ನವದೆಹಲಿ: ಪಹಲ್ಗಾಮ್ ಭಯೋತ್ಪಾದಕ ದಾಳಿಯ ಬೆನ್ನಲೇ ಗುರುವಾರ ನವದೆಹಲಿಯಲ್ಲಿರುವ ಪಾಕಿಸ್ಥಾನ ಹೈಕಮಿಷನ್ ಹೊರಗೆ ತೀವ್ರ ಉದ್ವಿಗ್ನತೆ ಉಂಟಾಗಿದೆ, ಪಹಲ್ಗಾಮ್ನಲ್ಲಿ ಕನಿಷ್ಠ 26 ಜನರು ಸಾವನ್ನಪ್ಪಿದ ಭೀಕರ ಭಯೋತ್ಪಾದಕ ದಾಳಿಯ ಎರಡು ದಿನಗಳ ನಂತರ ವ್ಯಕ್ತಿಯೊಬ್ಬ ಕೇಕ್ ಬಾಕ್ಸ್ನೊಂದಿಗೆ ಹೈಕಮಿಷನ್ ಕಡೆಗೆ ನಡೆದುಕೊಂಡು ಹೋಗುತ್ತಿರುವ ದೃಶ್ಯ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ಹಿನ್ನೆಲೆಯಲ್ಲಿ ಜನರು ಪಾಕ್ ಹೈಕಮಿಷನ್ ಮುಂಭಾಗದಲ್ಲಿ ನೆರೆದು ಪ್ರತಿಭಟನೆ ನಡೆಸುತ್ತಿದ್ದಾರೆ.
ಸಾರ್ವಜನಿಕ ಮತ್ತು ರಾಜತಾಂತ್ರಿಕ ಆಕ್ರೋಶದ ನಡುವೆ ಈ ಘಟನೆ ನಡೆದಿದೆ. ಕೇಕ್ ಹೊತ್ತ ವ್ಯಕ್ತಿಯ ಆನ್ಲೈನ್ ಕ್ಲಿಪ್ಗಳು ವೈರಲ್ ಆಗುತ್ತಿದ್ದಂತೆ ಪ್ರತಿಭಟನಾಕಾರರು ಹೈಕಮಿಷನ್ ಹೊರಗೆ “ಪಾಕಿಸ್ಥಾನ್ ಹೇ ಹೇ ಹೇ” ಎಂಬ ಘೋಷಣೆಗಳನ್ನು ಕೂಗುತ್ತಾ ಜಮಾಯಿಸಿದ್ದಾರೆ. ಹೆಚ್ಚಿನ ಸಾಮಾಜಿಕ ಮಾಧ್ಯಮ ಬಳಕೆದಾರರು ಕೇಕ್ ತರಿಸಿಕೊಂಡ ಪಾಕ್ ಹೈಕಮಿಷನ್ ಕ್ರಮವನ್ನು ಅಸಂವೇದನಾಶೀಲ ನಡೆ ಅಥವಾ ಸಂಭ್ರಮಾಚರಣೆಯ ಭಾಗ ಎಂದು ಆರೋಪಿಸಿದ್ದಾರೆ.
“ಒಂದು ದೊಡ್ಡ ಕೇಕ್, ಆತ್ಮವನ್ನು ತಣ್ಣಗಾಗಿಸುವ ಸಮಯ – ಇದು ಆಚರಣೆಯಲ್ಲದಿದ್ದರೆ, ಈ ಗೌಪ್ಯತೆ ಏಕೆ? ಪಾಕಿಸ್ತಾನ ಹೈಕಮಿಷನ್ನಲ್ಲಿ ನಾಚಿಕೆಗೇಡಿನ ಕೃತ್ಯ” ಎಂದು ಎಕ್ಸ್ನಲ್ಲಿ ಒಬ್ಬ ಬಳಕೆದಾರರು ಬರೆದಿದ್ದಾರೆ. ಮತ್ತೊಬ್ಬರು ವ್ಯಂಗ್ಯವಾಗಿ, “ನಾನು ದೆಹಲಿಯಲ್ಲಿ ಫ್ಲಾಟ್ ಹುಡುಕುತ್ತಿರುವುದರಿಂದ ನಾನು ಪಾಕಿಸ್ತಾನ ಹೈಕಮಿಷನ್ ಅನ್ನು ಖರೀದಿಸಲು ಅಥವಾ ಬಾಡಿಗೆಗೆ ಪಡೆಯಲು ಬಯಸುತ್ತೇನೆ” ಎಂದು ಕಾಮೆಂಟ್ ಮಾಡಿದ್ದಾರೆ.
ಇನ್ನೊಂದೆಡೆ ಪಹಲ್ಗಾಮ್ ದಾಳಿಗೆ ಪ್ರತಿಕ್ರಿಯೆಯಾಗಿ ಭಾರತವು ಪಾಕಿಸ್ಥಾನಿ ಮಿಲಿಟರಿ ಸಲಹೆಗಾರರನ್ನು ಹೊರಹಾಕಿದೆ, ಅಟ್ಟಾರಿ ಪೋಸ್ಟ್ ಅನ್ನು ಮುಚ್ಚಿದೆ
ಪಹಲ್ಗಾಮ್ ದಾಳಿಗೆ ದಿ ರೆಸಿಸ್ಟೆನ್ಸ್ ಫ್ರಂಟ್ (ಟಿಆರ್ಎಫ್) ಕಾರಣ ಎಂದು ಶಂಕಿಸಲಾಗಿದೆ, ಇದಕ್ಕೆ ಭಾರತ ಸರ್ಕಾರ ತೀವ್ರವಾಗಿ ಪ್ರತಿಕ್ರಿಯಿಸಿದೆ.
दिल्ली में पाक हाई कमीशन के अंदर केक ले जाता दिखा शख्स, पाक हाई कमीशन में किस बात का जश्न? #PahalgamTerroristAttack #Pahalgam #PakistanHighCommission #Pakistan | #ZeeNews pic.twitter.com/SvfOkfW2IJ
— Zee News (@ZeeNews) April 24, 2025
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.