ನವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇಂದು ಎನ್ಡಿಎ ಸಂಸದೀಯ ಪಕ್ಷದ ಪ್ರಮುಖ ಸಭೆಯನ್ನು ಉದ್ದೇಶಿಸಿ ಮಾತನಾಡಿದ್ದು, ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಸಂಸದರ ವರ್ತನೆ ಹೇಗಿರಬೇಕು ಎಂಬ ಬಗ್ಗೆ ಸಂಸದರಿಗೆ ಸಲಹೆ ನೀಡಿದರು.
ಸಭೆಯ ನಂತರ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು, ಪ್ರಧಾನಿ ಮೋದಿ ಹೇಳಿದ್ದನ್ನು ಎಲ್ಲರೂ ಗಂಭೀರವಾಗಿ ಪರಿಗಣಿಸಬೇಕು ಎಂದು ಹೇಳಿದರು.
“ಲೋಕಸಭಾ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ನಿನ್ನೆ ನಡೆದುಕೊಂಡ ರೀತಿ ಅಸಹನೀಯ, ಅವರು ಸ್ಪೀಕರ್ಗೆ ಬೆನ್ನು ತಿರುಗಿಸಿ, ನಿಯಮಬಾಹಿರವಾಗಿ ಮಾತನಾಡಿ ಸ್ಪೀಕರ್ಗೆ ಅವಮಾನ ಮಾಡಿದ್ದಾರೆ. ಆ ರೀತಿ ನಮ್ಮ ಪಕ್ಷ, ಎನ್ಡಿಎ ಸಂಸದರು ಮಾಡಬಾರದು” ಎಂದು ಮೋದಿಯನ್ನು ಉಲ್ಲೇಖಿಸಿ ರಿಜಿಜು ಹೇಳಿದರು.
ದೇಶಕ್ಕೆ ಆದ್ಯತೆ ನೀಡುವ ಮೂಲಕ ಕೆಲಸ ಮಾಡುವಂತೆ ಪ್ರಧಾನಿ ಮೋದಿ ಎನ್ಡಿಎ ಸಂಸದರನ್ನು ಕೇಳಿದ್ದಾರೆ ಎಂದು ರಿಜಿಜು ಹೇಳಿದ್ದಾರೆ.
“ಪ್ರಧಾನಿಯವರು ಸಂಸದರ ನಡವಳಿಕೆಗೆ ಸಂಬಂಧಿಸಿದಂತೆ ನಮಗೆ ಉತ್ತಮ ಮಾರ್ಗದರ್ಶನ ನೀಡಿದ್ದಾರೆ. ಪ್ರತಿಯೊಬ್ಬ ಸಂಸದರು ತಮ್ಮ ಕ್ಷೇತ್ರದ ವಿಷಯಗಳನ್ನು ನಿಯಮಾನುಸಾರವಾಗಿ ಸದನದಲ್ಲಿ ಚೆನ್ನಾಗಿ ಮಂಡಿಸಬೇಕು. ಇತರ ಆಸಕ್ತಿಯ ಪ್ರಮುಖ ವಿಷಯಗಳಲ್ಲಿ ಅದು ನೀರಾಗಿರಬಹುದು, ಪರಿಸರ ಅಥವಾ ಸಾಮಾಜಿಕ ಕ್ಷೇತ್ರವಾಗಿರಬಹುದು ಪರಿಣತಿಯನ್ನು ಬೆಳೆಸಿಕೊಳ್ಳಬೇಕು. ಸಂಸತ್ತಿನ ನಿಯಮಗಳು, ಸಂಸದೀಯ ಪ್ರಜಾಪ್ರಭುತ್ವ ವ್ಯವಸ್ಥೆಗೆ ಬದ್ಧವಾಗಿರಬೇಕು ಮತ್ತು ಉತ್ತಮ ಸಂಸದರಾಗಲು ತುಡಿತ ಇರಬೇಕು ಎಂದು ಪಿಎಂ ಸಲಹೆ ನೀಡಿದ್ದಾರೆ” ಎಂದು ರಿಜಿಜು ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.