ಭೋಪಾಲ್: ಸ್ವಾಮಿ ವಿವೇಕಾನಂದ ಮತ್ತು ಲೋಕಮಾನ್ಯ ತಿಲಕರಿಗೆ ಪ್ರೇರಣೆ ನೀಡಿದ ‘ಸನಾತನ ಧರ್ಮ’ವನ್ನು ಅಳಿಸಲು ಈ I.N.D.I ಮೈತ್ರಿಕೂಟದ ಜನರು ಬಯಸುತ್ತಿದ್ದಾರೆ. ಈ ಮೈತ್ರಿಕೂಟವು ‘ಸನಾತನ ಧರ್ಮ’ವನ್ನು ನಾಶ ಮಾಡಲು ಬಯಸುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಮಧ್ಯಪ್ರದೇಶದ ಬೀನಾದಲ್ಲಿ ಸಮಾವೇಶವನ್ನು ಉದ್ದೇಶಿಸಿ ಮಾನತನಾಡಿದ ಮೋದಿ, “ಇಂದು ಅವರು ಬಹಿರಂಗವಾಗಿ ಸನಾತನದ ಮೇಲೆ ದಾಳಿ ನಡೆಸುತ್ತಾ ಇದ್ದಾರೆ, ನಾಳೆ ಅವರು ನಮ್ಮ ಮೇಲಿನ ದಾಳಿಯನ್ನು ಹೆಚ್ಚಿಸುತ್ತಾರೆ. ದೇಶಾದ್ಯಂತ ಇರುವ ಎಲ್ಲಾ ‘ಸನಾತನಿಗಳು’ ಮತ್ತು ನಮ್ಮ ದೇಶವನ್ನು ಪ್ರೀತಿಸುವ ಜನರು ಎಚ್ಚರವಾಗಿರಬೇಕು. ಇಂತಹವರನ್ನು ನಾವು ತಡೆಯಬೇಕಾಗಿದೆ” ಎಂದಿದ್ದಾರೆ.
“ಮಧ್ಯಪ್ರದೇಶವನ್ನು ರಸ್ತೆ, ವಿದ್ಯುತ್ ಮತ್ತು ನೀರಿನಂತಹ ಸೌಲಭ್ಯಗಳಿಂದ ಕಾಂಗ್ರೆಸ್ ಹೇಗೆ ವಂಚಿತಗೊಳಿಸಿತು ಎಂಬುದನ್ನು ಹಳೆಯ ತಲೆಮಾರಿನ ಜನರು ನೆನಪಿಸಿಕೊಳ್ಳಬೇಕು. ಬಿಜೆಪಿ ಸರ್ಕಾರದ ಅಡಿಯಲ್ಲಿ, ರಾಜ್ಯದ ಪ್ರತಿ ಹಳ್ಳಿಗೆ ರಸ್ತೆಗಳು ಮತ್ತು ಪ್ರತಿ ಮನೆಗೆ ವಿದ್ಯುತ್ ತಲುಪುತ್ತಿವೆ” ಎಂದಿದ್ದಾರೆ.
“ಈ I.N.D.I ಮೈತ್ರಿಕೂಟಕ್ಕೆ ನಾಯಕನಿಲ್ಲ, ಅವರು ಭಾರತದ ಸಂಸ್ಕೃತಿಯ ಮೇಲೆ ದಾಳಿ ಮಾಡಲು ಹಿಡನ್ ಅಜೆಂಡಾವನ್ನು ಸಹ ತಯಾರಿಸಿದ್ದಾರೆ. I.N.D.I ಒಕ್ಕೂಟವು ‘ಸನಾತನ’ ಸಂಸ್ಕೃತಿಯನ್ನು ಕೊನೆಗೊಳಿಸಲು ಸಂಕಲ್ಪವನ್ನು ಮಾಡಿದೆ. ಸನಾತನ ಅನುಯಾಯಿಗಳಿಗೆ ನನ್ನ ಮನವಿ ಏನೆಂದರೆ ಎಚ್ಚರದಿಂದಿರಿ. ವಿರೋಧ ಪಕ್ಷಗಳ ಸಂಚನ್ನು ಅರಿಯಿರಿ” ಎಂದಿದ್ದಾರೆ.
“ಜಿ20 ಶೃಂಗಸಭೆಯನ್ನು ಭಾರತ ಹೇಗೆ ಯಶಸ್ವಿಯಾಗಿ ಆಯೋಜಿಸಿದೆ ಎಂಬುದನ್ನು ನೀವೆಲ್ಲರೂ ನೋಡಿದ್ದೀರಿ, ಜಿ20 ಶೃಂಗಸಭೆಯಲ್ಲಿ ಭಾರತದ ಪರಾಕ್ರಮವನ್ನು ಜಗತ್ತೇ ನೋಡಿದೆ, ಇದರ ಯಶಸ್ಸಿನ ಶ್ರೇಯ ದೇಶದ ಜನತೆಗೆ ಸಲ್ಲುತ್ತದೆ. ಇದು 140 ಕೋಟಿ ಜನರ ಯಶಸ್ಸು” ಎಂದಿದ್ದಾರೆ.
“ಅಮೃತ ಕಾಲದ ಈ ಯುಗದಲ್ಲಿ, ಪ್ರತಿಯೊಬ್ಬ ಭಾರತೀಯನೂ ಭಾರತವನ್ನು ಅಭಿವೃದ್ಧಿ ಹೊಂದಿದ ದೇಶವನ್ನಾಗಿ ಮಾಡಲು ಸಂಕಲ್ಪ ಮಾಡಿದ್ದಾರೆ. ಗುರಿಯನ್ನು ಸಾಧಿಸಲು ಭಾರತವು ‘ಆತ್ಮನಿರ್ಭರʼ ಆಗುವುದು ಅತ್ಯಗತ್ಯ” ಎಂದು ಮಧ್ಯಪ್ರದೇಶದ ಬಿನಾದಲ್ಲಿ ಪ್ರಧಾನಿ ಮೋದಿ ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.