ನ್ಯೂಯಾರ್ಕ್: ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ (ಯುಎನ್ಜಿಎ) ವಾರ್ಷಿಕ ಚರ್ಚೆಯಲ್ಲಿ ಉಕ್ರೇನ್ ಮತ್ತು ರಷ್ಯಾ ಕುರಿತು ನಡೆದ ಚರ್ಚೆಯ ಕುರಿತು ವಿಶ್ವಸಂಸ್ಥೆಯಲ್ಲಿನ ಭಾರತದ ರಾಯಭಾರಿ ರುಚಿರಾ ಕಾಂಬೋಜ್ ಅವರು ಮಾತನಾಡಿ, ಉಕ್ರೇನ್ನಲ್ಲಿನ ಸಂಘರ್ಷದ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದರು.
ಯುದ್ಧವನ್ನು ತಕ್ಷಣವೇ ಅಂತ್ಯಗೊಳ್ಳುವಂತೆ ಕರೆ ನೀಡಿದ ಅವರು, ಸಂಘರ್ಷದ ಪರಿಣಾಮವಾಗಿ ನಿರಾಶ್ರಿತರಾದವರ ಬಗ್ಗೆ ಕಳವಳ ವ್ಯಕ್ತಪಡಿಸಿದರು.
ಯುದ್ಧವನ್ನು ತಕ್ಷಣವೇ ನಿಲ್ಲಿಸಲು ಮತ್ತು ಮಾತುಕತೆ ಮತ್ತು ರಾಜತಾಂತ್ರಿಕತೆಗೆ ಮರಳಲು ಭಾರತ ಒತ್ತಾಯಿಸುತ್ತದೆ. ಮಾನವ ಜೀವಗಳಿಗೆ ಬೆಲೆಯನ್ನು ಕಟ್ಟಿ ಯಾವುದೇ ಪರಿಹಾರವನ್ನು ತಲುಪಲಾಗುವುದಿಲ್ಲ ಮತ್ತು ಹಿಂಸಾಚಾರವನ್ನು ಹೆಚ್ಚಿಸುವುದು ಯಾರ ಹಿತಾಸಕ್ತಿಯೂ ಅಲ್ಲ ಎಂದಿದ್ದಾರೆ.
ನಾಗರಿಕರು ಮತ್ತು ಇತರ ಮೂಲಸೌಕರ್ಯಗಳ ಮೇಲಿನ ದಾಳಿಯ ವರದಿಗಳ ಬಗ್ಗೆ ಕಳವಳವನ್ನು ಒತ್ತಿ ಹೇಳಿದ ರಾಯಭಾರಿ ರುಚಿರಾ ಕಾಂಬೋಜ್ ಅವರು ಪ್ರಧಾನಿ ನರೇಂದ್ರ ಮೋದಿಯವರ ಪ್ರಸಿದ್ಧ ಮಾತುಗಳಿಗೆ ಮತ್ತೊಮ್ಮೆ ಧ್ವನಿ ನೀಡಿದ್ದಾರೆ, “ಇದು ಯುದ್ಧದ ಯುಗವಲ್ಲ” ಎಂದು ಒತ್ತಿ ಹೇಳಿದರು. ಈ ಚರ್ಚೆಯಲ್ಲಿ ಭಾರತ ಸಕ್ರಿಯವಾಗಿ ಭಾಗವಹಿಸುತ್ತದೆ ಎಂದು ಹೇಳಿದರು.
🕊️Seeking Peace in #Ukraine:
🇮🇳 India remains deeply concerned about conflict in Ukraine, urging an immediate cessation of hostilities & return to dialogue & diplomacy
☮️ Essential to emphasize that this is not an era of war– PR @ruchirakamboj at #UNGA Annual Debate on Ukraine pic.twitter.com/cIxFBMqKPX
— India at UN, NY (@IndiaUNNewYork) July 18, 2023
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.