ನವದೆಹಲಿ: ರಾಷ್ಟ್ರ ಮತ್ತು ಶ್ರೀ ರಾಮನ ಕುರಿತು ಡಿಎಂಕೆ ನಾಯಕ ಎ. ರಾಜಾ ಅವರು ನೀಡಿರುವ ಆಕ್ಷೇಪಾರ್ಹ ಹೇಳಿಕೆಗಳನ್ನು ಬಿಜೆಪಿ ಖಂಡಿಸಿದ್ದು, ಪ್ರತಿಪಕ್ಷಗಳ ಮೇಲೆ ತೀವ್ರವಾಗಿ ಹರಿಹಾಯ್ದಿದೆ.
ನವದೆಹಲಿಯಲ್ಲಿ ಮಾಧ್ಯಮಗಳಿಗೆ ಮಾಹಿತಿ ನೀಡಿದ ಪಕ್ಷದ ಹಿರಿಯ ನಾಯಕ ರವಿಶಂಕರ್ ಪ್ರಸಾದ್, ಭಾರತೀಯ ತತ್ವಗಳನ್ನು ಅವಮಾನಿಸುವುದು ಮತ್ತು ಭಾರತದ ಕಲ್ಪನೆಯನ್ನು ಪ್ರಶ್ನಿಸುವುದು ಐಎನ್ಡಿಐಎಯ ವಿಶಿಷ್ಟ ಲಕ್ಷಣವಾಗಿದೆ ಎಂಬುದು ಸ್ಪಷ್ಟವಾಗಿದೆ ಎಂದು ಆರೋಪಿಸಿದರು.
ರಾಜಾ ಅವರ ಹೇಳಿಕೆಯು ಭಾರತದ ಸಾಂಸ್ಕೃತಿಕ ನಂಬಿಕೆಗಳನ್ನು ಕೆಳಮಟ್ಟಕ್ಕಿಳಿಸಿದೆ. ಈ ಬಗ್ಗೆ ಡಿಎಂಕೆ ಮಿತ್ರ ಕಾಂಗ್ರೆಸ್ ಉತ್ತರ ನೀಡಬೇಕು ಎಂದು ಆಗ್ರಹಿಸಿದರು.
“ಭಾರತೀಯ ಸಂಸ್ಕೃತಿ ಮತ್ತು ಸನಾತನ ಧರ್ಮವನ್ನು ಅವಮಾನಿಸುವುದು ಪ್ರತಿಪಕ್ಷಗಳ ಮೈತ್ರಿ ಇಂಡಿ ಒಕ್ಕೂಟದ ಅಜೆಂಡವಾಗಿದೆ ಎಂದು ಅವರು ವಾಗ್ದಾಳಿ ನಡೆಸಿದರು. ಸೋನಿಯಾ ಗಾಂಧಿ ಇದನ್ನು ಸರಿ ಎಂದು ಪರಿಗಣಿಸುತ್ತಾರೆಯೇ? ಎಂದು ರವಿಶಂಕರ್ ಪ್ರಸಾದ್ ಪ್ರಶ್ನಿಸಿದ್ದಾರೆ.
ಸಾರ್ವಜನಿಕ ಸಭೆಯಲ್ಲಿ ಎ.ರಾಜಾ ಅವರು, ಒಂದು ರಾಷ್ಟ್ರ ಎಂದರೆ ಒಂದು ಭಾಷೆ, ಒಂದು ಸಂಪ್ರದಾಯ ಮತ್ತು ಒಂದು ಸಂಸ್ಕೃತಿ ಎಂದು ಹೇಳಿದ್ದರು, ಆದರೆ ಭಾರತದಲ್ಲಿ ಹಲವಾರು ಸಂಪ್ರದಾಯಗಳು ಮತ್ತು ಸಂಸ್ಕೃತಿಗಳಿವೆ. ಆದ್ದರಿಂದ ಇದು ರಾಷ್ಟ್ರವಲ್ಲ, ಆದರೆ ಉಪಖಂಡವಾಗಿದೆ. ಅಲ್ಲದೆ ರಾಮಾಯಣ ಮತ್ತು ರಾಮನ ಮೇಲೆ ನಂಬಿಕೆ ಇಲ್ಲ ಎಂದು ಹೇಳಿದ್ದಾರೆ. ಇದು ವಿವಾದವನ್ನು ಸೃಷ್ಟಿಸಿದ್ದು, ದೇಶಭಕ್ತರ ಆಕ್ರೋಶಕ್ಕೆ ಕಾರಣವಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.