ನವದೆಹಲಿ: ಪಹಲ್ಗಾಮ್ ಭಯೋತ್ಪಾದಕ ದಾಳಿಯ ಹೊಣೆಯನ್ನು ಎರಡು ಬಾರಿ ಹೊತ್ತುಕೊಂಡಿದ್ದ ಲಷ್ಕರ್-ಎ-ತೈಬಾ ಪ್ರಾಸಿಕ್ಯೂಟರ್ – ದಿ ರೆಸಿಸ್ಟೆನ್ಸ್ ಫ್ರಂಟ್ ಬಗ್ಗೆ ಭಾರತ ವಿಶ್ವಸಂಸ್ಥೆಗೆ ಮಾಹಿತಿ ನೀಡಿತು. ಆದರೆ ಭಯೋತ್ಪಾದಕ ಗುಂಪಿನ ಬಗ್ಗೆ ಯಾವುದೇ ಹೇಳಿಕೆಯನ್ನು ಪಾಕಿಸ್ತಾನ ವಿರೋಧಿಸಿತು ಎಂದು ಸರ್ಕಾರ ಗುರುವಾರ ಸಂಜೆ ತಿಳಿಸಿದೆ.
ಆಪೃೇಷನ್ ಸಿಂಧೂರ್ ಬಳಿಕದ ಬೆಳವಣಿಗೆಗಳ ಬಗ್ಗೆ ಇಂದು ಪತ್ರಿಕಾಗೋಷ್ಠಿ ನಡೆಸಲಾಗಿದ್ದು, ಇದರಲ್ಲಿ ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಸ್ರಿ, ಕರ್ನಲ್ ಸೋಫಿಯಾ ಖುರೇಶಿ ಮತ್ತು ವಿಂಗ್ ಕಮಾಂಡರ್ ವ್ಯೋಮಿಕ ಸಿಂಗ್ ಭಾಗಿಯಾಗಿ ಮಾಧ್ಯಮಗಳಿಗೆ ವಿವರಗಳನ್ನು ನೀಡಿದರು.
“ಗಡಿಯಲ್ಲಿ ಪಾಕಿಸ್ಥಾನ ದಾಳಿಗಳನ್ನು ಹೆಚ್ಚಿಸಿದೆ. ಮಾರ್ಟರ್, ಬಾಂಬ್ಗಳನ್ನು ಬಳಸಿ ದಾಳಿ ನಡೆಸಿದೆ. ಭಾರತದ 15 ನಗರಗಳನ್ನು ಟಾರ್ಗೆಟ್ ಮಾಡಿ ಪಾಕಿಸ್ಥಾನ ದಾಳಿ ಮಾಡಿದೆ. ಈ ಎಲ್ಲಾ ದಾಳಿಗಳನ್ನು ಭಾರತ ವಿಫಲಗೊಳಿಸಿದೆ” ಎಂದು ಮಿಸ್ರಿ ಹೇಳಿದ್ದಾರೆ.
ಪಾಕಿಸ್ಥಾನದಲ್ಲಿ ಉಗ್ರರ ಶವ ಸಂಸ್ಕಾರದಲ್ಲಿ ಅಲ್ಲಿನ ಸೇನೆ ಭಾಗಿಯಾಗಿದೆ ಎಂದು ಹೇಳಿದ ಅವರು, ಅದಕ್ಕೆ ಸಂಬಂಧಿಸಿದ ಫೋಟೋಗಳನ್ನು ಬಿಡುಗಡೆ ಮಾಡಿದರು.
ಅಷ್ಟೇ ಅಲ್ಲದೇ ಸಿಖ್ಖರನ್ನು ಪಾಕಿಸ್ಥಾನ ಟಾರ್ಗೆಟ್ ಮಾಡಿ, ಗುರುದ್ವಾರಕ್ಕೆ ದಾಳಿ ಮಾಡಿದೆ. ನಾವು ಪಾಕಿಸ್ಥಾನದ ವಾಯು ರಕ್ಷಣಾ ವ್ಯವಸ್ಥೆಯನ್ನೇ ಹಾಳು ಮಾಡಿದ್ದೇವೆ ಎಂದಿದ್ದಾರೆ.
ಆಪರೇಷನ್ ಸಿಂಧೂರ್ ಬಗ್ಗೆ ಭಾರತದ ನಿಲುವನ್ನು ಪುನರುಚ್ಚರಿಸಿದರು ಅವರು, ಏಪ್ರಿಲ್ 22 ರಂದು ನಡೆದ ಪಹಲ್ಗಾಮ್ ಭಯೋತ್ಪಾದಕ ದಾಳಿಯಲ್ಲಿ 26 ನಾಗರಿಕರು ಸಾವನ್ನಪ್ಪಿದ ಘಟನೆಗೆ ಪ್ರತಿಕ್ರಿಯೆಯಾಗಿ ನಡೆದ ದಾಳಿಗಳು ಭಯೋತ್ಪಾದಕ ಮೂಲಸೌಕರ್ಯವನ್ನು ಮಾತ್ರ ಗುರಿಯಾಗಿಸಿಕೊಂಡಿವೆ ಎಂದು ಪ್ರತಿಪಾದಿಸಿದರು.
ಭಯೋತ್ಪಾದನೆಯನ್ನು ಪೋಷಿಸುವಲ್ಲಿ ಪಾಕಿಸ್ತಾನದ ದೀರ್ಘಕಾಲದ ಪಾತ್ರವನ್ನು ಖಂಡಿಸಿದ ಅವರು, “ಜಾಗತಿಕ ಭಯೋತ್ಪಾದನೆಯ ಕೇಂದ್ರಬಿಂದುವಾಗಿ ಪಾಕಿಸ್ತಾನ ಖ್ಯಾತಿಯನ್ನು ಹೊಂದಿದೆ. ಇದು ಲಷ್ಕರ್-ಎ-ತೈಬಾ (ಎಲ್ಇಟಿ) ಮತ್ತು ಜೈಶ್-ಎ-ಮೊಹಮ್ಮದ್ (ಜೆಇಎಂ) ನಂತಹ ಹೆಚ್ಚಿನ ಸಂಖ್ಯೆಯ ವಿಶ್ವಸಂಸ್ಥೆಯ ಪಟ್ಟಿ ಮಾಡಲಾದ ಭಯೋತ್ಪಾದಕ ಗುಂಪುಗಳಿಗೆ ನೆಲೆಯಾಗಿದೆ” ಎಂದು ಹೇಳಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.