ನವದೆಹಲಿ: ಕೋವಿಡ್-19 ಲಸಿಕೆಗಳು ಭಾರತೀಯ ಯುವ ವಯಸ್ಕರಲ್ಲಿ ಹಠಾತ್ ಸಾವಿನ ಅಪಾಯವನ್ನು ಹೆಚ್ಚಿಸಿಲ್ಲ ಎಂದು ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ಐಸಿಎಂಆರ್) ಮಂಗಳವಾರ ಹೇಳಿದೆ. ತೀವ್ರ ಸ್ವರೂಪದ ಕೋವಿಡ್-19ನಿಂದ ಬಳಲಿದ್ದು , ಹಠಾತ್ ಸಾವಿನ ಕುಟುಂಬ ಇತಿಹಾಸ ಮತ್ತು ಕೆಲವು ಜೀವನಶೈಲಿ ನಡವಳಿಕೆಗಳು ಭಾರತದಲ್ಲಿ ಯುವಕರಲ್ಲಿ ವಿವರಿಸಲಾಗದ ಹಠಾತ್ ಸಾವಿನ ಸಂಭವವನ್ನು ಹೆಚ್ಚಿಸಿವೆ ಎಂದು ವೈದ್ಯಕೀಯ ಸಂಶೋಧನಾ ಸಂಸ್ಥೆ ಹೇಳಿದೆ.
ಭಾರತದಲ್ಲಿ 18-45 ವರ್ಷ ವಯಸ್ಸಿನ ವಯಸ್ಕರಲ್ಲಿ ವಿವರಿಸಲಾಗದ ಹಠಾತ್ ಸಾವುಗಳಿಗೆ ಸಂಬಂಧಿಸಿದ ಅಂಶಗಳ ಬಗ್ಗೆ ಐಸಿಎಂಆರ್ ಅಧ್ಯಯನಗಳನ್ನು ನಡೆಸಿದೆ.
ಭಾರತದಲ್ಲಿ ಆರೋಗ್ಯವಂತ ವಯಸ್ಕರಲ್ಲಿ ಹಠಾತ್ ಸಾವಿನ ವರದಿಗಳು ಹೊರಹೊಮ್ಮಲು ಪ್ರಾರಂಭಿಸಿದ ನಂತರ ಸಂಶೋಧಕರು ಸಂಶೋಧನೆಗಳನ್ನು ಆರಂಭಿಸಿದ್ದಾರೆ. ಹಠಾತ್ ಸಾವಿಗೆ ಕೋವಿಡ್ ಲಸಿಕೆಯೇ ಕಾರಣ ಎಂಬ ಮಾತುಗಳು ಕೇಳಿ ಬಂದಿದ್ದವು. ಆದರೆ ಅಧ್ಯಯನಗಳು ಈ ಅಂಶವನ್ನು ತಳ್ಳಿ ಹಾಕಿದೆ. ಅಲ್ಲದೇ ತೀವ್ರ ಸ್ವರೂಪದ ಕೋವಿಡ್ನಿಂದ ಬಳಲಿದ ಜನರು ಕಠಿಣ ದೈಹಿಕ ಕೆಲಸದಿಂದ ಎರಡು ವರ್ಷ ದೂರವಿರಬೇಕು ಎಂದು ಕೇಂದ್ರ ಆರೋಗ್ಯ ಸಚಿವರು ಇತ್ತೀಚಿಗೆ ಹೇಳಿದ್ದರು. ಈ ಮೂಲಕ ಕೋವಿಡ್ ಲಸಿಕೆ ಲ್ಲ, ಕೋವಿಡ್ ಸಾಂಕ್ರಾಮಿಕವೇ ಸ್ವಲ್ಪ ಮಟ್ಟಿಗೆ ಹಠಾತ್ ಸಾವಿಗೆ ಕೊಡುಗೆ ನೀಡುತ್ತಿದೆ ಎಂಬ ಸೂಚನೆ ನೀಡಿದ್ದರು.
ICMR 18-45 ವರ್ಷ ವಯಸ್ಸಿನ ಭಾರತೀಯ ವಯಸ್ಕರಲ್ಲಿ ವಿವರಿಸಲಾಗದ ಹಠಾತ್ ಸಾವುಗಳ ಬಗ್ಗೆ ಅಧ್ಯಯನ ಮಾಡುತ್ತಿದೆ. ಸಂಶೋಧಕರು 729 ಪ್ರಕರಣಗಳು ಮತ್ತು 2,916 ನಿಯಂತ್ರಣಗಳನ್ನು ದಾಖಲಿಸಿದ್ದಾರೆ. ಇಲ್ಲಿ ಅಧ್ಯಯನ ಮಾಡಲಾದ ಪ್ರಕರಣಗಳು 18-45 ವರ್ಷ ವಯಸ್ಸಿನ ಆರೋಗ್ಯವಂತ ವ್ಯಕ್ತಿಗಳು ಯಾವುದೇ ಸಹ-ಅಸ್ವಸ್ಥತೆಗಳಿಲ್ಲದೆ ಮರಣವನ್ನಪ್ಪುತ್ತಿರುವ ಬಗ್ಗೆ ಸಂಶೋಧನೆ ನಡೆಸಲಾಗುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.