ನವದೆಹಲಿ: ಇಂದು ತಮ್ಮ ಜೀವನದಲ್ಲಿ ಮೊದಲ ಬಾರಿಗೆ ಪವಿತ್ರ ನಗರವಾದ ಅಯೋಧ್ಯೆಗೆ ಭೇಟಿ ಹಿರಿಯ ನಟ ಅನುಪಮ್ ಖೇರ್ ಅವರು ಭೇಟಿ ನೀಡಿದ್ದಾರೆ.
ಎಎನ್ಐ ಜೊತೆ ಮಾತನಾಡಿದ ಖೇರ್, ಹನುಮಾನ್ ಗರ್ಹಿಗೆ ಭೇಟಿ ನೀಡಿದ ಹಿಂದಿನ ಕಾರಣವನ್ನು ಹಂಚಿಕೊಂಡಿದ್ದಾರೆ, “ಕಳೆದ ವರ್ಷ ನಾನು ನನ್ನ ಪ್ರಾರ್ಥನೆಯನ್ನು ಸಲ್ಲಿಸಲು ವಿವಿಧ ಧಾರ್ಮಿಕ ಸ್ಥಳಗಳಿಗೆ ಭೇಟಿ ನೀಡುವ ನಿರ್ಧಾರವನ್ನು ತೆಗೆದುಕೊಂಡೆ. ದೇಶದ ಗಡಿ ಪ್ರದೇಶಗಳಿಗೆ ಹೋಗುವ ಬಗ್ಗೆಯೂ ಎರಡನೇ ನಿರ್ಧಾರವನ್ನು ತೆಗೆದುಕೊಂಡಿದ್ದೇವೆ. ನಾವು ಇದಕ್ಕಾಗಿ ಕಾರ್ಯಕ್ರಮವನ್ನು ಸಿದ್ಧಪಡಿಸಿದ್ದೇವೆ, ಅದನ್ನು ನಾವು ಶೀಘ್ರ ಘೋಷಿಸುತ್ತೇವೆ. ಇದು ಹನುಮಾನ್ ದೇವಾಲಯಗಳ ಬಗ್ಗೆ ಆದ್ದರಿಂದ ಹನುಮಾನ್ ಗರ್ಹಿಗೆ ಬರುವುದು ಮುಖ್ಯವಾಗಿತ್ತು” ಎಂದಿದ್ದಾರೆ.
“ಶ್ರೀರಾಮನ ಆಶೀರ್ವಾದದಿಂದ, ನನ್ನ ಜೀವನದಲ್ಲಿ ಮೊದಲ ಬಾರಿಗೆ ಅಯೋಧ್ಯೆಗೆ ಬರುವ ಅದೃಷ್ಟ ನನಗೆ ಸಿಕ್ಕಿದೆ. ರಾತ್ರಿ 8 ಗಂಟೆಗೆ ಪ್ರಸಿದ್ಧ ಹನುಮಾನ್ ಗರ್ಹಿಯಲ್ಲಿ ಭೇಟಿಯಾಗೋಣ! ಶ್ರೀರಾಮನಿಗೆ ನಮಸ್ಕಾರ! ನಮಸ್ಕಾರ ಭಜರಂಗ್!” ಎಂದು ಖೇರ್ ಟ್ವಿಟ್ ಮಾಡಿದ್ದಾರೆ.
ನಿನ್ನೆ ಅವರು ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಭೇಟಿಯಾಗಿದ್ದರು.
अयोध्या के हज़ारों वर्ष पुरातन #हनुमानगढ़ी मंदिर में प्रार्थना की।आप सभी के लिये भी! सुखद अनुभूति! जय श्री राम! 🕉 Prayed for you and your family at the Hanuman Gadhi temple at Ayodhya! Jai Shri Ram! It was a divine feeling! 🙏🕉😍 #21HanumanTemples #Series pic.twitter.com/rz2rLzViBx
— Anupam Kher (@AnupamPKher) September 30, 2023
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.