ನವದೆಹಲಿ: ಮಾಜಿ ಏರ್ ಚೀಫ್ ಮಾರ್ಷಲ್ ಎಸ್.ಪಿ. ತ್ಯಾಗಿ ಅವರ ಕುಟುಂಬವು 3,700 ಕೋಟಿ ವಿವಿಐಪಿ ಹೆಲಿಕಾಪ್ಟರ್ ವ್ಯವಹಾರ(ಚಾಪರ್ ಒಪ್ಪಂದ)ದಲ್ಲಿ ಯುಕೆ ಮೂಲದ ಅಗಸ್ಟಾ ವೆಸ್ಟ್ಲ್ಯಾಂಡ್ನ ಮಧ್ಯವರ್ತಿಗಳ ಸಹಾಯದಿಂದ 1.5 ಮಿಲಿಯನ್ ಯುರೋ (2.49 ಕೋಟಿ) ಲಂಚ ಪಡೆದಿರುವುದಾಗಿ ಜಾರಿ ನಿರ್ದೇಶನಾಲಯ ತಿಳಿಸಿದೆ.
ಜಾರಿ ನಿರ್ದೇಶನಾಲಯವು ಉತ್ತರ ಪ್ರದೇಶದ ಕೌಶಂಬಿ, ನೋಯ್ಡಾ ಮತ್ತು ಹರಿಯಾಣದ ಗುರ್ಗಾಂವ್ನಲ್ಲಿ ಸಂಜೀವ್, ಸಂದೀಪ್ ಹಾಗೂ ರಾಜೀವ್ ತ್ಯಾಗಿ ಅವರಿಗೆ ಸೇರಿದ 6.2 ಕೋಟಿ ಮೌಲ್ಯದ ಆಸ್ತಿಯನ್ನು ತಾತ್ಕಾಲಿಕವಾಗಿ ಲಗತ್ತಿಸಿದೆ.
ಇಟಲಿ ಸಂಸ್ಥೆಯಾದ ಫಿನ್ಮೆಕಾನಿಕಾ ಅಂಗಸಂಸ್ಥೆಯಾಗಿರುವ ಅಗಸ್ಟಾ ವೆಸ್ಟ್ಲ್ಯಾಂಡ್ನಿಂದ 12 ಹೆಲಿಕಾಪ್ಟರ್ಗಳನ್ನು ಪಡೆಯುವ ಸಂಬಂಧ 58 ಮಿಲಿಯನ್ ಯೂರೋಗಳನ್ನು ಮಧ್ಯವರ್ತಿಗಳಾದ ಕ್ರಿಸ್ಟಿಯನ್ ಮೈಕೆಲ್, ಕಾರ್ಲೋ ಜೆರೋಸಾ ಹಾಗೂ ಗ್ಯೂಡೋ ರಾಲ್ಫ್ ಹ್ಯಾಷ್ಕೆ ಮೂಲಕ ಪಾವತಿಸಲಾಗಿದೆ. ಈ ವ್ಯವಹಾರದಲ್ಲಿ ಸಹಾಯಹಸ್ತ ನೀಡಿದವರಿಗೆ ಲಂಚ ಪಾವತಿಸಲಾಗಿದೆ ಎಂದು ನಿರ್ದೇಶನಾಲಯ ಹೇಳಿದೆ.
ಏರ್ ಚೀಫ್ ಮಾರ್ಷಲ್ ತ್ಯಾಗಿ ಅವರ ಸೋದರರಿಗೆ ಹಷ್ಕೆ ಹಾಗೂ ಜೆರೋಸಾ ಅವರು ತಮ್ಮ ಟುನೀಶಿಯಾ ಆಧಾರಿತ ಕಂಪೆನಿಗಳಾದ ಗೋರ್ಡಿಯನ್ ಸರ್ವೀಸಸ್ ಸಾರ್ಲ್ ಮತ್ತು ಐಡಿಎಸ್ ಟುನೀಶಿಯ ಮೂಲಕ ಪಾವತಿಸಿದೆ ಜಾರಿ ನಿರ್ದೇಶನಾಲಯದ ತನಿಖೆಯಿಂದ ಬಹಿರಂಗಗೊಂಡಿದೆ.
ತ್ಯಾಗಿ ಸಹೋದರರಿಗೆ ಬ್ಯಾಂಕಿಂಗ್ ಸಂಪರ್ಕದ ಮೂಲಕ 2004ರಿಂದ 2011ರ ನಡುವೆ 4.5 ಲಕ್ಷ ನೀಡಲಾಗಿದ್ದು, ಫೆಬ್ರವರಿ 2010ರಲ್ಲಿ ಒಪ್ಪಂದಕ್ಕೆ ಸಹಿ ಮಾಡಿದ ಬಳಿಕ ಉಳಿದ ಹಣವನ್ನು ನೀಡಲಾಗಿದೆ ಎಂದು ನಿರ್ದೇಶನಾಲಯದ ವಕ್ತಾರರು ತಿಳಿಸಿದ್ದಾರೆ.
ಸಂಸ್ಥೆಯು ಮಧ್ಯವರ್ತಿಗಳ ಸೇವೆಗಳನ್ನು ಕೊಂಡುಕಂಡಿದ್ದರು ಎಂದು ಇಟಲಿಯ ಫಿರ್ಯಾದಿಗಳು ಆಪಾದಿಸಿದ ಬಳಿಕ 2014ರ ಜನವರಿ ತಿಂಗಳಿನಲ್ಲಿ ಭಾರತ ಸರ್ಕಾರ ಚಾಪರ್ ಒಪ್ಪಂದವನ್ನು ಕೈಬಿಟ್ಟಿತು. ಕೇಂದ್ರ ತನಿಖಾ ದಳ ಮಾರ್ಚ್ 2013ರಲ್ಲಿ ಮಾಜಿ ಏರ್ ಚೀಫ್ ಮಾರ್ಷಲ್ ಹಾಗೂ ಅವರ ಮೂವರು ಸಹೋದರರನ್ನು ಮತ್ತಿತರರ ವಿರುದ್ಧ ಪ್ರಕರಣ ದಾಖಲಿಸಿತ್ತು.
ಒಂದು ವರ್ಷದ ಹಿಂದೆ ನಿರ್ದೇಶನಾಲಯ ಗೌತಮ್ ಖೈತಾನ್ ಅವರನ್ನು ಚಂಡೀಗಢ ಮೂಲದ ಏರೋಮ್ಯಾಟ್ರಿಕ್ಸ್ ಹಾಗೂ ಮೊರಿಷಿಯಸ್ ಮೂಲದ ಇಂಟರ್ಸ್ಟೆಲ್ಲಾರ್ ಮೂಲಕ ಧನ ಸಹಾಯ ಮಾಡಿದ್ದಕ್ಕಾಗಿ ಬಂಧಿಸಲಾಗಿತ್ತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.