ನವದೆಹಲಿ: ರಾಹುಲ್ ಗಾಂಧಿಯವರ ‘ಶಕ್ತಿ’ ಹೇಳಿಕೆಯ ವಿರುದ್ಧ ಬಿಜೆಪಿ ಬುಧವಾರ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದು, ಅವರು ಹಿಂದೂ ಧರ್ಮ ಮತ್ತು ಹಿಂದೂಗಳನ್ನು ಅವಮಾನಿಸಿದ್ದಾರೆ, ಸ್ತ್ರೀದ್ವೇಷ ಹರಡುತ್ತಿದ್ದಾರೆ ಎಂದು ಆರೋಪಿಸಿದೆ. ಅಲ್ಲದೇ ಇವಿಎಂ ಬಳಕೆಯನ್ನು ಎತ್ತಿಹಿಡಿದ ಸುಪ್ರೀಂಕೋರ್ಟ್ನ ಘನತೆಯನ್ನು ಕಡಿಮೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
ಪಕ್ಷವು ಮುಂಬೈನಲ್ಲಿ ರಾಹುಲ್ ಗಾಂಧಿಯವರ ವಾಕ್ಯಗಳನ್ನು ದೂರಿನಲ್ಲಿ ಅಕ್ಷರಶಃ ಉಲ್ಲೇಖಿಸಿ ಇದು ಶಕ್ತಿ ಎಂದೂ ಕರೆಯಲ್ಪಡುವ ದುರ್ಗಾ ಮಾತೆಯ ಆರಾಧಕರ ವಿರುದ್ಧ ದ್ವೇಷವನ್ನು ಹರಡುತ್ತದೆ ಎಂದು ಹೇಳಿಕೊಂಡಿದೆ.
“ಸಮಾವೇಶವನ್ನು ಉದ್ದೇಶಿಸಿ ಮಾತನಾಡುವಾಗ ರಾಹುಲ್ ಗಾಂಧಿ ಅವರು – ಹಿಂದೂ ಧರ್ಮದಲ್ಲಿ ಒಂದು ಶಬ್ದವಿದೆ, ಅದುವೇ ಶಕ್ತಿ. ನಾವು ಈ ಶಕ್ತಿಯ ವಿರುದ್ಧ ಹೋರಡುತ್ತಿದ್ದೇವೆ. ಆದರೆ ಸವಲು ಎಂದರೆ ಈ ಶಕ್ತಿ ಯಾವುದು ಎಂಬುದು? ರಾಜನ ಆತ್ಮ ಇವಿಎಂ ಆಗಿದೆ. ಇದು ಸತ್ಯ, ರಾಜನ ಆತ್ಮ ಇವಿಎಂನಲ್ಲಿ ಇದೆ” ಎಂದು ರಾಹುಲ್ ಹೇಳಿರುವುದಾಗಿ ಬಿಜೆಪಿಯ ಜ್ಞಾಪಕ ಪತ್ರದಲ್ಲಿ ಹೇಳಲಾಗಿದೆ.
“ಹಿಂದೂ ಧರ್ಮದಲ್ಲಿ, ದುರ್ಗಾ ದೇವಿಯು ಅತ್ಯಂತ ಪೂಜ್ಯ ದೇವತೆಗಳಲ್ಲಿ ಒಂದಾಗಿದೆ ಮತ್ತು ಶಕ್ತಿ ಎಂಬ ಹೆಸರಿನಿಂದ ಪ್ರಾರ್ಥಿಸಲಾಗುತ್ತದೆ. ಹಿಂದೂ ಧರ್ಮ ಮತ್ತು ಹಿಂದೂ ದೇವರುಗಳ ವಿರುದ್ಧ ಈ ಅಸಹ್ಯಕರ ಹೇಳಿಕೆಯು ಹಿಂದೂಗಳ ಭಾವನೆಗಳನ್ನು ಆಳವಾಗಿ ಘಾಸಿಗೊಳಿಸಿದೆ, ಏಕೆಂದರೆ ಇದು ‘ಶಕ್ತಿ’ಗೆ ಸಂಬಂಧಿಸಿದ ಧಾರ್ಮಿಕ ಮೌಲ್ಯಗಳನ್ನು ಅವಮಾನಿಸುವ ದುರುದ್ದೇಶಪೂರಿತ ಉದ್ದೇಶದಿಂದ ನಿರೂಪಿಸಲ್ಪಟ್ಟಿದೆ ಮತ್ತು ಧರ್ಮಗಳ ನಡುವೆ ದ್ವೇಷವನ್ನು ಉಂಟುಮಾಡುತ್ತದೆ” ಎಂದಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.