ನವದೆಹಲಿ: ಕೆನಡಾ ಮೂಲದ ಪಂಜಾಬಿ ಗಾಯಕ ಮತ್ತು ರಾಪರ್ ಶುಭ್ನೀತ್ ಸಿಂಗ್ ಖಲಿಸ್ತಾನ್ಗೆ ಬೆಂಬಲ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಆತನ ಭಾರತ ಪ್ರವಾಸ ರದ್ದುಗೊಂಡಿದೆ. ಶುಭ್ನೀತ್ ಸಿಂಗ್ ಅಲಿಯಾಸ್ ಶುಭ್ರ ಮುಂಬರುವ ಪ್ರವಾಸದಿಂದ ಪ್ರಾಯೋಜಕತ್ವವನ್ನು ಹಿಂತೆಗೆದುಕೊಳ್ಳುವ ನಿರ್ಧಾರವನ್ನು ಭಾರತೀಯ ಗ್ರಾಹಕ ಎಲೆಕ್ಟ್ರಾನಿಕ್ ಬ್ರ್ಯಾಂಡ್ ಬೋಟ್ ಘೋಷಿಸಿದೆ.
ಶುಭ್ ಪ್ರದರ್ಶನವು ಮುಂಬೈನ ಕಾರ್ಡೆಲಿಯಾ ಕ್ರೂಸಸ್ನಲ್ಲಿ ಸೆಪ್ಟೆಂಬರ್ 23 ರಿಂದ 25 ರವರೆಗೆ ನಡೆಯಬೇಕಿತ್ತು. ಈ ವರ್ಷದ ಆರಂಭದಲ್ಲಿ ಖಲಿಸ್ತಾನಿ ಭಯೋತ್ಪಾದಕರಿಗೆ ಬೆಂಬಲವನ್ನು ನೀಡುವ ಭಾರತದ ವಿರೂಪ ಭೂಪಟವನ್ನು ಹಂಚಿಕೊಂಡಿದ್ದ ಶುಭ್ ವಿವಾದವನ್ನು ಹುಟ್ಟುಹಾಕಿದ್ದರು. ಈ ಭೂಪಟದಿಂದ ಪಂಜಾಬ್, ಜಮ್ಮು-ಕಾಶ್ಮೀರವನ್ನು ತೆಗೆದು ಹಾಕಲಾಗಿತ್ತು. ಇದನ್ನು ಉಲ್ಲೇಖಿಸಿ ಕಂಪನಿಯು ಕೆನಡಾದ ಗಾಯಕನೊಂದಿಗಿನ ತನ್ನ ಪ್ರಾಯೋಜಕತ್ವವನ್ನು ವಾಪಾಸ್ ಪಡೆದುಕೊಂಡಿದೆ.
ಶುಭ್ ಭಾರತ ವಿರೋಧಿ ನಡೆ ಹಲವರನ್ನು ಕೆರಳಿಸಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಬೋಟ್, ನಮ್ಮದು ಅಪ್ಪಟ ಭಾರತೀಯ ಬ್ರ್ಯಾಂಡ್, ದೇಶ ನಮಗೆ ಮೊದಲು, ಹೀಗಾಗಿ ಶುಭ್ ನೀಡಿದ ಹೇಳಿಕೆ ನಮ್ಮ ಗಮನಕ್ಕೆ ಬಂದ ಕೂಡಲೇ ಅವರ ಕಾರ್ಯಕ್ರಮದಿಂದ ಪ್ರಾಯೋಜಕತ್ವ ಹಿಂಪಡೆದಿದ್ದೇವೆ ಎಂದ ಕನ್ಯೂಮರ್ ಎಲೆಕ್ಟ್ರಾನಿಕ್ ಕಂಪನಿ ಬೋಟ್ ಮಹತ್ವದ ನಿರ್ಧಾರ ಘೋಷಿಸಿದೆ. ದೇಶ ವಿರೋಧಿ ನಡೆಗೆ ಬೋಟ್ ಬೆಂಬಲಿಸುವುದಿಲ್ಲ ಎಂದಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.