸಿಯನ್ ಬಂಧನದ ನಂತರ ಬಿಲ್ಲಾ ಮತ್ತು ಅಗ್ವಾನ್ ಕಾರ್ಯಾಚರಣೆಯ ಉಸ್ತುವಾರಿ ವಹಿಸಿಕೊಂಡಿದ್ದಾರೆ” ಎಂದು ಡಿಜಿಪಿ ಮಾಹಿತಿ ನೀಡಿದ್ದಾರೆ.
ಆರೋಪಿಯಿಂದ 30 ಬೋರ್ ಪಿಸ್ತೂಲ್ ಅನ್ನು ಸಹ ವಶಪಡಿಸಿಕೊಳ್ಳಲಾಗಿದೆ.
In a major breakthrough against #Pakistan's ISI-backed terror networks, @BatalaPolice busts a #BKI terror module operated by foreign-based handlers Maninder Billa & Mannu Agwan on the directions of Harwinder Singh Rinda, arresting six operatives: Jatin Kumar @ Rohan, Barinder… pic.twitter.com/CxZTtsppeI
— DGP Punjab Police (@DGPPunjabPolice) May 20, 2025
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.