ನವದೆಹಲಿ: ಉತ್ತರಾಖಂಡದ ನೈನಿತಾಲ್-ಉಧಮ್ ಸಿಂಗ್ ನಗರ ಕ್ಷೇತ್ರದ ಭಾಗವಾಗಿರುವ ರುದ್ರಪುರದಲ್ಲಿ ಇಂದು ಪ್ರಧಾನಿ ನರೇಂದ್ರ ಮೋದಿಯವರು ಬಿಜೆಪಿ ಸಮಾವೇಶವನ್ನು ಉದ್ದೇಶಿಸಿ ಮಾತನಾಡುವ ಮೂಲಕ ಲೋಕಸಭಾ ಚುನಾವಣಾ ಪ್ರಚಾರಕ್ಕೆ ಚಾಲನೆ ನೀಡಿದರು.
ರುದ್ರಪುರದಲ್ಲಿ ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ”ಕೇವಲ 10 ವರ್ಷಗಳ ಕಾಲ ಅಧಿಕಾರದಿಂದ ದೂರ ಉಳಿದ ನಂತರ, ಕಾಂಗ್ರೆಸ್ಸಿಗರು ಭಾರತದಲ್ಲಿ ಬೆಂಕಿ ಹೊತ್ತಿಸುವ ಬಗ್ಗೆ ಮಾತನಾಡಲು ಪ್ರಾರಂಭಿಸಿದ್ದಾರೆ. ಅಂತಹವರನ್ನು ಶಿಕ್ಷಿಸುತ್ತೀರಾ? ಈ ಬಾರಿ ಅವರನ್ನು ಕ್ಷೇತ್ರದಲ್ಲಿ ಇರಲು ಬಿಡಬೇಡಿ. ಕಾಂಗ್ರೆಸ್ಗೆ ಈಗ ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇಲ್ಲ. ಭಾರತವನ್ನು ಅರಾಜಕತೆ ಮತ್ತು ಅಸ್ಥಿರತೆಯತ್ತ ತಳ್ಳಲು ಕಾಂಗ್ರೆಸ್ ಬಯಸುತ್ತಿದೆ. ಕರ್ನಾಟಕದಲ್ಲಿ ಕಾಂಗ್ರೆಸ್ ನಾಯಕರೊಬ್ಬರು ದೇಶವನ್ನು ಎರಡು ಭಾಗ ಮಾಡುವ ಬಗ್ಗೆ ಮಾತನಾಡಿದ್ದಾರೆ. ದೇಶವನ್ನು ವಿಭಜಿಸುವ ಮಾತನಾಡುವವರಿಗೆ ಶಿಕ್ಷೆಯಾಗಬೇಕಲ್ಲವೇ? ಅವರನ್ನು ಶಿಕ್ಷಿಸುವ ಬದಲು ಕಾಂಗ್ರೆಸ್ ತನ್ನ ನಾಯಕನಿಗೆ ಚುನಾವಣಾ ಟಿಕೆಟ್ ನೀಡಿದೆ” ಎಂದಿದ್ದಾರೆ.
ಭ್ರಷ್ಟರು ನನಗೆ ಬೆದರಿಕೆ ಹಾಕುತ್ತಿದ್ದಾರೆ, ನಿಂದನೆ ಮಾಡುತ್ತಿದ್ದಾರೆ. ಭ್ರಷ್ಟರು ಜೈಲಿಗೆ ಹೋಗಬೇಕಲ್ಲವೇ; ಅವರ ವಿರುದ್ಧ ಕ್ರಮ ಮುಂದುವರಿಯುತ್ತದೆ ಎಂದರು. ಅಲ್ಲದೇ “ನಿಯತ್ ಸಹಿ ತೋ ನತೀಜೆ ಭಿ ಸಹಿ (ಪ್ರಾಮಾಣಿಕವಾಗಿದ್ದರೆ ಫಲಿತಾಂಶ ಕೂಡ ಸರಿಯಾಗಿಯೇ ಇರುತ್ತದೆ)” ಎಂದರು.
”ಉತ್ತರಾಖಂಡದಲ್ಲಿ ಹಿಂದಿನ 50-60 ವರ್ಷಗಳಿಗಿಂತ ಕಳೆದ ಹತ್ತು ವರ್ಷಗಳಲ್ಲಿ ಹೆಚ್ಚಿನ ಅಭಿವೃದ್ಧಿಯನ್ನು ಮಾಡಲಾಗಿದೆ. ನಾವು ಮಹಿಳೆಯರ ಸಬಲೀಕರಣಕ್ಕಾಗಿ ಯೋಜನೆಯನ್ನು ಪ್ರಾರಂಭಿಸಿದ್ದೇವೆ. ‘ನಮೋ ಡ್ರೋನ್ ದೀದಿ’ ಯೋಜನೆಯಡಿಯಲ್ಲಿ, ಲಕ್ಷಾಂತರ ರೂಪಾಯಿ ನೆರವು ನೀಡುವ ಮೂಲಕ ನಮ್ಮ ಸಹೋದರಿಯರು ಮತ್ತು ಹೆಣ್ಣುಮಕ್ಕಳಿಗೆ ಡ್ರೋನ್ ಪೈಲಟ್ಗಳಾಗಲು ಸಹಾಯ ಮಾಡಲಾಗುತ್ತಿದೆ. ಇದು ಉತ್ತರಾಖಂಡ್ನಲ್ಲಿರುವ ನಮ್ಮ ಹೆಣ್ಣುಮಕ್ಕಳು ಮತ್ತು ಸಹೋದರಿಯರಿಗೂ ಪ್ರಯೋಜನವನ್ನು ನೀಡುತ್ತದೆ” ಎಂದು ಪ್ರಧಾನಿ ಹೇಳಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.