ನವದೆಹಲಿ: ಪಾಕಿಸ್ಥಾನದ ಪಂಜಾಬ್ ಪ್ರಾಂತ್ಯದಲ್ಲಿ ನಡೆದ ಆಪರೇಷನ್ ಸಿಂಧೂರ್ನಲ್ಲಿ ಜೈಶ್-ಎ-ಮೊಹಮ್ಮದ್ನ ಕಾರ್ಯಾಚರಣೆ ಮುಖ್ಯಸ್ಥ ಮತ್ತು ಐಸಿ-814 ಅಪಹರಣದ ಮಾಸ್ಟರ್ಮೈಂಡ್ ಆಗಿರುವ ಅಬ್ದುಲ್ ರೌಫ್ ಅಜರ್ನನ್ನು ಭಾರತ ಸಂಹರಿಸಿದೆ ಎಂದು ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ.
ಪಂಜಾಬ್ ಪ್ರಾಂತ್ಯದಲ್ಲಿ, ಭಾರತೀಯ ಸಶಸ್ತ್ರ ಪಡೆಗಳು ಬಹಾವಲ್ಪುರ್ ಮತ್ತು ಮುರಿಯ್ಕೆಗಳಲ್ಲಿ ದಾಳಿ ನಡೆಸಿ, ಜೈಶ್ ಮತ್ತು ಲಷ್ಕರ್ನ ಪ್ರಧಾನ ಕಚೇರಿಗಳನ್ನು ನಾಶಪಡಿಸಿವೆ. ಇವು ಭಾರತೀಯ ರಕ್ತವನ್ನು ಚೆಲ್ಲಿದ ಮತ್ತು ಹಲವಾರು ವರ್ಷಗಳಿಂದ ಭಾರತಕ್ಕೆ ಘಾಸಿ ಮಾಡಿರುವ ಎರಡು ಭಯೋತ್ಪಾದಕ ಸಂಘಟನೆಗಳು.
“ಹತ್ಯೆಗೊಳಗಾದವರಲ್ಲಿ ಜೈಶ್-ಮೊಹಮ್ಮದ್ನ ಕಾರ್ಯಾಚರಣೆ ಮುಖ್ಯಸ್ಥ, ಐಸಿ-814 ಅಪಹರಣದ ಮಾಸ್ಟರ್ಮೈಂಡ್ ಮತ್ತು ಅಂತರರಾಷ್ಟ್ರೀಯ ಜಿಹಾದಿ ಜಾಲಗಳ ಕೇಂದ್ರ ವ್ಯಕ್ತಿ ಅಬ್ದುಲ್ ರೌಫ್ ಅಜರ್ ಕೂಡ ಸೇರಿದ್ದಾನೆ” ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅಬ್ದುಲ್ ರೌಫ್ ಅಜರ್ ವಿಶ್ವಸಂಸ್ಥೆಯಿಂದ ಗೊತ್ತುಪಡಿಸಿದ ಭಯೋತ್ಪಾದಕ ಮಸೂದ್ ಅಜರ್ನ ಸಹೋದರ. ಬಹಾವಲ್ಪುರ್ ದಾಳಿಯಲ್ಲಿ ಮಸೂದ್ ಅಜರ್ನ 10 ಕುಟುಂಬ ಸದಸ್ಯರನ್ನು ಭಾರತೀಯ ದಾಳಿಗಳು ಕೊಂದಿವೆ ಎಂದು ಮೂಲಗಳು ನಿನ್ನೆ ತಿಳಿಸಿವೆ. ಜೈಶ್ ಭಯೋತ್ಪಾದಕ ಮಸೂದ್ ಅಜರ್ ಸ್ವತಃ ತನ್ನ ಕುಟುಂಬ ಸದಸ್ಯರ ಹತ್ಯೆಯನ್ನು ದೃಢಪಡಿಸಿದ್ದಾನೆ.
“IC-814 ವಿಮಾನ ಅಪಹರಣವನ್ನು ಸಂಘಟಿಸುವಲ್ಲಿ ರೌಫ್ ಅಜರ್ ದೊಡ್ಡ ಪಾತ್ರ ವಹಿಸಿದ್ದ, ಈತನಿಂದಾಗಿಯೇ ವಾಲ್ ಸ್ಟ್ರೀಟ್ ಜರ್ನಲ್ನ ಅಮೇರಿಕನ್-ಯಹೂದಿ ಪತ್ರಕರ್ತ ಡೇನಿಯಲ್ ಪರ್ಲ್ ಅವರನ್ನು ಅಪಹರಿಸಿ ಕೊಲೆ ಮಾಡಿದ ಪ್ರಮುಖ ಅಲ್-ಖೈದಾ ಕಾರ್ಯಕರ್ತ ಒಮರ್ ಸಯೀದ್ ಶೇಖ್ ಬಿಡುಗಡೆಯಾಯಿತು. 2002 ರಲ್ಲಿ ಪರ್ಲ್ನ ಕ್ರೂರ ಹತ್ಯೆ ಪ್ರಪಂಚದ ಆತ್ಮಸಾಕ್ಷಿಯನ್ನು ಬೆಚ್ಚಿಬೀಳಿಸಿತು ಮತ್ತು ರಾಜ್ಯ-ರಕ್ಷಿತ ಭಯೋತ್ಪಾದಕ ಜಾಲಗಳಿಂದ ಉಂಟಾಗುವ ಜಾಗತಿಕ ಬೆದರಿಕೆಗೆ ಒಂದು ನಿರ್ಣಾಯಕ ಉದಾಹರಣೆಯಾಗಿ ಉಳಿದಿದೆ” ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.