ನವದೆಹಲಿ: ಭಾರತದ ಮೊತ್ತ ಮೊದಲ ಖಗೋಳಶಾಸ್ತ್ರ ಅಧ್ಯಯನ ಉಪಗ್ರಹ ಆ್ಯಸ್ಟ್ರೋಸ್ಯಾಟ್ ಇಂದು ಆಂಧ್ರಪ್ರದೇಶದ ಶ್ರೀಹರಿಕೋಟಾದಿಂದ ಉಡಾವಣೆಗೊಂಡಿದೆ.
ಸ್ವದೇಶಿ ತಂತ್ರಜ್ಞಾನದೊಂದಿಗೆ ನಿರ್ಮಿಸಲಾಗಿರುವ ಇಸ್ರೋದ ಈ ಉಪಗ್ರಹವು ಶ್ರೀಹರಿಕೋಟಾದ ಸತೀಶ್ ಧವನ್ ಉಡ್ಡಯನ ಕೇಂದ್ರದಿಂದ ಪಿಎಸ್ಎಲ್ವಿ ಸಿ-30 ಸೋಮವಾರ ಬೆಳಗ್ಗೆ 10 ಗಂಟೆಗೆ ಉಡಾವಣೆ ಮಾಡಲಾಗಿದೆ. ಭಾರತವು ವಿಶ್ವದಲ್ಲೇ ಮೊದಲ ದೂರದರ್ಶಕ ಉಪಗ್ರಹ ಅಭಿವೃದ್ಧಿಪಡಿಸಿದ ರಾಷ್ಟ್ರವೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಈ ಉಪಗ್ರಹವು ೧೫೧೩ ಕೆಜಿ ತೂಕ ಹೊಂದಿದ್ದು, ಎಕ್ಸ್-ರೇ ತರಂಗಾಂತರಗಳ ಸಹಾಯದಿಂದ ಅನ್ಯ ಗ್ರಹಗಳು, ಕಪ್ಪು ಕುಳಿಗಳು (black holes), ನಕ್ಷತ್ರಗಳ ಸ್ವರೂಪಗಳನ್ನು ಪತ್ತೆ ಹಚ್ಚಿ ಅಧ್ಯಯನ ನಡೆಸಲು ಸಹಾಯಕವಾಗಲಿದೆ ಎನ್ನಲಾಗಿದೆ.
ಕಳೆದ 2 ದಶಕಗಳಿಂದ ಇಸ್ರೋದ ತಂತ್ರಜ್ಞಾನ ಅಭಿವೃದ್ಧಿ ಕುರಿತು ಅಮೇರಿಕವು ಹಲವು ನಿರ್ಬಂಧಗಳನ್ನು ಹೇರಿತ್ತು. ಈಗ ಅಮೇರಿಕವೂ ಇಸ್ರೋದ ಕಡೆ ವಾಲಿದ್ದು, ಈ ರಾಕೆಟ್ನಲ್ಲಿ ಅಮೇರಿಕದ ನಾಲ್ಕು, ಇಂಡೋನೇಷ್ಯಾದ ಮತ್ತು ಕೆನಡಾದ ತಲಾ ಒಂದು ಉಪಗ್ರಹಗಳನ್ನು ಉಡಾವಣೆ ಮಾಡಲಾಗುವುದು ಎಂದು ಇಸ್ರೋ ಅಧಿಕಾರಿಗಳು ತಿಳಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.