ನವದೆಹಲಿ: ಭಾರತವು ಪ್ರತಿ ವರ್ಷ ಧನ್ವಂತರಿ ಜಯಂತಿ ಅಥವಾ ಧಂತೇರಸ್ ಸಂದರ್ಭದಲ್ಲಿ ರಾಷ್ಟ್ರೀಯ ಆಯುರ್ವೇದ ದಿನವನ್ನು ಆಚರಿಸುತ್ತದೆ. ಆಯುರ್ವೇದ ದಿನ-2023 ರ ಥೀಮ್ ‘ಒಂದು ಆರೋಗ್ಯಕ್ಕಾಗಿ ಆಯುರ್ವೇದ’ ಎಂಬ ಟ್ಯಾಗ್ ಲೈನ್ ಜೊತೆ ‘ಪ್ರತಿದಿನ ಎಲ್ಲರಿಗೂ ಆಯುರ್ವೇದ’ ಎಂಬುದಾಗಿದೆ.
ಆಯುರ್ವೇದವನ್ನು ಮುಖ್ಯವಾಹಿನಿಗೆ ಮತ್ತಷ್ಟು ಉತ್ತೇಜಿಸುವ ಉದ್ದೇಶದಿಂದ 2016 ರಲ್ಲಿ ರಾಷ್ಟ್ರೀಯ ಆಯುರ್ವೇದ ದಿನವನ್ನು ಆಚರಿಸುತ್ತಾ ಬರಲಾಗುತ್ತಿದೆ.
ಆಯುರ್ವೇದವನ್ನು ಶ್ರೀಮಂತ ಭಾರತೀಯ ಸಂಸ್ಕೃತಿ ಮತ್ತು ಸಂಪ್ರದಾಯದ ಗುರುತುಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ. ‘ಆಯುರ್ವೇದ’ ಎಂಬ ಪದವು ‘ಜೀವನದ ಜ್ಞಾನ’ ಎಂಬ ಎರಡು ಸಂಸ್ಕೃತ ಪದಗಳನ್ನು ಒಳಗೊಂಡಿದೆ: ‘ಆಯು’ ಅಂದರೆ ‘ಜೀವನ’ ಮತ್ತು ‘ವೇದ’ ಎಂದರೆ ‘ಜ್ಞಾನ’ ಅಥವಾ ‘ವಿಜ್ಞಾನ’. ಅಂತ್ಯವಿಲ್ಲದ ಸಾಮರ್ಥ್ಯವನ್ನು ಹೊಂದಿರುವ ಆಯುರ್ವೇದವು ಸಾಂಪ್ರದಾಯಿಕ ಔಷಧೀಯ ವ್ಯವಸ್ಥೆಯಾಗಿದ್ದು ಅದು ನೈಸರ್ಗಿಕ ಅಂಶಗಳನ್ನು ಆಧರಿಸಿದೆ ಮತ್ತು ರೋಗವನ್ನು ಅದರ ಮೂಲದಿಂದ ತೆಗೆದುಹಾಕುವಲ್ಲಿ ಕಾರ್ಯನಿರ್ವಹಿಸುತ್ತದೆ. ಆದ್ದರಿಂದ, ಹೊಸ ಪೀಳಿಗೆಗೆ ಅರಿವು ಮೂಡಿಸಲು ಮತ್ತು ಸಮಾಜದಲ್ಲಿ ಆಯುರ್ವೇದ ಚಿಕಿತ್ಸಾ ತತ್ವಗಳನ್ನು ಉತ್ತೇಜಿಸಲು ಸರ್ಕಾರವು ಧಂತೇರಸ್ ದಿನ ಆಯುರ್ವೇದದ ಮಹತ್ವವನ್ನು ಗುರುತಿಸುತ್ತಾ ಬಂದಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.