ಮಂಗಳೂರು: ಡಾ ಪದ್ಮನಾಭ್ ಕಾಮತ್ ಅವರೊಂದಿಗೆ ಸಮಾಲೋಚನೆಗಾಗಿ ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯ ಕಟೀಲಿನ ದುರ್ಗಾ ಸಂಜೀವನಿ ಮಣಿಪಾಲ ಆಸ್ಪತ್ರೆಗೆ ತೆರಳುತ್ತಿದ್ದ 50 ವರ್ಷದ ಆಟೋರಿಕ್ಷಾ ಚಾಲಕನಿಗೆ ಶುಕ್ರವಾರ ಪ್ರಯಾಣದ ವೇಳೆ ತೀವ್ರ ಹೃದಯಾಘಾತವಾಗಿದೆ.
ಪ್ರತಿ ತಿಂಗಳ ಕೊನೆಯ ಶುಕ್ರವಾರದಂದು ಕಟೀಲಿನ ದುರ್ಗಾ ಸಂಜೀವನಿ ಮಣಿಪಾಲ ಆಸ್ಪತ್ರೆಗೆ ಭೇಟಿ ನೀಡುವ ಕೆಎಂಸಿ ಆಸ್ಪತ್ರೆಯ ಹೃದ್ರೋಗ ತಜ್ಞ ಡಾ.ಕಾಮತ್ ಅವರು ಮಂಗಳೂರಿನಿಂದ ಸುಮಾರು 35 ಕಿ.ಮೀ ದೂರದಲ್ಲಿರುವ ಕಟೀಲಿಗೆ ತೆರಳುತ್ತಿದ್ದ ಸಂದರ್ಭದಲ್ಲಿ ಚಾಲಕನಿಗೆ ಹೃದಯಾಘಾತವಾದ ಸುದ್ದಿ ಅವರಿಗೆ ತಲುಪುತ್ತದೆ. ತಕ್ಷಣವೇ ಅವರು ಸ್ಟ್ರೆಪ್ಟೋಕಿನೇಸ್ ಎಂಬ ರಕ್ತನಾಳಗಳಲ್ಲಿ ರೂಪುಗೊಂಡ ರಕ್ತ ಹೆಪ್ಪುಗಟ್ಟುವಿಕೆಯನ್ನು ಕರಗಿಸಲು ಬಳಸುವ ಔಷಧಿಯನ್ನು ನೇರವಾಗಿ ವಿತರಕರಿಂದ ಖರೀದಿಸಲು ತನ್ನ ಕಾರನ್ನು ಹಿಂದಕ್ಕೆ ತಿರುಗಿಸಿ ಸುಮಾರು 10 ಕಿ.ಮೀ ದೂರ ಸಂಚರಿಸಿದರು. ನಂತರ ಅವರು ಔಷಧದ ಪರಿಣಾಮಕಾರಿತ್ವವನ್ನು ಕಾಪಾಡಿಕೊಳ್ಳಲು ಅದನ್ನು ಐಸ್ ಪ್ಯಾಕ್ನಲ್ಲಿ ಇರಿಸಿದರು ಮತ್ತು ಸನ್ನಿವೇಶವನ್ನು ಯಶಸ್ವಿಯಾಗಿ ನಿರ್ವಹಿಸಿ ರೋಗಿಯ ಜೀವವನ್ನು ಉಳಿಸಿದರು.
ಈ ಬಗ್ಗೆ ಮಾತನಾಡಿರುವ ಡಾ.ಕಾಮತ್ ಅವರು, “ರೋಗಿಯು ಕೇವಲ ಎರಡು ದಿನಗಳ ಹಿಂದೆ ಇಸಿಜಿಗೆ ಒಳಗಾಗಿದ್ದರು ಮತ್ತು ರೀಡಿಂಗ್ ಸಾಮಾನ್ಯವಾಗಿತ್ತು. ಅವರು ಬಿಪಿಎಲ್ ಕಾರ್ಡ್ ಹೊಂದಿಲ್ಲ ಮತ್ತು ಮಂಗಳೂರಿನಲ್ಲಿ ಚಿಕಿತ್ಸೆ ಪಡೆಯಲು ಸಾಧ್ಯವಾಗಲಿಲ್ಲ. ಅವರು ಶುಕ್ರವಾರ ಅಪಾಯಿಂಟ್ಮೆಂಟ್ ನಿಗದಿಪಡಿಸಿದ್ದರು. ಆದರೆ, ಆಸ್ಪತ್ರೆಗೆ ತೆರಳುವ ಮಾರ್ಗ ಮಧ್ಯೆ ಅವರಿಗೆ ತೀವ್ರ ಹೃದಯಾಘಾತವಾಗಿತ್ತು. ಅಂತಹ ಸಂದರ್ಭಗಳಲ್ಲಿ ಸಮಯವು ನಿರ್ಣಾಯಕವಾಗಿದೆ. ನಾನು ಕಟೀಲ್ಗೆ ಹೋಗುತ್ತಿದ್ದೆ ಮತ್ತು ಕಟೀಲಿಗೆ ಸಂಚಾರ ಮುಂದುವರಿಸುವ ಮೊದಲು ವಿತರಕರಿಂದ ಔಷಧವನ್ನು ಖರೀದಿಸಲು ಕಾರನ್ನು ಹಿಂದಕ್ಕೆ ತಿರುಗಿಸಿದೆ. ನಾನು ಈ ರೋಗಿಗೆ ಸಹಾಯ ಮಾಡಿ ಜೀವ ಉಳಿಸಿದೆ ಎಂಬುದು ಅದೃಷ್ಟದಂತೆ ಭಾಸವಾಗುತ್ತಿದೆ” ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.