ಶ್ರೀನಗರ: ಭಯೋತ್ಪಾದಕರ ಸಹಾನುಭೂತಿ ಹೊಂದಿರುವವರ ವಿರುದ್ಧ ದೊಡ್ಡ ಕ್ರಮ ಕೈಗೊಂಡಿರುವ ಜಮ್ಮು ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಆಡಳಿತವು ಕಾಶ್ಮೀರ ವಿಶ್ವವಿದ್ಯಾಲಯದ ಪಿಆರ್ಒ ಫಹೀಮ್ ಅಸ್ಲಾಂ, ಕಂದಾಯ ಇಲಾಖೆಯ ಅಧಿಕಾರಿ ಮುರಾವತ್ ಹುಸೇನ್ ಮತ್ತು ಪೊಲೀಸ್ ಪೇದೆ ಅರ್ಷಿದ್ ಅಹ್ಮದ್ ಎಂಬ ಮೂವರು ಸರ್ಕಾರಿ ಅಧಿಕಾರಿಗಳನ್ನು ಪಾಕಿಸ್ತಾನ ಮೂಲದ ಭಯೋತ್ಪಾದಕ ಸಂಘಟನೆಗಳ ಪರ ಕೆಲಸ ಮಾಡಿದ ಆರೋಪದಡಿ ಸೇವೆಯಿಂದ ವಜಾಗೊಳಿಸಿದೆ.
ಭಯೋತ್ಪಾದಕರಿಗೆ ಸರಕು ಒದಗಿಸುವುದು, ಭಯೋತ್ಪಾದಕ ಸಿದ್ಧಾಂತವನ್ನು ಪ್ರಚಾರ ಮಾಡುವುದು, ಭಯೋತ್ಪಾದಕರಿಗೆ ಹಣಕಾಸು ಸಂಗ್ರಹಿಸುವ ಕಾರ್ಯದಲ್ಲಿ ಇವರು ತೊಡಗಿದ್ದರು ಎಂದು ಹೇಳಲಾಗಿದೆ. ಪಾಕಿಸ್ತಾನದ ಐಎಸ್ಐ ಮತ್ತು ಭಯೋತ್ಪಾದಕ ಸಂಘಟನೆಗಳ ಪರವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ತನಿಖೆಯು ಸ್ಪಷ್ಟವಾಗಿ ದೃಢಪಡಿಸಿದ ನಂತರ ಎಲ್ಲಾ ಮೂರು ಸರ್ಕಾರಿ ನೌಕರರನ್ನು ಭಾರತದ ಸಂವಿಧಾನದ 311 (2) (ಸಿ) ಅನ್ನು ಅನ್ವಯಿಸಿ ವಜಾಗೊಳಿಸಲು ಸರ್ಕಾರವು ವಜಾ ಮಾಡಿದೆ . ಈ ಮೂವರನ್ನು ವಜಾಗೊಳಿಸುವುದರೊಂದಿಗೆ ಇದೀಗ ವಜಾಗೊಂಡ ಸರ್ಕಾರಿ ನೌಕರರ ಸಂಖ್ಯೆ ಅಲ್ಲಿ 52ಕ್ಕೆ ತಲುಪಿದೆ.
“ಈ ಉದ್ಯೋಗಿಗಳ ಚಟುವಟಿಕೆಗಳು ಕಾನೂನು ಜಾರಿ ಮತ್ತು ಗುಪ್ತಚರ ಏಜೆನ್ಸಿಗಳ ಗಮನಕ್ಕೆ ಬಂದಿವೆ, ಅವರು ರಾಜ್ಯದ ಭದ್ರತೆಯ ಹಿತಾಸಕ್ತಿಗಳಿಗೆ ಹಾನಿಯಾಗುವ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ” ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.