News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಶೀಘ್ರದಲ್ಲೇ ರೈಲು ನಿಯಂತ್ರಣ ಪ್ರಾಧಿಕಾರ ಸ್ಥಾಪನೆ

suresh prabhuನವದೆಹಲಿ: ರೈಲ್ವೆ ಶುಲ್ಕ ಮತ್ತು ಸರಕುಗಳ ರಚನೆಯಲ್ಲಿನ ರಾಜಕೀಯ ತೀರ್ಮಾನಗಳನ್ನು ಅಂತ್ಯಗೊಳಿಸುವ ಗುರಿಯನ್ನು ಹೊಂದಿರುವ ನಿಟ್ಟಿನಲ್ಲಿ ಸ್ವತಂತ್ರ ಸುಂಕ ಮತ್ತು ಸುರಕ್ಷತೆ ನಿಯಂತ್ರಣ ಪ್ರಾಧಿಕಾರವನ್ನು ಸ್ಥಾಪಿಸಲು ರೈಲ್ವೆ ಸಚಿವ ಸುರೇಶ್ ಪ್ರಭು ಮುಂದಾಗಿದ್ದಾರೆ.

ರೈಲು ನಿಯಂತ್ರಕವನ್ನು ಅಳವಡಿಸುವ ಮೂಲಕ ಮಾರುಕಟ್ಟೆ ಆಧಾರದಲ್ಲಿ ರೈಲು ಶುಲ್ಕ ಹಾಗೂ ಸರಕುಗಳ ರಚನೆಯನ್ನು ರೂಪಿಸುವ ನಿರ್ಧಾವನ್ನು ಈ ವರ್ಷ ಕೈಗೊಳ್ಳಲಾಗುವುದು ಎಂದು ಪ್ರಭು ತಿಳಿಸಿದ್ದಾರೆ.

ಎನ್‌ಡಿಎ ಸರ್ಕಾರವು ಒಂದು ಪ್ರಮುಖ ಸುಧಾರಣಾ ನೀತಿಯೊಂದಿಗೆ ಕಳೆದ ದಶಕಗಳಲ್ಲಿ ಹಲವಾರು ರೈಲ್ವೆ ಮಂತ್ರಿಗಳು ರೈಲು ಹಣಕಾಸಿನ ವೆಚ್ಚದಲ್ಲಿ ತೋರುತ್ತಿದ್ದ ’ಪ್ರಾಯೋಜಕತ್ವ’ವನ್ನು ಕೊನೆಗೊಳಿಸಲು ನಿರ್ದೇಶನ ನೀಡಿದೆ. ಯುಪಿಎ ಸರ್ಕಾರದ ಆಡಳಿತದಲ್ಲಿ ಪ್ರಯಾಣ ದರವನ್ನು ಹೆಚ್ಚಿಸಿಲ್ಲ. ಇದು ಮಂತ್ರಿಗಳ ರಾಜಕೀಯ ಹಿತಾಸಕ್ತಿಗಳನ್ನು ಪೂರೈಸಿದ್ದರೂ, ಪ್ರಯಾಣಿಕರ ವಿಭಾಗದಲ್ಲಿ ಆರ್ಥಿಕತೆ ಕುಗ್ಗುತ್ತಾ ಬಂದಿದೆ. ಪ್ರಯಾಣಿಕರ ವಿಭಾಗದ ಆದಾಯದಲ್ಲಿ ಕಳೆದ ವರ್ಷ ರೂ.29,000ರಷ್ಟು ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ರೈಲು ನಿಯಂತ್ರಕವು ಶುಲ್ಕ ಮತ್ತು ಸರಕು ರಚನೆಯ ಜೊತೆಗೆ ದಕ್ಷತೆ ಹಾಗೂ ಪ್ರಯಾಣಿಕರ ಸುರಕ್ಷತೆಯ ವಿಷಯಗಳನ್ನು ಗಮನಿಸುತ್ತದೆ. ಅಲ್ಲದೇ ರೈಲ್ವೆ ಮತ್ತು ಖಾಸಗಿ ಹೂಡಿಕೆದಾರರ ನಡುವಿನ ವಿವಾದಗಳನ್ನು ತಡೆಯುವ ಕಾರ್ಯ ಮಾಡುತ್ತದೆ.

ನೀತಿ ಆಯೋಗ ಉಪಾಧ್ಯಕ್ಷ ಅರವಿಂದ ಪನಗಾರಿಯಾ ಅವರ ಸಹಯೋಗದಲ್ಲಿ ರೈಲು ನಿಯಂತ್ರಣ ಸ್ಥಾಪಿಸಲು ಕರಡು ಮಸೂದೆಯನ್ನು ತಯಾರಿಸಲಾಗಿದ್ದು, ಈ ಕಾಯ್ದೆಯನ್ನು ಮುಂಬರುವ ಚಳಿಗಾಲದ ಅಧಿವೇಶನದಲ್ಲಿ ಮಂಡಿಸುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top