ಇಂದೋರ್: ಏಪ್ರಿಲ್ 22 ರಂದು ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದ ಪಹಲ್ಗಾಮ್ ಭಯೋತ್ಪಾದಕ ದಾಳಿಯಿಂದ ಆಕ್ರೋಶಗೊಂಡ ಇಂದೋರ್ನ ಪ್ರಸಿದ್ಧ ಫುಡ್ ಕೋರ್ಟ್ 56 ಡುಕನ್ ಪಾಕಿಸ್ಥಾನಿ ಪ್ರವಾಸಿಗರನ್ನು ನಿಷೇಧಿಸಿದೆ.
56 ಡುಕನ್ ಮಾರಾಟಗಾರರು ತಮ್ಮ ಶಾಪ್ ಮುಂದೆ “ಹಂದಿಗಳು ಮತ್ತು ಪಾಕಿಸ್ಥಾನಿ ನಾಗರಿಕರಿಗೆ ಅವಕಾಶವಿಲ್ಲ” ಎಂದು ಬರೆದಿರುವ ಸ್ಟ್ಯಾಂಡಿಯನ್ನು ಇಟ್ಟಿದ್ದಾರೆ.
ಸ್ಥಳೀಯ ವ್ಯಾಪಾರಿಗಳ ಸಂಘ 56 ಡುಕನ್ ಮಾಡಿದ ಈ ಕ್ರಮವನ್ನು ಹಲವಾರು ನೆಟಿಜನ್ಗಳು ಬೆಂಬಲಿಸುತ್ತಿದ್ದು, ಈ ಸ್ಟ್ಯಾಂಡಿ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
ಧರ್ಮದ ಆಧಾರದ ಮೇಲೆ ಅಮಾಯಕ ಪ್ರವಾಸಿಗರನ್ನು ಹತ್ಯೆ ಮಾಡಿರುವುದನ್ನು ಸಂಘವು ಬಲವಾಗಿ ಖಂಡಿಸಿದೆ.
ಪಹಲ್ಗಾಮ್ ಭಯೋತ್ಪಾದಕ ದಾಳಿಯಲ್ಲಿ ಗುಂಡು ಹಾರಿಸಿ ಕೊಲ್ಲಲ್ಪಟ್ಟ 26 ಜನರಲ್ಲಿ ಇಂದೋರ್ನ ಸುಶೀಲ್ ನಥಾನಿಯಲ್ ಕೂಡ ಒಬ್ಬರು. ಗುರುವಾರ ಇಡೀ ಇಂದೋರ್ ಅವರನ್ನು ಭಾವುಕವಾಗಿ ಬೀಳ್ಕೊಟ್ಟಿತು ಮತ್ತು ಜುನಿ ಇಂದೋರ್ ಸ್ಮಶಾನದಲ್ಲಿ ಅವರನ್ನು ಸಮಾಧಿ ಮಾಡಲಾಯಿತು.
ಸಹೋದ್ಯೋಗಿಗಳು ಸೇರಿದಂತೆ ಸುಶೀಲ್ ಅವರ ಆಪ್ತರೊಂದಿಗೆ, ಸಚಿವೆ ತುಳಸಿ ಸಿಲಾವತ್ ಕೂಡ ಅಂತ್ಯಕ್ರಿಯೆಯ ಮೆರವಣಿಗೆಯಲ್ಲಿ ಭಾಗವಹಿಸಿದರು.
इंदौर के प्रसिद्ध स्ट्रीट फूड मार्केट, 56 दुकान पर, वहां के व्यापारी एसोसिएशन ने, पहलगाम हमले का विरोध अलग तरीके से किया है। इसके लिए एसोसिएशन ने बोर्ड लगाया है, जिस पर लिखा है, Pigs and Pakistani citizens not allowed at 56 Dukan"#Pahalgam #PahalgamTerroristAttack #Indore pic.twitter.com/krikbYqs2j
— शैलेन्द्र वर्मा (BharatExpress) (@shailendr_live) April 24, 2025
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.