ತಿರುಪತಿ: ಮೌಢ್ಯತೆಯನ್ನು ತೊಡೆಯುವ ಸಲುವಾಗಿ ದಲಿತ ಮತ್ತು ಹಿಂದುಳಿದ ವರ್ಗದ ಜನರಿಗೆ ಅರ್ಚಕ ತರಬೇತಿಯನ್ನು ನೀಡಲು ತಿರುಮಲ ತಿರುಪತಿ ದೇವಸ್ಥಾನಂ ಮುಂದಾಗಿದೆ. ಈ ಮೂಲಕ ಹಳೆಯ ಸಂಪ್ರದಾಯವನ್ನು ಮುರಿದು ಹಿಂದೂ ಧರ್ಮದಲ್ಲಿ ಸಮಾನತೆಯನ್ನು ಸಾರುವ ಕಾರ್ಯವನ್ನು ಮಾಡಿದೆ.
ಪ್ರಾಯೋಗಿಕವಾಗಿ ಮೂರು ತಿಂಗಳ ಅವಧಿಗೆ ಚಿತ್ತೂರು ಮತ್ತು ಪಶ್ಚಿಮ ಗೋದಾವರಿ ಪ್ರದೇಶದ 200 ಮಂದಿಗೆ ತರಬೇತಿಯನ್ನು ನೀಡಲಾಗುತ್ತದೆ. ವೈದಿಕ ಪದ್ಧತಿಯ ಆಚರಣೆ, ದೇಗುಲದಲ್ಲಿ ನಡೆಸಲಾಗುವ ವಿಧಿವಿಧಾನಗಳು, ಪೂಜೆಗಳು, ಸಂಸ್ಕೃತವನ್ನು ಇವರಿಗೆ ಕಲಿಸಿ ಕೊಡಲಾಗುತ್ತದೆ. ಇದಕ್ಕೆ ಸರ್ಟಿಫಿಕೇಟನ್ನೂ ದೇಗುಲದ ವತಿಯಿಂದ ನೀಡಲಾಗುತ್ತದೆ.
ಈ ಹಿಂದೆಯೂ ಟಿಟಿಡಿ ಬುಡಕಟ್ಟು ಸಮುದಾಯದವರಿಗೆ ವೈದಿಕ ತರಬೇತಿಯನ್ನು ನೀಡುವ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿತ್ತು. ಆದರೆ ಇದೇ ಮೊದಲ ಬಾರಿಗೆ ವೈದಿಕ ಸರ್ಟಿಫಿಕೇಟ್ ಕೋರ್ಸ್ ನೀಡುತ್ತಿದೆ ಎಂದು ಅಲ್ಲಿನ ಅಧಿಕಾರಿಗಳು ತಿಳಿಸಿದ್ದಾರೆ.
ಅಲ್ಲದೇ ಹಳ್ಳಿಗಳಲ್ಲಿ ಯುವಕರಿಗೆ ವೈದಿಕ ತರಬೇತಿಯನ್ನು ನೀಡುತ್ತೇವೆ. ಸ್ಮಾರ್ತ ಪದ್ಧತಿಯನ್ನು ಕಲಿಸುತ್ತೇವೆ. ಮೂಹರ್ತಗಳನ್ನು ನಿಗದಿ ಪಡಿಸುವುದು. ದೇಗುಲದ ಸಂಪ್ರದಾಯ, ವೈದಿಕ ಪದ್ಧತಿಯನ್ನು ಇವರಿಗೆ ಕಲಿಸಲಾಗುವುದು. ಮೂರ್ತಿ ಪೂಜೆಯ ನಿಯಮಗಳನ್ನು ಹೇಳಿಕೊಡಲಾಗುವುದು. ಗ್ರಾಮಗಳಲ್ಲಿ ದೇಗುಲವನ್ನು ನಿರ್ಮಿಸಿ ಅವರನ್ನು ಅರ್ಚಕರಾಗಿ ನೇಮಿಸುತ್ತೇವೆ. ಕುಗ್ರಾಮದ ಹಿಂದುಳಿದ ವರ್ಗದವರನ್ನೇ ಹೆಚ್ಚಾಗಿ ನೇಮಿಸಿಕೊಳ್ಳುತ್ತೇವೆ ಎಂದಿದ್ದಾರೆ.
ದಲಿತ ಪ್ರದೇಶಗಳಲ್ಲಿ ಹಿಂದೂ ಧರ್ಮದ ಸಾರವನ್ನು ಪಸರಿಸುವ ನಿಟ್ಟಿನಲ್ಲಿ ತಿರುಮಲ ಈ ಹಿಂದೆಯೂ ಇಂತಹ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿತ್ತು.
ಈ ತರಬೇತಿಗೆ ಹಾಜರಾಗುವವರು ಸೂರ್ಯೋದಯಕ್ಕೂ ಮುನ್ನ ಎದ್ದೇಳಬೇಕು, ಯೋಗ ಮಾಡಬೇಕು ಮತ್ತು ತರಗತಿಗೆ ಹಾಜರಾಗುವ ಮುನ್ನ ಕೆಲವೊಂದು ಶ್ಲೋಕಗಳನ್ನು ಪಠಿಸಬೇಕು ಎಂಬ ನಿಯಮವನ್ನು ರೂಪಿಸಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.