ಜೈಪುರ: ಭಾರತೀಯ ಸೇನೆಯು ರಾಜಸ್ಥಾನದ ಗಡಿ ಪ್ರದೇಶಗಳಾದ ರಾಮ್ಸರ್ನಲ್ಲಿ ಕೃತಕ ಅಂಗಗಳನ್ನು ಬದಲಾಯಿಸುವ ಪ್ರಾಥಮಿಕ ಶಿಬಿರವನ್ನು ನಡೆಸಿದ್ದು, ಇದರಲ್ಲಿ 207 ಜನರನ್ನು ಪರೀಕ್ಷಿಸಲಾಯಿತು.
ಕೃತಕ ಅಂಗಗಳ ಮಾಪನಗಳನ್ನು ತೆಗೆದುಕೊಳ್ಳಲಾಗಿದೆ ಮತ್ತು ವಿಶೇಷ ಅಂಗವೈಕಲ್ಯ ಹೊಂದಿರುವ ವ್ಯಕ್ತಿಗಳಿಗೆ ಕೃತಕ ಅಂಗಗಳನ್ನು ತಯಾರಿಸಲಾಗುತ್ತದೆ. ಬಳಿಕ ಅದನ್ನು ಅವರಿಗೆ ಒದಗಿಸಲಾಗುತ್ತದೆ. ಗಾಲಿಕುರ್ಚಿಗಳು, ಬ್ಲೈಂಡ್ ಸ್ಟಿಕ್ ಮತ್ತು ಊರುಗೋಲುಗಳ ಅವಶ್ಯಕತೆಗಳನ್ನು ಸಹ ಒದಗಿಸಲಾಗುತ್ತದೆ ಎಂದು ವಕ್ತಾರರು ತಿಳಿಸಿದ್ದಾರೆ.
ಭಾರತೀಯ ಸೇನೆಯು ಈ ಉದಾತ್ತ ಉಪಕ್ರಮಕ್ಕಾಗಿ ಲಾಭರಹಿತ ದತ್ತಿ ಸಂಸ್ಥೆಯಾದ ಕಿವಾನಿಸ್ ಕ್ಲಬ್ ಆಫ್ ನವದೆಹಲಿಯೊಂದಿಗೆ ಸಹಯೋಗ ಪಡೆದುಕೊಂಡಿದೆ. ಹಂತ-I ರ ಭಾಗವಾಗಿ, ಉತ್ತಮ ಗುಣಮಟ್ಟದ ಮತ್ತು ಆರಾಮದಾಯಕವಾದ ಕೃತಕ ಅಂಗಗಳನ್ನು ಪ್ರತಿ ರೋಗಿಯ ವೈಯಕ್ತಿಕ ಅಗತ್ಯಕ್ಕೆ ಅನುಗುಣವಾಗಿ ಉಚಿತವಾಗಿ ಕಸ್ಟಮೈಸ್ ಮಾಡಲಾಗುತ್ತದೆ.
ಇದು ಥಾರ್ ಮರುಭೂಮಿಯಲ್ಲಿನ ದೂರದ ಪ್ರದೇಶಗಳು ಮತ್ತು ಅಲ್ಲಿ ಲಭ್ಯವಿರುವ ಮೂಲಸೌಕರ್ಯಗಳನ್ನು ಪರಿಗಣಿಸಿದರೆ ಅತ್ಯಂತ ಕಷ್ಟಕರವಾಗಿ ಬದುಕು ನಡೆಸುತ್ತಿರುವ ವ್ಯಕ್ತಿಗಳಿಗೆ ಸಹಾಯ ಮಾಡುತ್ತದೆ. ಹಂತ-II ರಲ್ಲಿ, ಅಂಗಗಳ ವಿತರಣೆ ಮತ್ತು ಫಿಟ್ಮೆಂಟ್ ಅನ್ನು ಸರಿಸುಮಾರು ಎರಡು ತಿಂಗಳೊಳಗೆ ಕೈಗೊಳ್ಳಲಾಗುತ್ತದೆ.
ಈ ಉಪಕ್ರಮಕ್ಕೆ ಸ್ಥಳೀಯ ಜನರಿಂದ ಬಹಳ ಮೆಚ್ಚುಗೆ ಮತ್ತು ಪ್ರಶಂಸೆ ವ್ಯಕ್ತವಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.