ನವದೆಹಲಿ: ಮುಂಬರುವ ಜನವರಿ 22ರಂದು ಅಯೋಧ್ಯೆಯ ರಾಮಮಂದಿರದಲ್ಲಿ ಶ್ರೀರಾಮನ ಪ್ರಾಣ ಪ್ರತಿಷ್ಠೆ ನಡೆಯಲಿದೆ. ಈ ಸುದಂದರ್ಭದಲ್ಲಿ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ದೇಶದಾದ್ಯಂತದ ಶ್ರೀರಾಮನ ಭಕ್ತರಲ್ಲಿ ಮಹತ್ವದ ಮನವಿಯನ್ನು ಮಾಡಿಕೊಂಡಿದೆ.
ಜನವರಿ 22ರಂದು ಬೆಳಿಗ್ಗೆ 11 ಗಂಟೆಯಿಂದ ಮಧ್ಯಾಹ್ನ 1 ಗಂಟೆಯ ನಡುವೆ ಪ್ರತಿ ಗ್ರಾಮ, ಮೊಹಲ್ಲಾ, ಕಾಲೋನಿಯ ಸಮೀಪದ ದೇಗುಲಗಳಲ್ಲಿ ರಾಮಭಕ್ತರು ಒಂದಾಗಿ ಭಜನೆ, ಕೀರ್ತನೆಗಳನ್ನು ನೆರವೇರಿಸಿ. ಟೆಲಿವಿಷನ್ ಅಥವಾ ಸ್ಕ್ರೀನ್ ಬಳಸಿ ಸಮಾಜದ ಬಾಂಧವರಿಗೆ ಅಯೋಧ್ಯೆಯ ಪ್ರಾಣ ಪ್ರತಿಷ್ಠೆಯ ನೇರ ದೃಶ್ಯಗಳನ್ನು ತೋರಿಸಿ. ಶಂಖನಾದ, ಘಂಟೆನಾದ ಮತ್ತು ಆರತಿಗಳನ್ನು ಬೆಳಗಿಸಿ ಎಂದು ಟ್ರಸ್ಟ್ ಜನರಲ್ಲಿ ಮನವಿ ಮಾಡಿದೆ.
ಅಲ್ಲದೇ ಈ ಸಂದರ್ಭದಲ್ಲಿ 108 ಬಾರಿ ʼಶ್ರೀರಾಮ ಜಯ ರಾಮ ಜಯ ಜಯ ರಾಮʼ ವಿಜಯ ಮಂತ್ರವನ್ನು ಮೊಳಗಿಸುವಂತೆಯೂ ಟ್ರಸ್ಟ್ ಮನವಿ ಮಾಡಿದೆ. ಹನುಮಾನ್ ಚಾಲೀಸಾ, ಸುಂದರಕಾಂಡ, ರಾಮರಕ್ಷಾ ಸ್ತೋತ್ರಗಳನ್ನು ಪಠಿಸುವಂತೆ ತಿಳಿಸಿದೆ.
ಅಂದು ಸಂಜೆ ಸೂರ್ಯಾಸ್ತದ ಬಳಿಕ ಮನೆಗಳಲ್ಲಿ ದೀಪಗಳನ್ನು ಬೆಳಗಿಸುವಂತೆಯೂ ಮನವಿಯನ್ನು ಮಾಡಿದೆ.
जय श्री राम!
Jai Shri Ram!संपूर्ण विश्व के श्रीराम भक्तों से हमारा निवेदन
Our appeal to Shri Ram bhakts across globe. pic.twitter.com/adpw7EO62A
— Shri Ram Janmbhoomi Teerth Kshetra (@ShriRamTeerth) November 3, 2023
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.