ಮುಂಬಯಿ: ಪ್ರತಿ ಸಲ ಕುಂಭಮೇಳದಲ್ಲಿ ನಾಪತ್ತೆ ಸೇರಿದಂತೆ ಇತರ ಅವಘಢಗಳು ಸಾಮಾನ್ಯವಾಗಿ ಸಂಭವಿಸುತ್ತಿತ್ತು. ಆದರೆ ಈ ಬಾರಿಯ ನಾಸಿಕ್ ಕುಂಭಮೇಳದಲ್ಲಿ ಒಬ್ಬನೇ ಒಬ್ಬ ವ್ಯಕ್ತಿಯೂ ನಾಪತ್ತೆಯಾಗಿಲ್ಲ. ಇದರ ಸಂಪೂರ್ಣ ಕ್ರೆಡಿಟ್ ಪೊಲೀಸರಿಗೆ ಸಲ್ಲಬೇಕು.
ಸಿಸಿಟಿ, ಸಾರ್ವಜನಿಕ ಘೋಷಣೆ, ಮೊಬೈಲ್ ಆಪ್ಗಳ ಸದ್ಭಳಕೆಯಿಂದ ಈ ಬಾರಿ ನಾಪತ್ತೆ ಪ್ರಕರಣಗಳು ಸಂಭವಿಸಿಲ್ಲ, ಅಲ್ಲದೇ ನಾಸಿಕ್ ಮತ್ತು ತ್ರಯಂಬಕೇಶ್ವರದಲ್ಲಿ 24 ಸಾವಿರ ಪೊಲೀಸರನ್ನು ನಿಯೋಜನೆ ಮಾಡಲಾಗಿತ್ತು.
ಅಷ್ಟೇ ಅಲ್ಲದೇ 160 ಸ್ವಯಂಸೇವಕರು ನಾಪತ್ತೆಯಾದವರನ್ನು ಮತ್ತೆ ಅವರ ಸಂಬಂಧಿಕರಿಗೆ ಸೇರಿಸುವ ಕಾರ್ಯವನ್ನು ನಿರಂತರವಾಗಿ ಮಾಡುತ್ತಿದ್ದರು. ಯಾವುದೇ ಮಗು ಅನಾಥವಾಗಿರುವುದು ಕಂಡ ತಕ್ಷಣ ಅದರ ಎಲ್ಲಾ ಮಾಹಿತಿಗಳು ವಿವಿಧ ಭಾಷೆಗಳಲ್ಲಿ ಘೋಷಣೆ ಮಾಡುತ್ತಿದ್ದರು. ಅಲ್ಲದೇ ನಾಪತ್ತೆಯಾದವರ ಮಾಹಿತಿ ತಿಳಿದ ಕೂಲಡೇ ಹುಡುಕುವ ಪ್ರಯತದ್ನ ಮಾಡಿದ್ದರು. ಇದರಿಂದಾಗಿ ಬೇರ್ಪಟ್ಟವರು ತಕ್ಷಣವೇ ತಮ್ಮ ತಮ್ಮವರ ಬಳಿ ತಲುಪುತಿದ್ದರು.
ಈ ಬಾರಿ ನಾಸಿಕ್ನಲ್ಲಿ ಒಟ್ಟು 1,553 ಮಂದಿ ಮತ್ತು ತ್ರಯಂಬಕೇಶ್ವರದಲ್ಲಿ 855 ಮಂದಿ ಮಿಸ್ ಆಗಿದ್ದರು. ಆದರೆ ಅವರೆಲ್ಲರನ್ನೂ ಪತ್ತೆ ಹಚ್ಚಿ ಅವರ ಮನೆ ಸೇರಿಸಲಾಗಿದೆ.
ಭಾರತ್ ಭಾರತಿ ಎಂಬ ಎನ್ಜಿಒ ಸಂಸ್ಥೆ ಜನಜಂಗುಳಿಯನ್ನು ನಿಯಂತ್ರಿಸಲು ಮಾಡಲು ಕಂಟ್ರೋಲ್ ರೂಂ ಸ್ಥಾಪಿಸಿತ್ತು ಮತ್ತು ನಾಪತ್ತೆಯಾದವರ ಮೇಲೆ ಕಣ್ಣಿಟ್ಟಿತ್ತು. ಶಾಹಿ ಸ್ನಾನದ ವೇಳೆ ಈ ಸಂಸ್ಥೆಗೆ ಒಟ್ಟು 4 ಸಾವಿರ ಕರೆಗಳು ಬಂದಿದ್ದವು, ಇದರದೇ 160 ಸ್ವಯಂಸೇವಕರು ಯಾರೊಬ್ಬರೂ ಮಿಸ್ ಆಗದಂತೆ ಕುಂಭಮೇಳದುದ್ದಕ್ಕೂ ಎಚ್ಚರಿಕೆ ವಹಿಸಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.