ರೋಮ್: ಇಟಲಿ ಪ್ರವಾಸದಲ್ಲಿರುವ ಕೇಂದ್ರ ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರು, ಇಸ್ರೇಲ್-ಹಮಾಸ್ ಸಂಘರ್ಷದ ಬಗ್ಗೆ ಉಲ್ಲೇಖ ಮಾಡಿದ್ದು, ಭಯೋತ್ಪಾದನೆ ಸ್ವೀಕಾರಾರ್ಹವಲ್ಲ ಆದರೆ ಪ್ಯಾಲೆಸ್ತೀನ್ ಸಮಸ್ಯೆಗೆ ಪರಿಹಾರದ ಅಗತ್ಯವಿದೆ ಎಂದು ಹೇಳಿದರು.
ಅವರು ರೋಮ್ನ ಸೆನೆಟ್ನ ವಿದೇಶಾಂಗ ವ್ಯವಹಾರಗಳು ಮತ್ತು ರಕ್ಷಣಾ ಆಯೋಗದ ಜಂಟಿ ಕಾರ್ಯದರ್ಶಿ ಅಧಿವೇಶನದಲ್ಲಿ ಈ ಹೇಳಿಕೆಗಳನ್ನು ನೀಡಿದ್ದಾರೆ.
ಅಧಿವೇಶನವನ್ನುದ್ದೇಶಿಸಿ ಮಾತನಾಡಿದ ಜೈಶಂಕರ್, “ಅಕ್ಟೋಬರ್ 7 ರಂದು ನಡೆದದ್ದು ದೊಡ್ಡ ಭಯೋತ್ಪಾದನಾ ಕೃತ್ಯ, ಅದರ ನಂತರ ಕೂಡ ಇಂತಹುದೇ ಕೃತ್ಯಗಳು ನಡೆದಿವೆ. ಇದು ಇಡೀ ಪ್ರದೇಶವನ್ನು ವಿಭಿನ್ನ ದಿಕ್ಕಿಗೆ ಕೊಂಡೊಯ್ದಿದೆ. ಆದರೆ ಖಂಡಿತವಾಗಿ ಘರ್ಷಣೆಯು ಪ್ರದೇಶದ ಸಾಮಾನ್ಯ ಪರಿಸ್ಥಿತಿಯಾಗಿರಲು ಸಾಧ್ಯವಿಲ್ಲ ಮತ್ತು ಅದು ಸ್ವಲ್ಪ ಸ್ಥಿರತೆಗೆ, ಸ್ವಲ್ಪ ಸಹಕಾರಕ್ಕೆ ಮರಳಲೇ ಬೇಕಿದೆ” ಎಂದಿದ್ದಾರೆ.
ವಿಭಿನ್ನ ವಿಷಯಗಳ ಮೇಲೆ ಸಮತೋಲನವನ್ನು ಸಾಧಿಸುವ ಅಗತ್ಯವಿದೆ ಎಂದ ಅವರು, ಇಸ್ರೇಲ್-ಪ್ಯಾಲೆಸ್ಟೈನ್ ಸಂಘರ್ಷದಲ್ಲಿ ‘ಎರಡು-ರಾಜ್ಯ’ ಪರಿಹಾರದ ಭಾರತದ ನಿಲುವನ್ನು ಪುನರುಚ್ಚರಿಸಿದ್ದರು.
ನಡೆಯುತ್ತಿರುವ ಮಧ್ಯಪ್ರಾಚ್ಯ ಬಿಕ್ಕಟ್ಟಿಗೆ ಎರಡು-ರಾಜ್ಯ ಪರಿಹಾರವನ್ನು ದೃಢವಾಗಿ ಬೆಂಬಲಿಸಿದ ಅವರು, ಪ್ರಸ್ತುತ ಬಿಕ್ಕಟ್ಟನ್ನು ಪರಿಹರಿಸಲು ಸಂವಾದ ಮತ್ತು ಮಾತುಕತೆಗಳು ಕಡ್ಡಾಯವಾಗಿದೆ ಎಂದು ಒತ್ತಿ ಹೇಳಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.