ಭೋಪಾಲ್: ಕಾಂಗ್ರೆಸ್ ಪಕ್ಷವು ನಗರ ನಕ್ಸಲರಿಂದ ನಡೆಯುತ್ತಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ದೇಶದ ಅಭಿವೃದ್ಧಿಯ ವೇಗವನ್ನು ನಿಲ್ಲಿಸುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಇಂದು ಮಧ್ಯಪ್ರದೇಶದ ಭೋಪಾಲ್ನಲ್ಲಿ ಬಿಜೆಪಿ ಕಾರ್ಯಕರ್ತರ ಮಹಾಕುಂಭವನ್ನು ಉದ್ದೇಶಿಸಿ ಮೋದಿ ಮಾತನಾಡಿದರು.
ಬಿಜೆಪಿಯ ಅಭಿವೃದ್ಧಿ ಕಾರ್ಯಸೂಚಿಯನ್ನು ಸಮರ್ಥಿಸಿಕೊಂಡ ಪ್ರಧಾನಿ, ಮೋದಿಯವರು ಗ್ಯಾರಂಟಿ ನೀಡಿದಾಗ, ಬಿಜೆಪಿ ಗ್ಯಾರಂಟಿ ನೀಡಿದಾಗ, ಆ ಗ್ಯಾರಂಟಿ ತಳಮಟ್ಟದವರೆಗೂ ತಲುಪುತ್ತದೆ, ಪ್ರತಿ ಮನೆಗೂ ತಲುಪುತ್ತದೆ ಎಂದು ಹೇಳಿದರು. ಮೋದಿ ಎಂದರೆ ಪ್ರತಿ ಭರವಸೆ ಈಡೇರಿಸುವ ಗ್ಯಾರಂಟಿ ಎಂದರು. ‘ಗರೀಬಿ ಹಠಾವೋ’ ಘೋಷಣೆಯನ್ನು ಕಾಂಗ್ರೆಸ್ 50 ವರ್ಷಗಳ ಹಿಂದೆ ನೀಡಿತ್ತು, ಆದರೆ ಭರವಸೆಯನ್ನು ಈಡೇರಿಸಲಿಲ್ಲ ಎಂದು ಪ್ರಧಾನಿ ಹೇಳಿದರು.
ಬಿಜೆಪಿಯ ಸಾಧನೆಗಳನ್ನು ವಿವರಿಸಿದ ಮೋದಿ, ಕೇವಲ ಐದು ವರ್ಷಗಳ ಬಿಜೆಪಿ ಸರ್ಕಾರದ ಅವಧಿಯಲ್ಲಿ ದೇಶದ 13.5 ಕೋಟಿ ಜನರು ಬಡತನದಿಂದ ಹೊರಬಂದಿದ್ದಾರೆ. ಹಿಂದುಳಿದವರಿಗೆ ನೀಡಿದ ಆದ್ಯತೆಯ ಖಾತ್ರಿಯನ್ನು ನಾವು ಒಂದೊಂದೇ ಹೆಜ್ಜೆ ಇಡುವ ಮೂಲಕ ಈಡೇರಿಸಿದ್ದೇವೆ . ಇಂದು ಬಿಜೆಪಿ ಆಧುನಿಕ ರಸ್ತೆಗಳು, ವಿಶಾಲ ಹೆದ್ದಾರಿಗಳು ಮತ್ತು ಎಕ್ಸ್ಪ್ರೆಸ್ವೇಗಳನ್ನು ನಿರ್ಮಿಸುತ್ತಿದೆ ಆದರೆ ಕಾಂಗ್ರೆಸ್ ಅದನ್ನು ಟೀಕಿಸುತ್ತದೆ ಎಂದರು.
ರೈಲ್ವೇಯಲ್ಲಿನ ಬದಲಾವಣೆಗಳನ್ನು ಉಲ್ಲೇಖಿಸಿದ ಮೋದಿ, ಇಂದು ಬಿಜೆಪಿಯು ವಂದೇ ಭಾರತ್ನಂತಹ ಆಧುನಿಕ ರೈಲುಗಳನ್ನು ಪ್ರಾರಂಭಿಸುತ್ತಿದೆ ಮತ್ತು ನಿಲ್ದಾಣಗಳನ್ನು ಅಭಿವೃದ್ಧಿಪಡಿಸುತ್ತಿದೆ ಮತ್ತು ಎಲ್ಲರೂ ಭೋಪಾಲ್ನ ರಾಣಿ ಕಮಲಾಪತಿ ನಿಲ್ದಾಣವನ್ನು ಹೊಗಳುತ್ತಿದ್ದಾರೆ, ಆದರೆ ಕಾಂಗ್ರೆಸ್ಗೆ ಇದನ್ನು ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.