ಬೆಂಗಳೂರು: ಚಂದ್ರಯಾನ-3 ಚಂದ್ರನ ಮೇಲೆ ಯಶಸ್ವಿಯಾಗಿ ಲ್ಯಾಂಡ್ ಆದ ಆಗಸ್ಟ್ 23 ರ ದಿನವನ್ನು ಪ್ರತಿ ವರ್ಷ “ಬಾಹ್ಯಾಕಾಶ ದಿನ” ಎಂದು ಆಚರಿಸಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಇಂದು ಬೆಂಗಳೂರಿನ ಇಸ್ರೋ ಕೇಂದ್ರದಲ್ಲಿ ಘೋಷಣೆ ಮಾಡಿದ್ದಾರೆ.
ಇಂದು ಬೆಳ್ಳಂಬೆಳಿಗ್ಗೆ ಇಸ್ರೋ ಕೇಂದ್ರಕ್ಕೆ ಆಗಮಿಸಿದ ಅವರು ವಿಜ್ಞಾನಿಗಳ ಸಾಧನೆಯನ್ನು ಕೊಂಡಾಡಿದರು.
“ಯಾವ ಸ್ಥಾನದಲ್ಲಿ ಚಂದ್ರಯಾನ-3ರ ಲ್ಯಾಂಡರ್ ಇಳಿಯಿತೋ, ಇನ್ನು ಮುಂದೆ ಆ ಬಿಂದುವನ್ನು ಶಿವಶಕ್ತಿ ಹೆಸರಿನಿಂದ ಕರೆಯಲಾಗುತ್ತದೆ. ಶಿವನಲ್ಲಿ ಮಾನವೀಯತೆಯ ಕಲ್ಯಾಣದ ಸಂಕಲ್ಪ ಬೆರೆತುಕೊಂಡಿದೆ ಮತ್ತು ಶಕ್ತಿಯಲ್ಲಿ ಆ ಸಂಕಲ್ಪವನ್ನು ಪೂರ್ಣಗೊಳಿಸುವ ಸಾಮರ್ಥ್ಯ ಸಿಗುತ್ತದೆ” ಎಂದರು.
“ಚಂದ್ರನ ಯಾವ ಸ್ಥಾನದಲ್ಲಿ ಚಂದ್ರಯಾನ 2 ತನ್ನ ಹೆಜ್ಜೆ ಗುರುತನ್ನು ಮೂಡಿಸಿದೆಯೋ ಆ ಜಾಗವನ್ನು ಇನ್ನು ಮುಂದೆ ತಿರಂಗಾ ಎಂದು ಕರೆಯಲಾಗುತ್ತದೆ. ಈ ತಿರಂಗಾ ಬಿಂದು ಯಾವುದೇ ವಿಫಲತೆ ಕೊನೆಯಲ್ಲ ಎಂಬುದನ್ನು ನಮಗೆ ಕಲಿಸುತ್ತದೆ, ಕಠಿಣ ಇಚ್ಛಾಶಕ್ತಿ ಇದ್ದರೆ ಸಫಲತೆ ಜೊತೆಗೆಯೇ ಇರುತ್ತದೆ ಎಂಬುದನ್ನು ತಿಳಿಸುತ್ತದೆ” ಎಂದರು.
” ಭಾರತ ಇಂದು ಚಂದ್ರನ ಮೇಲಿದೆ. ನಾವು ನಮ್ಮ ರಾಷ್ಟ್ರೀಯ ಹೆಮ್ಮೆಯನ್ನು ಚಂದ್ರನ ಮೇಲೆ ಸ್ಥಾಪಿಸಿದ್ದೇವೆ. ಯಾರೂ ತಲುಪದ ಜಾಗವನ್ನು ನಾವು ತಲುಪಿದ್ದೇವೆ. ಈ ಹಿಂದೆ ಯಾರೂ ಮಾಡದೇ ಇರುವುದನ್ನು ನಾವು ಮಾಡಿ ತೋರಿಸಿದ್ದೇವೆ. ಆಗಸ್ಟ್ 23 ರ ದಿನದ ಪ್ರತಿ ಸೆಕೆಂಡುಗಳೂ ನನ್ನ ಕಣ್ಣ ಮುಂದೆ ಪದೇ ಪದೇ ಬಂದು ಹೋಗುತ್ತದೆ. ಟಚ್ ಡೌನ್ ಖಚಿತಗೊಂಡ ಸಂದರ್ಭದಲ್ಲಿ ಇಸ್ರೋ ಕೇಂದ್ರದಲ್ಲಿ, ಸಂಪೂರ್ಣ ದೇಶದಲ್ಲಿ ಜನರು ಸಂಭಮಿಸಿದ ರೀತಿಯನ್ನು ಯಾರು ತಾನೆ ಮರೆಯಲು ಸಾಧ್ಯ!? ಅಂಗದನ ರೀತಿ ಚಂದ್ರನ ಮೇಲೆ ಬಲಿಷ್ಠವಾಗಿ ನಮ್ಮ ಚಂದ್ರಯಾನ ಲ್ಯಾಂಡರ್ ತನ್ನ ಹೆಜ್ಜೆಗಳನ್ನು ಇಟ್ಟಿದೆ. ಒಂದು ಕಡೆ ವಿಕ್ರಮನ ವಿಶ್ವಾಸವಿದೆ, ಇನ್ನೊಂದು ಕಡೆ ಪ್ರಜ್ಞಾನ್ನ ಪರಾಕ್ರಮವಿದೆ” ಎಂದರು.
ಇಂದು ಇಡೀ ವಿಶ್ವ ಭಾರತದ ವೈಜ್ಞಾನಿಕ ಉತ್ಸಾಹದ ಬಗ್ಗೆ, ನಮ್ಮ ತಂತ್ರಜ್ಞಾನದ ಬಗ್ಗೆ ಮಾತನಾಡುತ್ತಿದೆ ಮತ್ತು ನಮ್ಮ ವೈಜ್ಞಾನಿಕ ಮನೋಧರ್ಮವನ್ನು ಲೋಹವೆಂದು ಪರಿಗಣಿಸಿದೆ. ಚಂದ್ರಯಾನ ಮಹಾ ಅಭಿಯಾನ ಕೇವಲ ಭಾರತ ಮಾತ್ರವಲ್ಲ ವಿಶ್ವದ ಸಮಸ್ತ ಮಾನವತೆಯ ಸಫಲತೆಯಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.