ನವದೆಹಲಿ: ಭಾರತದೊಂದಿಗಿನ ಉದ್ವಿಗ್ನತೆಯನ್ನು ಹೆಚ್ಚಿಸಲು ಕೆನಡಾ ಬಯಸುತ್ತಿಲ್ಲ ಎಂದು ಅಲ್ಲಿನ ಪ್ರಧಾನಿ ಜಸ್ಟಿನ್ ಟ್ರುಡೊ ಅವರು ಹೇಳಿದ್ದಾರೆ. ಅಲ್ಲದೇ ಭಾರತದೊಂದಿಗೆ ಬಲವಾದ ರಾಜತಾಂತ್ರಿಕ ಹೆಜ್ಜೆಗುರುತನ್ನು ಕಾಪಾಡಲು ಖಾಸಗಿ ಮಾತುಕತೆಗಳನ್ನು ನಡೆಸಲಾಗುವುದು ಎಂದು ಅವರ ಸರ್ಕಾರ ಹೇಳಿದೆ.
ಖಲಿಸ್ತಾನಿ ಭಯೋತ್ಪಾದಕನ ಹತ್ಯೆಯಲ್ಲಿ ಭಾರತ ಸರ್ಕಾರದ ಪಾತ್ರವಿದೆ ಎಂದು ಆರೋಪಿಸಿ ರಾಜತಾಂತ್ರಿಕ ಮುಖಾಮುಖಿಯನ್ನು ಸೃಷ್ಟಿಸಿದ್ದ ಟ್ರೂಡೊ, 62 ಕೆನಡಾದ ರಾಜತಾಂತ್ರಿಕರಲ್ಲಿ 41 ಮಂದಿಯನ್ನು ಭಾರತವು ದೇಶದಿಂದ ಹೊರಹೋಗಲು ಹೇಳಿದೆ ಎಂದು ಫೈನಾನ್ಷಿಯಲ್ ಟೈಮ್ಸ್ ವರದಿ ಮಾಡಿದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದರು.
ಆದರೆ ಈ ವರದಿಯನ್ನು ಕೆನಡಾ ಪ್ರಧಾನಿ ಖಚಿತಪಡಿಸಿಲ್ಲ. ರಾಜತಾಂತ್ರಿಕರನ್ನು ಹೊರಹಾಕಲು ಕೆನಡಾವು ಭಾರತವನ್ನು ಕೇಳುತ್ತದೆಯೇ ಎಂಬ ಪ್ರಶ್ನೆ ಸಿಬಿಸಿ ನ್ಯೂಸ್ ಕೇಳಿದ ಪ್ರಶ್ನೆಗೆ ಉತ್ತರಿಸಿದ ಟ್ರುಡೋ, “ನಾವು ಸಮಸ್ಯೆ ಉಲ್ಬಣಗೊಳ್ಳುವುದನ್ನು ನೋಡುತ್ತಿಲ್ಲ, ನಾನು ಹೇಳಿದಂತೆ,ಸಂಬಂಧ ಮುಂದುವರಿಸುವಲ್ಲಿ ಮುಖ್ಯವಾದ ಕೆಲಸವನ್ನು ಮಾಡಲಿದ್ದೇವೆ. ಈ ಅತ್ಯಂತ ಕಷ್ಟಕರ ಸಮಯದಲ್ಲಿ ಭಾರತದೊಂದಿಗೆ ರಚನಾತ್ಮಕ ಸಂಬಂಧಗಳನ್ನು ಬಯಸುತ್ತೇವೆ” ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.