ನವದೆಹಲಿ: ‘ಆಪರೇಷನ್ ಸಿಂಧೂರ್’ ಸಮಯದಲ್ಲಿ ಭಾರತ ಉಡಾಯಿಸಿದ ಒಂದೇ ಒಂದು ಕ್ಷಿಪಣಿಯನ್ನು ತಡೆಯುವಲ್ಲಿ ಪಾಕಿಸ್ಥಾನ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಹೀಗಾಗಿ ಪಾಕಿಸ್ಥಾನಿಯರೇ ತನ್ನ ದೇಶದ ರಕ್ಷಣಾ ವ್ಯವಸ್ಥೆಯನ್ನು ಬಹಿರಂಗವಾಗಿ ಟೀಕಿಸಿರುವ ವೀಡಿಯೊ ಈಗ ವೈರಲ್ ಆಗಿದೆ.
“ಅವರು ನಮ್ಮ ನೆಲಕ್ಕೆ ನುಗ್ಗಿ ಹೊಡೆದಿದ್ದಾರೆ. ಭಾರತದ ಕ್ಷಿಪಣಿಗಳು ಪಾಕಿಸ್ಥಾನದಲ್ಲಿನ ತನ್ನ ಗುರಿಗಳನ್ನು ನಿಖರವಾಗಿ ತಲುಪಿವೆ. ಕ್ಷಿಪಣಿ ದಾಳಿ ನಡೆದ ಸ್ಥಳಗಳು ಈಗ ಅವಶೇಷಗಳಾಗಿ ಮಾರ್ಪಟ್ಟಿವೆ, ಅಲ್ಲಿ ಈಗ ಏನೇನೂ ಉಳಿದಿಲ್ಲ. ಇಷ್ಟಾದರೂ ಭಾರತದ ಒಂದೇ ಒಂದು ಕ್ಷಿಪಣಿಯನ್ನು ತಡೆಯಲು ಪಾಕಿಸ್ಥಾನಕ್ಕೆ ಸಾಧ್ಯವಾಗಿಲ್ಲ. ಯಾಕೆ?” ಎಂದು ಸ್ವತಃ ತನ್ನ ಸರ್ಕಾರವನ್ನು ಆತ ಪ್ರಶ್ನೆ ಮಾಡಿದ್ದಾನೆ.
ಭಾರತದ ʼಆಪರೇಷನ್ ಸಿಂಧೂರ್ನಿಂದ ತೀವ್ರ ಹತಾಶನಂತೆ ಕಂಡುಬಂದಿರುವ ಆ ವ್ಯಕ್ತಿ, ಇರಾನ್ ಇಸ್ರೇಲ್ ಮೇಲೆ ನೂರಾರು ಕ್ಷಿಪಣಿಗಳನ್ನು ಉಡಾಯಿಸಿದಾಗ ಇಸ್ರೇಲ್ನ ಬಲಿಷ್ಠ ವಾಯು ರಕ್ಷಣಾ ವ್ಯವಸ್ಥೆಯು ಅವುಗಳನ್ನು ತಡೆಹಿಡಿಯಿತು ಮತ್ತು ದೊಡ್ಡ ಹಾನಿಯಾಗುವುದನ್ನು ತಪ್ಪಿಸಿತು. ಆದರೆ ಭಾರತದ ಕ್ಷಿಪಣಿ ದಾಳಿಯನ್ನು ತಪ್ಪಿಸಲು ಪಾಕಿಸ್ಥಾನದ ರಕ್ಷಣಾ ವ್ಯವಸ್ಥೆ ಸಂಪೂರ್ಣ ವಿಫಲವಾಗಿದೆ. ಹೀಗಾಗಿ ಭಾರತೀಯ ಕ್ಷಿಪಣಿಗಳು ಯಾವುದೇ ಪ್ರತಿರೋಧವಿಲ್ಲದೆ ತಮ್ಮ ಉದ್ದೇಶಿತ ಗುರಿಗಳನ್ನು ಸುಲಭವಾಗಿ ತಲುಪಿದವು ಎಂದು ಆತ ವಿಷಾದಿಸಿದ್ದಾನೆ. ಅಲ್ಲದೇ ಭಾರತದ ಐದು ಜೆಟ್ಗಳನ್ನು ಉರುಳಿಸಿದ್ದೇವೆ ಎಂಬ ಪಾಕಿಸ್ಥಾನದ ಹೇಳಿಕೆಯನ್ನೂ ಆತ ಟೀಕಿಸಿದ್ದಾನೆ. ಇದೆಲ್ಲವೂ ಫೇಕ್ ಸುದ್ದಿ, ಈ ಬಗ್ಗೆ ಹಂಚಿಕೊಳ್ಳಲಾದ ಚಿತ್ರಗಳು ಹಳೆಯವು ಎಂಬುದು ಸ್ಪಷ್ಟಗೊಂಡಿದೆ ಎಂದಿದ್ದಾನೆ. ಮುಖ ಉಳಿಸಿಕೊಳ್ಳಲು ಪಾಕ್ ಮಾಧ್ಯಮಗಳು ಸುಳ್ಳು ಹರಡುತ್ತಿವೆ ಎಂದಿದ್ದಾನೆ.
पाकिस्तान का आम आदमी पाकिस्तानी सेना और सरकार की हकीकत बताता हुआ। #OperationSindoor pic.twitter.com/dBe2K8Cj8X
— Jitender Sharma (@capt_ivane) May 8, 2025
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.