ಮೀರತ್: ತನ್ನ 3ನೇ ವಯಸ್ಸಿನಲ್ಲಿ ಅಲ್ಪ ಸ್ವಲ್ಪ ಮಾತನಾಡಲು ಕಲಿತಿದ್ದ ಬಾಲಕನ ಮೆದುಳು ಈಗ ಬೆಳವಣಿಗೆ ಹೊಂದಿದವರ ಮಿದುಳಿನಂತೆ ಮಾಹಿತಿಗಳ ಉಗ್ರಾಣವಾಗಿ ಮಾರ್ಪಟ್ಟಿದೆ.
ಮೀರತ್ನ ಗಾಂಧಿನಗರ ಕಾಲೋನಿಯ ಈ ಪುಟ್ಟ ಬಾಲಕ ತನ್ನ 3 ವರ್ಷ ಪ್ರಾಯದಲ್ಲೇ ಜಗತ್ತಿನಾದ್ಯಂತ ಎಲ್ಲಾ ರಾಷ್ಟ್ರಗಳ ರಾಜಧಾನಿಗಳ ಹೆಸರು ನೆನಪಿಟ್ಟಿದ್ದ ಕಾರಣ 2014ರಲ್ಲಿ ಶಾಲೆಯೊಂದರಿಂದ ಮೇರತ್ನ ಗೋಗಲ್ ಬಾಯ್’ ಎಂಬ ಹೆಸರು ಪಡೆದಿದ್ದ.
ಭಾರತದ ಪ್ರಧಾನಿ ಯಾರು ಎಂದು ಕೇಳಿದರೆ ಈತ ದೇಶದ ಪ್ರಥಮ ಪ್ರಧಾನಿ ಪಂ.ಜವಾಹರ್ಲಾಲ್ ನೆಹರು ಅವರಿಂದ ಪ್ರಸ್ತುತ ನರೇಂದ್ರ ಮೋದಿ ವರೆಗಿನ ಎಲ್ಲಾ ಪ್ರಧಾನಿಗಳ ಹೆಸರುಗಳನ್ನೂ ಹೇಳುತ್ತಾನೆ. ಆತನ ನೆರೆಹೊರೆಯ ಮತ್ತು ನಗರದ ಜನರು ಈತನ ನೆನಪಿನ ಶಕ್ತಿಯ ಸಾಮರ್ಥ್ಯವನ್ನು ಕಂಡು ಬೆರಗಾಗಿದ್ದಾರೆ.
ಬಾಲಕನ ಹೆಚ್ಚುವರಿ ನೆನಪಿನ ಶಕ್ತಿ ಮತ್ತು ಪ್ರತಿಭೆಯನ್ನು ಗಮನಿಸಿರುವ ಬಿಜೆಪಿಯ ಉತ್ತರ ಪ್ರದೇಶ ಸಚಿವ ಲಕ್ಷ್ಮೀಕಾಂತ್ ಬಾಜಪಯಿ ಅವರು ಅನ್ಮೋಲ್ಗೆ ಪ್ರೋತ್ಸಾಹಿಸಿ ಎಲ್ಲಾ ರೀತಿಯ ಅಗತ್ಯ ಸಹಾಯ ನೀಡುವಂತೆ ಮುಖ್ಯಮಂತ್ರಿ ಅಖಿಲೇಶ್ ಯಾದವ್ಗೆ ಪತ್ರ ಬರೆದಿದ್ದಾರೆ.
ಅನ್ಮೋಲ್ ಈ ಹೆಸರು ಪಡೆದ ಬಳಿಕ ಸ್ವಾಮಿ ಕುಟುಂಬದ 3 ಮಂದಿ ಮಕ್ಕಳಿಗೆ ಮೀರತ್ನ ಅಧ್ಯಯನ್ ಶಾಲೆಯಲ್ಲಿ ಪ್ರವೇಶಾತಿ ನೀಡಲಾಗಿದೆ. ಅವರ ಶಿಕ್ಷಣ ಪೂರ್ಣಗೊಳ್ಳುವ ವರೆಗೂ ಉಚಿತ ಶಿಕ್ಷಣ, ಕಲಿಕಾ ಸಾಮಗ್ರಿ, ಸಮವಸ್ತ್ರ ನೀಡುವ ಭರವಸೆ ನಿಡಲಾಗಿದೆ.
ಮೂರು ವರ್ಷ ಪ್ರಾಯವಾದರೂ ಮಾತನಾಡಲು ಬಾರದಿದ್ದುದನ್ನು ಕಂಡು ಪೋಷಕರು ಚಿಂತಿತರಾಗಿದ್ದರು. ಆದರೆ ವೈದ್ಯರ ಮೇರೆಗೆ ಆತನನ್ನು ಶಾಲೆಗೆ ಸೇರಿಸಲಾಗಿತ್ತು. ಆತನ ತಾಯಿ ಆತನ ಅಕ್ಕನಿಗೆ ವಿವಿಧ ದೇಶಗಳು ಮತ್ತು ಅದರ ರಾಜಧಾನಿಗಳ ಹೆಸರನ್ನು ಕಲಿಸುತ್ತಿದ್ದ ಸಂದರ್ಭ ಗಮನಿಸಿದ್ದ ಅನ್ಮೋಲ್, ಮರುದಿನ ಅಕ್ಕನಿಗೆ ಮರು ಪ್ರಶ್ನಿಸಿದಾಗ ಅನ್ಮೋಲ್ ಉತ್ತರಿಸಲು ಆರಂಭಿಸಿದನು. ಇದನ್ನು ಕಂಡು ಆತನ ತಾಯಿ ಬೆರಗಾದರಲ್ಲದೇ ಸಂತೋಷಗೊಂಡರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.