News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಮಾನವ ಕಳ್ಳಸಾಗಾಣೆ ಮತ್ತು ಸೈಬರ್‌ ವಂಚನೆ: ಐವರನ್ನು ಬಂಧಿಸಿದ ಎನ್‌ಐಎ

ನವದೆಹಲಿ: ಸಂಘಟಿತ ಮಾನವ ಕಳ್ಳಸಾಗಣೆ ಮತ್ತು ಸೈಬರ್ ವಂಚನೆ ಸಿಂಡಿಕೇಟ್ ವಿರುದ್ಧದ ಪ್ರಮುಖ ಕಾರ್ಯಾಚರಣೆಯಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಐದು ವ್ಯಕ್ತಿಗಳನ್ನು ಬಂಧಿಸಿದೆ.

ರಾಜ್ಯ ಪೊಲೀಸ್ ಪಡೆಗಳೊಂದಿಗೆ ಎನ್‌ಐಎ ನಡೆಸಿದ ಜಂಟಿ ಕಾರ್ಯಾಚರಣೆಯು ಆರು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳನ್ನು ವ್ಯಾಪಿಸಿದ್ದು, ನಿನ್ನೆ 15 ಸ್ಥಳಗಳಲ್ಲಿ ಶೋಧ ನಡೆಸಲಾಗಿದೆ. ವಡೋದರಾ, ಗೋಪಾಲ್‌ಗಂಜ್, ನೈಋತ್ಯ ದೆಹಲಿ, ಗುರುಗ್ರಾಮ್ ಮತ್ತು ಚಂಡೀಗಢದಿಂದ ಬಂಧಿಸಲ್ಪಟ್ಟ ವ್ಯಕ್ತಿಗಳು ಭಾರತೀಯ ಯುವಕರನ್ನು ಸುಳ್ಳು ಉದ್ಯೋಗ ಭರವಸೆಯೊಂದಿಗೆ ವಿದೇಶಕ್ಕೆ ಸೆಳೆಯುವ ಜಾಲದ ಭಾಗವಾಗಿದ್ದರು ಎನ್ನಲಾಗಿದೆ.

ಇವರು ಲಾವೋಸ್ ಮತ್ತು ಕಾಂಬೋಡಿಯಾದಂತಹ ಸ್ಥಳಗಳಲ್ಲಿನ ನಕಲಿ ಕಾಲ್ ಸೆಂಟರ್‌ಗಳಲ್ಲಿ ಕೆಲಸದ ಆಮಿಷ ತೋರಿಸಿ ಜನರನ್ನು ಮೋಸದ ಜಾಲಕ್ಕೆ ಬೀಳಿಸುತ್ತಿದ್ದರು ಎನ್ನಲಾಗಿದೆ.

ಕಾರ್ಯಾಚರಣೆಯ ವೇಳೆ ಡಿಜಿಟಲ್ ಸಾಧನಗಳು, ಪಾಸ್‌ಪೋರ್ಟ್‌ಗಳು ಮತ್ತು ನಕಲಿ ಉದ್ಯೋಗ ಪತ್ರಗಳು ಸೇರಿದಂತೆ ಹಲವು ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ವಿವಿಧ ರಾಜ್ಯಗಳಲ್ಲಿ ಎಂಟು ಹೊಸ ಎಫ್‌ಐಆರ್‌ಗಳು ದಾಖಲಾಗಿವೆ.

ಈ ತಿಂಗಳ ಆರಂಭದಲ್ಲಿ ಎನ್‌ಐಎ ತನಿಖೆಯು ಸಿಂಡಿಕೇಟ್ ವ್ಯಾಪಕವಾದ ಅಂತರರಾಷ್ಟ್ರೀಯ ಸಂಪರ್ಕಗಳನ್ನು ಹೊಂದಿದ್ದು, ಅಕ್ರಮ ಗಡಿ ದಾಟುವಿಕೆ ಮತ್ತು ಸೈಬರ್ ವಂಚನೆ ಚಟುವಟಿಕೆಗಳನ್ನು ಸುಗಮಗೊಳಿಸುತವ ಕೃತ್ಯದಲ್ಲಿ ತೊಡಗಿವೆ ಎಂಬುದನ್ನು ಬಹಿರಂಗಪಡಿಸಿತು.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top