ನವದೆಹಲಿ: ಆಪರೇಷನ್ ಸಿಂದೂರ್ನಲ್ಲಿ ಭಾಗಿಯಾಗಿರುವ ಭಾರತೀಯ ವಾಯುಪಡೆಯ ಪೈಲಟ್ಗಳು ಸುರಕ್ಷಿತವಾಗಿ ಮರಳಿದ್ದಾರೆ ಮತ್ತು ಎಲ್ಲಾ ಮಿಷನ್ ಉದ್ದೇಶಗಳನ್ನು ಸಾಧಿಸಲಾಗಿದೆ ಎಂದು ಭಾರತೀಯ ವಾಯುಸೇನೆ ದೃಢಪಡಿಸಿದೆ.
ಜಂಟಿ ಸಶಸ್ತ್ರ ಪಡೆಗಳ ಪತ್ರಿಕಾ ಬ್ರೀಫಿಂಗ್ನಲ್ಲಿ ಮಾತನಾಡಿದ ಏರ್ ಕಾರ್ಯಾಚರಣೆಗಳ ಮಹಾನಿರ್ದೇಶಕ ಏರ್ ಮಾರ್ಷಲ್ ಎ ಕೆ ಭಾರ್ತಿ, ಯುದ್ಧ ಸಿದ್ಧತೆ ಇನ್ನೂ ಸಕ್ರಿಯವಾಗಿದ್ದಾಗ ಭಾರತವು ಪ್ಲಾಟ್ಫಾರ್ಮ್ ಮಟ್ಟದ ವಿವರಗಳನ್ನು ಬಹಿರಂಗಪಡಿಸುವುದಿಲ್ಲ ಎಂದು ಹೇಳಿದ್ದಾರೆ.
ಆಪರೇಷನ್ ಸಿಂದೂರ್ ಸಮಯದಲ್ಲಿ ಎರಡು ಭಾರತ ಜೆಟ್ಗಳನ್ನು ಹೊಡೆದುರುಳಿಸಿದ್ದೇವೆ ಎಂಬ ಪಾಕಿಸ್ತಾನದ ಹೇಳಿಕೆಗಳ ಬಗ್ಗೆ ಕೇಳಿದ ಪ್ರಶ್ನೆಗೆ ಅವರು ಈ ಉತ್ತರ ನೀಡಿದ್ದಾರೆ.
“ನಾವು ಯುದ್ಧ ಸನ್ನಿವೇಶದಲ್ಲಿದ್ದೇವೆ ಮತ್ತು ನಷ್ಟಗಳು ಯುದ್ಧದ ಒಂದು ಭಾಗವಾಗಿದೆ” ಎಂದು ಏರ್ ಮಾರ್ಷಲ್ ಭಾರತಿ ಹೇಳಿದರು.
“ಕೇಳಬೇಕಾದ ಪ್ರಶ್ನೆಯೆಂದರೆ, ಭಯೋತ್ಪಾದಕ ಶಿಬಿರಗಳನ್ನು ನಾಶಪಡಿಸುವ ನಮ್ಮ ಉದ್ದೇಶವನ್ನು ನಾವು ಸಾಧಿಸಿದ್ದೇವೆಯೇ ಎಂದು, ಹೌದು ನಾವು ಸಾಧಿಸಿದ್ದೇವೆ ಮತ್ತು ಫಲಿತಾಂಶಗಳನ್ನು ಇಡೀ ಪ್ರಪಂಚವೇ ನೋಡಿದೆ” ಎಂದು ಅವರು ಹೇಳಿದರು.
“ವಿವರಗಳಿಗೆ ಸಂಬಂಧಿಸಿದಂತೆ, ಏನಾಗಿದೆ, ಯಾವ ನಷ್ಟ ಸಂಭವಿಸಿದೆ ಎಂದು ಈ ಸಮಯದಲ್ಲಿ ನಾನು ಅದರ ಬಗ್ಗೆ ಪ್ರತಿಕ್ರಿಯಿಸಲು ಇಷ್ಟಪಡುವುದಿಲ್ಲ ಏಕೆಂದರೆ ನಾವು ಇನ್ನೂ ಯುದ್ಧ ಪರಿಸ್ಥಿತಿಯಲ್ಲಿದ್ದೇವೆ ಮತ್ತು ನಾನು ಯಾವುದರ ಬಗ್ಗೆಯೂ ಕಾಮೆಂಟ್ ಮಾಡಿದರೆ ಅದರ ಪ್ರಯೋಜನ ವಿರೋಧಿಗಳಿಗೆ ಮಾತ್ರ ಆಗುತ್ತದೆ” ಎಂದು ಡಿಜಿಎಒ ಹೇಳಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.