ನವದೆಹಲಿ: ಗಡಿ ಭದ್ರತಾ ಪಡೆ (ಬಿಎಸ್ಎಫ್) ಸೋಮವಾರ ಜಮ್ಮು ಅಂತಾರಾಷ್ಟ್ರೀಯ ಗಡಿಯಲ್ಲಿ ಒಳನುಸುಳುವಿಕೆ ಯತ್ನವನ್ನು ವಿಫಲಗೊಳಿಸಿದೆ. ಒಳನುಸುಳುಕೋರರು ಭಾರತೀಯ ಪ್ರದೇಶವನ್ನು ಪ್ರವೇಶಿಸಲು ಪ್ರಯತ್ನಿಸಿದರು, ಆದರೆ ಕಣ್ಗಾವಲಿನಲ್ಲಿದ್ದ ಬಿಎಸ್ಎಫ್ ಪಡೆಗಳು ಅವರ ಪ್ರಯತ್ನ ಯಶಸ್ಸಾಗುವುದನ್ನು ತಡೆಹಿಡಿದು ಒಳನುಸುಳುಕೋರರ ಮೇಲೆ ಗುಂಡು ಹಾರಿಸಿವೆ.
ಒಂದು ವಾರದಲ್ಲಿ ಎರಡನೇ ಬಾರಿಗೆ ಜಮ್ಮು ಅಂತರರಾಷ್ಟ್ರೀಯ ಗಡಿಯಲ್ಲಿ ಒಳನುಗ್ಗಿದವರನ್ನು ಹೊಡೆದುರುಳಿಸಿದ ಘಟನೆ ನಡೆದಿದೆ.
“ಜಮ್ಮುವಿನ ಅರ್ನಿಯಾ ಸೆಕ್ಟರ್ನಲ್ಲಿ, ಬೇಲಿಯನ್ನು ಸಮೀಪಿಸಲು ಪ್ರಯತ್ನಿಸುತ್ತಿರುವಾಗ ಒಬ್ಬ ಒಳನುಸುಳುಕೋರನ ಮೇಲೆ ಗುಂಡು ಹಾರಿಸಲಾಗಿದೆ” ಎಂದು ಬಿಎಸ್ಎಫ್ನ ಮೂಲಗಳು ಮಾಹಿತಿ ನೀಡಿವೆ.
“ನುಸುಳುಕೋರ ಈ ಪ್ರದೇಶವನ್ನು ದಾಟಲು ಪ್ರಯತ್ನಿಸಿದ ವೇಳೇ ಘಟನೆ ಸಂಭವಿಸಿದೆ ಮತ್ತು ಅವನ ನುಸುಳುವಿಕೆಯ ಉದ್ದೇಶವನ್ನು ಖಚಿತಪಡಿಸಿಕೊಳ್ಳಲು ಮತ್ತು ಆತನ ಬಳಿ ಏನೇನು ಇತ್ತು ಎಂದು ನಿರ್ಧರಿಸಲು ಬೆಳಿಗ್ಗೆಯಿಂದಲೇ ಶೋಧ ಕಾರ್ಯಾಚರಣೆಯನ್ನು ನಡೆಸಲು ನಿರ್ಧರಿಸಲಾಗಿದೆ. ಪ್ರದೇಶದ ಸುರಕ್ಷತೆ ಮತ್ತು ಸಮಗ್ರತೆಯನ್ನು ಕಾಪಾಡಿಕೊಳ್ಳಲು ಬಿಎಸ್ಎಫ್ ಹೆಚ್ಚಿನ ಎಚ್ಚರಿಕೆಯಿಂದ ಕಾರ್ಯನಿರ್ವಹಿಸುತ್ತಿದೆ”ಎಂದು ಮೂಲಗಳು ತಿಳಿಸಿವೆ.
ಜುಲೈ 25 ರಂದು, ಬಿಎಸ್ಎಫ್ ರಾಮಗಢ ಗಡಿ ಪ್ರದೇಶದ ಮೂಲಕ ಮಾದಕ ದ್ರವ್ಯಗಳನ್ನು ಕಳ್ಳಸಾಗಣೆ ಮಾಡಲು ಪ್ರಯತ್ನಿಸುತ್ತಿದ್ದ ಪಾಕಿಸ್ತಾನಿ ಕಳ್ಳಸಾಗಣೆದಾರನನ್ನು ಹೊಡೆದುರುಳಿಸಿತು. ಘಟನೆಯ ನಂತರ, ಸುತ್ತಮುತ್ತ ಹುಡುಕಾಟವನ್ನು ನಡೆಸಲಾಯಿತು, ಕಳ್ಳಸಾಗಾಣಿಕೆದಾರನ ಮೃತದೇಹದ ಪಕ್ಕದಲ್ಲಿ ಸುಮಾರು 4.5 ಕಿಲೋಗ್ರಾಂಗಳಷ್ಟು ತೂಕದ ಶಂಕಿತ ಮಾದಕವಸ್ತುಗಳ 4 ಪ್ಯಾಕೆಟ್ಗಳು ಪತ್ತೆಯಾಗಿದ್ದವು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.